Tuesday, February 28, 2012

ಚೇತರಿಸಿಕೊಂಡ "ನಿತ್ಯೋತ್ಸವ ಕವಿ" ಮತ್ತು ಹೃದಯವಂತಿಕೆ


ಕವಿ ನಿಸಾರ್ ಅಹಮದ್
 ನಿತ್ಯೋತ್ಸವ ಕವಿ ಎಂದೇ ಕರೆಸಿಕೊಂಡಿರುವ ಕವಿ ಪ್ರೊ.ನಿಸಾರ್ ಅಹಮದ್ ಅವರು ಹುಷಾರ್ ಇಲ್ಲದಾಗಿನಿಂದ ಅವರನ್ನು ಇಷ್ಟಪಡುವ, ಪ್ರೀತಿಸುವ, ಅವರ ಬರಹಗಳಿಂದ ಪ್ರಭಾವಿತರಾಗಿರುವ ಲೆಕ್ಕವಿಲ್ಲದಷ್ಟು ಕವಿ ಪ್ರೇಮಿಗಳಿಗೆ ದಿಗಿಲು ಬದಿದಂತಾಗಿದೆ. ನನಗೆ ತಿಳಿದ ಮಟ್ಟಿಗೆ ಎಸ್ಟೋ ಜನ ಅವರು ಚೇತರಿಸಿಕೊಳ್ಳಲಿ ಎಂದು ಪೂಜೆ ಮಾಡಿದ್ದಾರೆ (ಆದರೆ ಅದು ಎಲ್ಲೂ ಸುದ್ದಿಯಾಗಿಲ್ಲ). ಅಲ್ಲಾನನ್ನು ಬೇಡಿದ್ದರೆ, ಮಂದಿರದಲ್ಲಿ ಪ್ರಾರ್ಥಿಸಿದ್ದಾರೆ. ನಿಸಾರ್ ಸರ್ ಹುಷಾರಿ ಬರಲಿ ಎಂದು ಹಾರೈಸಿದ್ದಾರೆ. ಆಧಾರ ಫಲವೋ ಏನೋ ಎಂಬಂತೆ ದಿನಗಳೆದಂತೆ ನಿಸಾರ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ.
ನಿಸಾರ್ ಕೇವಲ ಕವಿ ಅಥವಾ ಸಾಹಿತಿ ಮಾತ್ರವಲ್ಲ, ಉತ್ತಮ ಸಹೃದಯಿ. ಮಗು ಮನಸ್ಸಿನ "ಕವಿರಾಜ". ಅವರ ಅಂಥ ಗುಣದಿಂದಲೇ ಇಂದು ಅವರನ್ನ ಕನ್ನಡ ನಾಡು ಮಾತ್ರವಲ್ಲ ಇತರ ರಾಜ್ಯಗಳು, ಅಮೇರಿಕ, ಲಂಡನ್ದು, ಬೈ, ಕುವೈತ್ ಮುಂತಾದ ದೇಶಗಳಲ್ಲೂ ಅವರನ್ನು ಪ್ರೀತಿಸುವ ಜನರಿದ್ದಾರೆ. ಮೊದಲನೆಯದಾಗಿ ಅವರು ಚೇತರಿಸಿಕೊಳ್ಳಲಿ ಎಂದು ಹರಸಿದ ಎಲ್ಲ ಕವಿಪ್ರೀತಿ ಹೃದಯಗಳಿಗೆ ಅವರ ಹಾಗೂ ಅವರ ಶಿಷ್ಯನಾದ ನನ್ನ ಪರವಾಗಿ ಧನ್ಯವಾದಗಳು.
ನಿಸಾರ್ ಜೊತೆ ಸಮಾಲೋಚನೆ ವೇಳೆ.
ನಿಜ ಹೇಳ ಬೇಕೆಂದರೆ ಅವರು ನನ್ನಗೆ "ನಿತ್ಯೋತ್ಸವ" ಕವಿತೆಯ ಮೂಲವೇ ಪರಿಚಯವಾದದ್ದು. ಅಲ್ಲಿಂದ ನಿರಂತರವಾಗಿ ಅವರ ಸನಿಹದಲ್ಲಿಯೇ ಇದ್ದು ಅವರಿಂದ ಸಾಕಷ್ಟು ಬುದ್ದಿವಾದ ಕೇಳಿಸಿಕೊಂಡು ಬೆಳೆದವನು ನಾನು. ಪುಟ್ಟ ಮಗುವೊಂದು ಒಂದು ಹೂವು ಹಿಡಿದು "ಹ್ಯಾಪಿ ಬರ್ತ್ ಡೇ... ತಾತ" ಎಂದಾಗಲು ಅದನ್ನು ಎತ್ತಿ ಒಂದು ಮುತ್ತು ಜತೆಗೊಂದು ಜೇಬಲ್ಲಿದ್ದ ಚಾಕೊಲೆಟ್ ಕೊಟ್ಟು "ನೂರು ಕಾಲ ಬಾಳಪ್ಪ" ಎಂದು ಹರಸುವ ಮಧುರ ಮನಸ್ಸು ಅವರದ್ದು. ಅವರಿಗಿಂತ ಹಿರಿಯರಾದವರು ಅವರನ್ನು ನೋಡಲು ಹೋದಾಗಲೂ "ಇಲ್ಲಿವರೆಗೆ ಯಾಕೆ ಈ ವಯಸ್ಸಲ್ಲಿ ಬರೋಕೆ ಹೋದ್ರಿ? ಒಂದು ಫೋನ್ ಮಾಡಿದ್ರೆ ಸಾಕಿತ್ತು ಅಲ್ವ... ನಿಮ್ಮ ಆರೋಗ್ಯ ಚನ್ನಾಗಿ ನೋಡಿಕೊಳ್ಳಿ" ಎಂದು ಕಾಲಟಿ ತೋರುತ್ತಿದ್ದ ತಾಯಿ ಪ್ರೀತಿ ಅವರದು.
ನಿಸಾರ್ ಹಾಗು ಅವರ ಮಡದಿ
 ಷಾನವಾಜ್ ಬೇಗಂ ಜೊತೆ ನಾನು
ಅಂಥ  ಕವಿ ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ನ್ಯುಮೋನಿಯಕ್ಕೆ ಚಿಕಿತ್ಸೆ ಪಡೆಯಲು ದಾಖಲಾದಾಗ ನನಗಂತೂ ಆಕಾಶವೇ ತಲೆ ಮೇಲೆ ಬಿದ್ದ ಅನುಭವ. ಅವರು ಆಸ್ಪತ್ರೆಗೆ ಸೇರಿದಾಗಿನಿಂದ ನಿತ್ಯ ನಾನು ಅವರ ಸಂಪರ್ಕದಲ್ಲಿದ್ದೇನೆ, ಅವರ ಆರೋಗ್ಯ ವಿಚಾರಿಸುತ್ತಿದ್ದೇನೆ. ಅವರಿಗೆ ಚಿಕಿತ್ಸೆ ಕೊಡುತ್ತಿರುವ ಮೂವರು ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಅವರ ಪ್ರಕಾರ ಈಗ ನಿಸಾರ್ ಸರ್ ಚೇತರಿಸಿಕೊಳ್ಳುತ್ತಿದ್ದಾರೆ. ಇಸಿಯೂನಿಂದ ಈಗ ಅವರನ್ನು ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಆದರೆ ಅಲ್ಲಿ ಅವರನ್ನು ನೋಡಲು ಬರುವರಿಂದ ಅವರು ದೂರ ಇದ್ದಾರೆ ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ. ಕಾರಣ ಇಷ್ಟೇ, ಬಂದವರನ್ನು ನೋಡಿದ ತಕ್ಷಣ ನಿಸಾರ್ ಸರ್ ಸುಮ್ಮನೆ ಇರುವುದಿಲ್ಲ. ಅವರ ಜೊತೆ ಮಾತಿಗೆ ಇಳಿಯುತ್ತಾರೆ. ಅವರಿಗಿಂತ ಮೊದಲೇ ಇವರೇ ಬಂದವರ ಆರೋಗ್ಯ ವಿಚಾರಿಸುತ್ತಾರೆ. ಇದೆ ವೈದ್ಯರಿಗೆ ಸವಾಲಾಗಿದೆ. ಆದರು ಸಂದರ್ಶಕರನ್ನು ಸಾಕಷ್ಟು ಅವೈಡ್ ಮಾಡಿದ್ದಾರೆ. ಇದು ಕೇವಲ ಅವರ ಆರೋಗ್ಯಕ್ಕಾಗಿ, ಕವಿ ಬೇಗ ಚೇತರಿಸಿಕೊಳ್ಳಲಿ ಎಂಬ ಸದುದ್ದೇಶದಿಂದ. ಹಾಗಾಗಿ ವೈದ್ಯರಿಗೆ ಥ್ಯಾಂಕ್ಸ್ ಹೇಳಲೇಬೇಕು.
ಅವರ 75 ನೇ ವರ್ಷದ ನೆನಪಿಗೆ ನೀಡಿದ
 "ನಿತ್ಯೋತ್ಸವ" ಸಿಡಿ (ಚಿತ್ರ: ರವೀಂದ್ರ ನಾಯಕ್) 
ನಿತ್ಯ ಅವರನ್ನು ನೋಡಲು ಬಂದವರ ಜೊತೆ ನಿಸಾರ್ ಮಾತನಾಡದೆ ಇರಲಾರರು. ಮೊನ್ನೆ ಬೆಳಗ್ಗೆ ನಿಸಾರ್ ಅವರನ್ನು ನೋಡಲು ಎಂದಿನಂತೆ ಹೊರತು ನಿಂತಾಗ ನನ್ನ ಮಡದಿ ಉಷಾ "ನಾನು ಬರುತ್ತೇನೆ, ಅವರನ್ನೊಮ್ಮೆ ನೋಡಬೇಕು ಅನಿಸುತ್ತಿದೆ" ಎಂದು ಹಟಕ್ಕೆ ಬಿದ್ದವಳಂತೆ ಆಡತೊಡಗಿದಳು.  ಸರಿ ಇನ್ನೇನು ಮಾಡುವುದು ಎಂದು ಕರೆದುಕೊಂಡು ಹೋದೆ. ನಾವು ಅವರ ವಾರ್ಡ್ಗೆ ಕಾಲಿಡುತ್ತಿದ್ದಂತೆಯೇ ನನ್ನ ಮಡದಿಯನ್ನು ಮೊದಲೇ ಗೊತ್ತಿದ್ದಿದ್ದರಿಂದ ಹೇಗಿದ್ದೀಯಮ್ಮ, ಆರೋಗ್ಯನ... ಎಂದು ವಿಚಾರಿಸಿದರು. ಅವಳಿಗೆ ಸ್ವಲ್ಪ ಕಸಿವಿಸಿ ಆಯಿತು "ಆಸ್ಪತ್ರೆಯಲ್ಲಿರುವವರು ನೀವು, ನಾವು ನಿಮ್ಮ ಆರೋಗ್ಯ ವಿಚಾರಿಸಲು ಬಂದಿದ್ದು. ನೀವು ದಯಮಾಡಿ ಹೇಗೆಲ್ಲ ಮಾತನಾಡದೆ ವಿಶ್ರಾಂತಿ ತೆಗೆದುಕೊಳ್ಳಿ" ಎಂದಳು. ನಾನು ಕೂಡ ಅದನ್ನೇ ಬೆಂಬಲಿಸಿದೆ. ಆಗ ವೈದ್ಯರು ಹತ್ತಿರ ಬಂದು ಅವರು ಹೇಳಿದ್ದು ಸರಿ ಎಂದರು. ಆನಂತರ ಚಿಕತ್ಸೆ ಮುಂದುವರಿಯಿತು...
ಹೀಗೆ ಸದಾ ಬೇರೆಯವರಿಗೆ ಒಳಿತನ್ನೇ ಬಯಸುವ ಕವಿ ನಿಸಾರ್, ತಮ್ಮ ಬಗ್ಗೆ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ದು ನಿಜ. ಅದೂ ಈ ಇಲಿ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದದ್ದು ತೀರ ಮುಖ್ಯ. ಅದನ್ನು ಬದಿಗಿಟ್ಟು ಅವರು ಹೆಚ್ಚು ಓಡಾಟದಲ್ಲಿ ತೊಡಗಿದ್ದರು. ಅದು ಜನರ ಪ್ರೀತಿಗಾಗಿ. ಆ ಪ್ರೀತಿಯೇ ಅವರನ್ನು ಇಂದು ಕಾಪಾಡಿದೆ. ಆ ಪ್ರೀತಿ ನೀಡಿದ ನಿಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು...

Wednesday, February 8, 2012

ಸದನದಲ್ಲಿ "ಕಾಮ ಕಲಾಪ": ನಾವು ನೀವು ಮತ್ತು ಕರ್ನಾಟಕದ ಮಾನ

ಪ್ರಜಾಪಭುತ್ವದ ನಿಜವಾದ ದೇಗುಲ ವಿಧಾನ ಸೌಧ. ಅಲ್ಲಿ ಏನು ನಡೆಯಬಾರದಿತ್ತೋ ಅದು ನಿನ್ನೆ (ಫೆ.೭) ನಡೆದು ಹೋಗಿದೆ. ಜತೆಗೆ ಅದೇ ದಿನ ಹೋರಾಟಗಾರ್ತಿ ಮೇಧಾ ಪಾಟ್ಕರ್ ರಾಜ್ಯ ಸರಕಾರದ "ಬಸವಶ್ರೀ ಪ್ರಶಸ್ತಿ" ಯನ್ನು ತಿರಸ್ಕರಿಸಿದ್ದಾರೆ. ಅಲ್ಲಿಗೆ ಒಟ್ಟೊಟ್ಟಿಗೆ ಎರಡು ರೀತಿಯಲ್ಲಿ ಕರ್ನಾಟಕದ ಮಾನ ಹಾರಜಿಗೆ ಬಿದ್ದಿದೆ!!
ವಿಧಾನ ಸೌಧದಲ್ಲಿ ನಡೆದ "ಕಾಮ ಕಲಾಪ"ಕ್ಕೆ ಸಂಬಂದಿಸಿದಂತೆ ಮೂವರು ಸಚಿವರ ತಲೆ ದಂಡ ಕೂಡ ಆಗಿದೆ ನಿಜ. ಆದರೆ ಅವರು ಮೊದಲು ಶಾಸಕರು, ಆಮೇಲೆ ಸಚಿವರು. ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಅಲ್ಲಿಗೆ ಈ ಪ್ರಕರಣ ಮುಗಿಯಿತ...? ಒಂದು ವೇಳೆ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದರೆ ಮತ್ತೆ ಚುನಾವಣಾ, ಅಲ್ಲೊಂದಿಷ್ಟು ಹೆಂಡ- ಹಣದ ನರ್ತನ. ಮತ್ತೆ ಅದೇ ಜನಪ್ರತಿನಿಧಿಗಳು. ಆನಂತರ ಮತ್ತೆ ಯಥಾ: ಸ್ಥಿತಿ. ಇಷ್ಟೇನೆ...? ಇಂಥದ್ದೊಂದು ಪ್ರಶ್ನೆಯನ್ನ ಈ ಸಮಾಜದಲ್ಲಿ ಬದಕುವ ನಾವೆಲ್ಲರೂ ನಮಗೆ ನಾವೇ ಹಾಕಿಕೊಳ್ಳಬೇಕಿದೆ.
ಮೂರು ತಿಂಗಳ ಹಿಂದೆ ನಾನು ನನ್ನ ಸ್ನೇಹಿತರೊಬ್ಬರ ಹಳ್ಳಿ ಮನೆಗೆ ಹೋಗಿದ್ದೆ. ಅಲ್ಲಿ ಒಂದು ಕುಟುಂಬದ ನಡುವೆ ಹಹಲ ದೊಡ್ಡದಾಗಿ ಜಗಳ ನಡೆಯುತ್ತಿತ್ತು. ನಾನು ಕುತೂಹಲಕ್ಕಾಗಿ ಜತೆಗೆ ಅದು ನನ್ನ ಸ್ನೇಹಿತನ ಸಂಬಂದಿಗಳ ಜಗಳ ಎನ್ನುವ ಕಾರಣಕ್ಕೆ ಅಲ್ಲಿ ಹೋದೆ. ಆಸ್ತಿಗಾಗಿ ಅಣ್ಣ ತಮ್ಮನ ನಡುಉವೆ ಜಗಳ ನಡೆದಿತ್ತು. ತಮ್ಮ ಅಣ್ಣನ ತಲೆ ಒಡೆದಿದ್ದ...! ಅದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರಲಿಲ್ಲ. ಬದಲಿಗೆ ಗ್ರಾಮದವರೇ ಅದನ್ನು ಪಂಚಾಯಿತಿ ಮೂಲಕ ಬಗೆಹರಿಸೋಣ, ಊರಿಗೆ ಪೊಲೀಸರು ಬರುವುದು ಬೇಡ ಎಂದು ತೀರ್ಮಾನಿಸಿ ಪಂಚಾಯಿತಿ ಕರೆದಿದ್ದರು. ಆಗ ತಮ್ಮ ಅಣ್ಣನ ತಲೆ ಒಡೆದಿದ್ದು. ಆಟ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದುದು ಎಲ್ಲವು ಕಣ್ಣ ಮುಂದೆ ಇತ್ತು. ಜತೆಗೆ ಜಗಳ ನಡೆಯುವಾಗ ಅದನ್ನ ನೋಡಿದವರು ಇದ್ದರು. ಆದರು ಆ ತಮ್ಮ ಪಂಚಾಯಿತಿಯಲ್ಲಿ ನನ್ನ ಅಣ್ಣನ ತಲೆಯನ್ನು ನಾನು ಒದೆದಿಲ್ಲ ಇದೆಲ್ಲ ಸುಳ್ಳು ಕಥೆ, ನಾನು ಯಾವ ದೇವರ ಮೇಲಾದ್ರು ಪ್ರಮಾಣ ಮಾಡಿ ಹೇಳ್ತೇನೆ. ನಾನು ಆ ತಪ್ಪು ಮಾಡಿಲ್ಲ ಎನ್ನುತ್ತಿದ್ದ.
ಇದರಿಂದ ಸಿಟ್ಟಿಗೆದ್ದ ಪಂಚಾಯಿತಿಯ ಹಿರಿಯರು "ಅಲ್ಲಯ್ಯ ಊರವರೆ ಎಸ್ಟೋ ಜನ ನೀವು ಜಗಳ ಆಡಿದ್ದು, ನೀನು ತಲೆ ಒಡೆದಿದ್ದು ಎಲ್ಲ ನೋಡಿದಾರೆ. ಆದರು ಹೀಗೆ ಹೇಳ್ತಿಯಲ್ಲ" ಎಂದಾಗ ಆಟ ಹೇಳಿದ " ಈ ರಾಜ್ಯದ ಮುಕ್ಯಮಂತ್ರಿಯಾದವ್ರೆ ದೇವರ ಮೇಲೆ ಆನೆ ಮಾಡಿ ಹೇಳ್ತಾರೆ, ನಾನು ಆಣೆ ಮಾಡಿ ಹೇಳಿದ್ರೆ ತಪ್ಪೇನು. ನಾನು ಆ ಕೆಲಸ ಮಾಡೇ ಇಲ್ಲ..." ಎಂದ. ನಾನು ಮಾತ್ರವಲ್ಲ ಅಲ್ಲಿ ನೆರೆದ ಅಷ್ಟೂ ಜನ ಅವನ ಮಾತಿನಿಂದ ಬೆಚ್ಚಿ ಬಿದ್ದಿದ್ದರು.( ಇದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರ ಆಣೆ ಪ್ರಮಾಣದ ಎಫೆಕ್ಟ್.)
****
ಇದಾಗಿ ಸ್ವಲ್ಪ ದಿನದ ಹಿಂದೆ... ಅದೇ ಊರಿನಲ್ಲಿ ಮತ್ತೊಂದು ಘಟನೆ ನಡೆದಿತ್ತು. ಅಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆಗ ಈ ವಿಚಾರ ಪಂಚಾಯಿತಿಗೆ ಬಂದಿತ್ತು. ಆಗ ಆ ಪ್ರಕರಣದಲ್ಲಿ ಅದಕ್ಕೂ ಕೂಡ ಗ್ರಾಮದ ಸಾಕಷ್ಟು ಜನ ಸಾಕ್ಷಿಯಿದ್ದರು. ಆದರೂ ಪಂಚಾಯಿತಿಯಲ್ಲಿ ಅವರಿಬ್ಬರೂ "ಈ ವಿಚಾರ ಆಕೆಯ ಗಂಡನಿಗೂ ಗೊತ್ತು. ಹೌದು, ಇದು ನಮ್ಮ ವಯಕ್ತಿಕ ವಿಚಾರ. ಇದು ನನ್ನ ಅವಳ ಇಷ್ಟ, ಕೇಳೋಕೆ ನೀವ್ಯಾರು?" ಎಂದು ಒಮ್ಮೆ ಹೇಳುತ್ತಿದ್ದನಂತೆ, ಇನ್ನೊಮ್ಮೆ ನಮ್ಮಿಬ್ಬರ ನಡುವೆ ಅಂತ ಯಾವ "ಕ್ರಿಯೆ" ಯೂ ನಡೆದೇ ಇಲ್ಲ. ನಾವು ನಿರಪರಾದಿಗಳು ಎಂದು ವಾದಿಸುತ್ತಿದ್ದರಂತೆ. ಇದೆಲ್ಲವನ್ನು ನೋಡಿ ಅಲ್ಲಿಯ ಜನ ಬೇಸತ್ತು ಹೋಗಿದ್ದಲ್ಲದೇ. ನಮ್ಮ ಊರು ಈ ಮಟ್ಟಕ್ಕೆ ಹಾಲಯಿತಲ್ಲ ಎಂದು ನೊಂದುಕೊಲ್ಲುತ್ತಿದ್ದಾರೆ. (ಇದು ಬಹುಶ: ರೇಣುಕಾಚಾರ್ಯ ಹಾಗು ಹಾಲಪ್ಪನ ಕಾಮ ಪ್ರಕರಣದ ಎಫೆಕ್ಟ್)
****
ಇನ್ನು ಮುಂದೆ ಹರೆಯದ ಯುವಕರು ತಮ್ಮ ಮೊಬೈಲ್ ಗಳಲ್ಲಿ ನೀಲಿ ಚಿತ್ರಗಳನ್ನು ಮನೆಯಲ್ಲೇ ನೋಡುತ್ತಾ ಇರುವಾಗ ಅಪ್ಪ ಅಮ್ಮ ಕೇಳಿದರೆ "ನೋಡಿದರೆ ತಪ್ಪೇನು...!?" ಎಂದರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಇದೆಲ್ಲ. ರಾಜ್ಯ ಸರಕಾರದ ಹಾಗು ನಮ್ಮ ಜನಪ್ರತಿನಿಧಿಗಳ ಮಾದರಿಗಳು.
ಹಿಂದೆ ಸಿನಿಮಾ ರಂಗದ ನಾಯಕ, ನಾಯಕಿಯರನ್ನು ಅನುಕರಿಸುವ ಸಂಪ್ರದಾಯ ಇತ್ತು. ಆದರೆ ಈಗ ಜನ "ಚುನಾವಣೆಯಲ್ಲಿ ಆಯ್ಕೆಯಾದ ನಾಯಕರು"ಗಳನ್ನೂ ಬಹು ಬೇಗ ಅನುಕರಿಸುತ್ತಿದ್ದಾರೆ. ಅವರೇ ಇವರಿಗೆ ನಾಯಕರಾಗುತ್ತಿದ್ದಾರೆ. ಇಂಥ ಸಂಧರ್ಭದಲ್ಲಿ ತಳಮಟ್ಟದ ಜನ ಸಮುದಾಯವನ್ನು, ಸಮಾಜವನ್ನು ತಮ್ಮ ಸಚ್ಚಾರಿತ್ರ್ಯದ ಮೂಲಕ ಒಳ್ಳೆಯ ದಿಕ್ಕಿನ ಕಡೆಗೆ ನಡೆಸಿಕೊಂಡು ಹೋಗಬೇಕಾದ ಜನಪ್ರತಿನಿದಿಗಳು ಅವರನ್ನು ಹೇಗೆ ದಿಕ್ಕು ತಪ್ಪಿಸಿ, ತಾವು ಮಾಡುತ್ತಿರುವುದೇ ಸರಿ ಎಂದು ವಾದಿಸುವ ಕ್ರಮ ಇದೆಯಲ್ಲ ಅದಕ್ಕಿಂತ ಬೇರೆ ನಾಚಿಕೆಗೇಡಿನ ಕೆಲಸ ಇನ್ನೊಂದಿಲ್ಲ ಎನಿಸುತ್ತದೆ.
ಈ ಬಿಜೆಪಿ ಸರಕಾರ ಬಂದಂದಿನಿಂದ ಇಲ್ಲಿರುವ ಸಚಿವ, ಶಾಸಕರಿಗೆ ಅರ್ಧ ರಾತ್ರಿಯಲ್ಲಿ ಐಶ್ವರ್ಯ ಬಂದ ಹಾಗಾಗಿದೆ. ಅದಕ್ಕಾಗಿ ಇವರೆಲ್ಲ ಏನು ಮಾಡಿದರು ಅದು ಸರಿ ಎನ್ನುವಂತಾಗಿದೆ. ಸಚಿವ ರೇಣುಕಾಚಾರ್ಯ ತಮ್ಮ ಹಾಗು ಜಯಲಕ್ಷ್ಮಿ ಸೆಕ್ಸ್ ಪ್ರಕರಣವನ್ನು ಸಮರ್ತಿಸಿಕೊಂಡು ಮಂತ್ರಿಯಾದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಏನೇ ತಪ್ಪು ಮಾಡಿದರು ಅದು ಸರಿ ಎಂದು ಭಂಡತನದಲ್ಲಿ ವಾದಿಸುತ್ತಲೇ ಕೆಳಗಿಳಿದರು. ಹಾಲಪ್ಪ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ನಾನು "ಮಾಡೇ ಇಲ್ಲ" ಎಂದು ವಾದಿಸುತ್ತಲೇ ಹೋದರು. ಕಟ್ಟಾ, ಜನಾರ್ಧನ ರೆಡ್ಡಿ ತಾವು ಯಾವ ತಪ್ಪೂ ಮಾಡಿಲ್ಲ. ಇದು ಪ್ರತಿ ಪಕ್ಷಗಳ ಕೈವಾಡ ಎಂದು ತಿಪ್ಪೆ ಸಾರಿಸಲು ಯತ್ನಿಸಿ ಜೈಲು ಸೇರಿದರು.
ಮೊನ್ನೆ ಮೊನ್ನೆಯಷ್ಟೇ ಕರಾವಳಿಯಲ್ಲಿ ನಡೆದ ಸೈಂಟ್ ಮೇರೀಸ್ ದ್ವೀಪದಲ್ಲಿ ನಡೆದ ರೇವು ಪಾರ್ಟಿಯನ್ನು ಮುಖ್ಯಮಂತ್ರಿ ಸದಾನದ ಗೌಡ "ಇದು ಪ್ರವಾಸೋದ್ಯಮದ ಸಂಸ್ಕೃತಿ" ಇಲ್ಲಿ ಯಾವುದೇ ಅನಾಚಾರ ನಡೆದಿಲ್ಲ ಎಂದು ಸಮರ್ತಿಸಿಕೊಂಡರು. ಅದರ ಬೆನ್ನಲ್ಲೇ ಈಗ ಸಚಿವರಾದ ಲಕ್ಷ್ಮಣ ಸವದಿ "ಸಹಕಾರ" ದಿಂದ ಸಿ.ಸಿ.ಪಾಟೀಲ್ ಹಾಗು ಕೃಷ್ಣ ಪಾಲೆಮಾರ್ ವಿಧಾನ ಸೌಧದಲ್ಲಿಯೇ ನೀಲಿ ಚಿತ್ರ ವೀಕ್ಷಣೆ ಮಾಡಿ "ಹೊಸ ಸಂಸ್ಕೃತಿ" ಗೆ ನಾಂದಿ ಹಾಡಿದ್ದಾರೆ. ಜೊತೆಗೆ ಅದು ತಪ್ಪೇ ಅಲ್ಲ, ನಾವು ನಿರಪರಾದಿಗಳು. ಇದು ಮಾದ್ಯಮಗಳ ಪಿತೂರಿ ಎನ್ನುವಂತೆ ನಾಚಿಕೆ ಬಿಟ್ಟು ಸಮರ್ಥಿಸಿಕೊಂಡಿದ್ದಾರೆ! ಜೊತೆಗೆ ಅದಕ್ಕೆ ಮುಸ್ಲಿಂ ದೇಶದಲ್ಲಿ ಒಬ್ಬ ಮಹಿಳೆಯ ಮೇಲಿನ ದೌರ್ಜನ್ಯವನ್ನು ವೀಕ್ಷಿಸುತ್ತಿದ್ದೆ ಎಂದು ಹೇಳುವ ಮೂಲಕ ಇಲ್ಲೂ ಕೂಡ ತಮ್ಮ ಕೊಮುವಾದಿತನವನ್ನು ಪ್ರದರ್ಶಿಸಲು ಮುಂದಾಗಿ ಸೋತಿದ್ದಾರೆ.
ಅಲ್ಲಿಗೆ ಬಿಜೆಪಿಯ ಒಳಗೆ "ನಿಜ ರಾಮನಿಲ್ಲ" ಇಲ್ಲಿರುವುದು "ಕಾಮ" ಮಾತ್ರ ರಾವನಿನ ಹೊಲಿಕೆಗೂ ಇವರು ಸಮರ್ತರಲ್ಲ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ.
ಇದಕ್ಕೆ ಸರಿ ಹೊಂದುವಂತೆ ಬಿಜೆಪಿಯ ರಾಜ್ಯಾದ್ಯಕ್ಷ ಈಶ್ವರಪ್ಪ, ಮುಖ್ಯ ಮಂತ್ರಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರು "ಅವರೇ ಸ್ವಯಂಪ್ರೇರಿತರಾಗಿ ರಾಜೆನಾಮೆ ನೀಡಿದ್ದಾರೆ" ಎಂದು ಹೇಳುವ ಮೂಲಕ ತಿಪ್ಪೆ ಸಾರಿಸಲು ಯತ್ನಿಸುತ್ತಿದ್ದಾರೆ.
ಪಕ್ಷೇತರ ಶಾಸಕರನ್ನು ರಾತ್ರೋ ರಾತ್ರಿ ವಜಾಗೊಳಿಸಿ ತಮ್ಮದು ಸಮರ್ಥ ನಿರ್ಧಾರ ಎಂದು ಹೇಳಿಕೊಂಡಿದ್ದ ಸ್ಪೀಕರ್ ಭೂಪಯ್ಯ ಕೂಡ ಮಾಧ್ಯಮದಲ್ಲಿ ಅಸ್ಟೆಲ್ಲ ಸುದ್ದಿಯಾಗಿದ್ದರು "ಅದು ನನ್ನ ಗಮನಕ್ಕೆ ಬಂದಿಲ್ಲ" ಎಂದರು. ಆನತರ "ಕಾನೂನು ಏನು ಹೇಳುತ್ತದೆ ನೋಡಿ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ" ಎಂದರು. ಅಂದರೆ ಅಲ್ಲಿ ಸ್ಪೀಕರ್ ಗೂ ಸಂಪೂರ್ಣ ಅಧಿಕಾರ ಇಲ್ಲ ಎನ್ನುವುದು ಶ್ರೀರಾಮುಲು ಪ್ರಕರಣದ ನಟರ ಮತ್ತೊಮ್ಮೆ ಸಾಬೀತಾಗಿದೆ ಇಲ್ಲವೇ ಸ್ಪೀಕರ್ ಕೂಡ ಬಿಜೆಪಿ ಪಕ್ಷದ ಪರವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ಬಿಜೆಪಿ ಹಾಗು ಸಂಘ ಪರಿವಾರದ "ಯೋಗ ಶಿಬಿರ" ನಡೆದ ದಿನವೇ ವಿಧಾನ ಸೌಧದಲ್ಲಿ ಮತ್ತೊಂದು "ಯೋಗ ಪುರಾಣ" ಹೊರಬಿದ್ದಿದ್ದು. ಅದೇ ದಿನ ರಾಜ್ಯ ಸರಕಾರ ನೀಡಲು ಇಚ್ಚಿಸಿದ್ದ "ಬಸವಶ್ರೀ ಪ್ರಶಸ್ತಿ"ಯನ್ನು ನರ್ಮದ ಬಚಾವೋ ಅಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ "ಕರ್ನಾಟಕ ಸರಕಾರ ತನ್ನ ಹಗರಣಗಳ ಬಗ್ಗೆಯೇ ಸರಿಯಾದ ತನಿಖೆ ನಡೆಸಿಲ್ಲ ಅಂತ ಸರಕಾರ ನೀಡುವ ಪ್ರಶಸ್ತಿ ನನಗೆ ಬೇಡ" ಎಂದು ತಿರಸ್ಕರಿಸಿರುವುದು ಈ ರಾಜ್ಯದ ಜನತೆಗೆ ತೀರ ನಾಚಿಕೆಗೇಡಿನ ಸಂಗತಿ.
ಇಂಥ ಹೀನ ಜನಪ್ರತಿನಿಧಿಗಳಿಗೆ ಜನಸಾಮಾನ್ಯರು ಮುಂದೆಯಾದರೂ ಸರಿಯಾದ ಪಾಠ ಕಲಿಸಲೇಬೇಕು. ಇಲ್ಲದೆ ಹೋದರೆ ಅದರ ಪರಿಣಾಮವನ್ನು ಜನಸಾಮಾನ್ಯರೇ ಉಣ್ಣಬೇಕಾದ ದಿನ ದೂರವಿಲ್ಲ... ಎಚ್ಚ್ಚರ...

Saturday, February 4, 2012

ನಾಡೋಜ ಶ್ರೀ ನಿಸಾರ್ ಅಹಮದ್ ಅವರಿಗೆ ಜನ್ಮ ದಿನದ ಅಂಗವಾಗಿ ನುಡಿ ನಮನ

ನಾಳೆ (ಫೆ.5 ) ಕನ್ನಡ ಖ್ಯಾತ ಕವಿ, ನಾಡೋಜ ಶ್ರೀ ನಿಸಾರ್ ಅಹಮದ್ ಅವರ ಜನ್ಮ ದಿನ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಕಳೆದ ವರ್ಷ ನಾನು ಅವರ ಜೊತೆ ಇದೇ ದಿನ ಸುಮ್ಮನೆ ಕುಳಿತು ಸುಮಾರು 3 ಗಂಟೆ ಹಾಗೇ ಸುಮ್ಮನೆ ಹರಟಿದ್ದೆ. ಅವರ ಜೊತೆ ಬಿಡುವು ಸಿಕ್ಕಾಗೆಲ್ಲ ಮಾತನಾಡುತ್ತೇನೆ. ಆದರೆ ಆ ಸಮಯವನ್ನು ನನ್ನ ಜೀವನದಲ್ಲಿ ಮರೆಯಲಿಕ್ಕೆ ಸಾಧವಿಲ್ಲ. ಅಂದು ಅವರು ನನಗೆ ಅವರ ಬದುಕಿನ ಅದೆಷ್ಟೋ ವಿಚಾರಗಳನ್ನ ಹರವಿದ್ದರು. ಅವುಗಳಿಂದ ನಾನು ನಿಜಕ್ಕೂ ಪ್ರಭಾವಿತನಾನಿದ್ದೇನೆ. ಆ ವೇಳೆ ಹೊರ ಬಂದ ವಿಶಿಷ್ಟ ವಿಚಾರಗಳಲ್ಲಿ ಕೆಲವನ್ನು ನಾನು ಪತ್ರಿಕೆಯಲ್ಲಿ ಬರೆದಿದ್ದೆ. ಅದಕ್ಕೆ ನನಗೆ ಬಂದ ಪ್ರತಿಕ್ರಿಯೆ ಅಷ್ಟಿಷ್ಟಲ್ಲ... ಅವುಗಳನ್ನು ಮತ್ತೊಮ್ಮೆ ನಿಮಗಾಗಿ ನೀಡುತ್ತಿದ್ದೇನೆ... Sir ನಿಜಕ್ಕೂ ಹ್ಯಾಟ್ಸ್ ಆಫ್ ಟು ಯೂ... ones again Happy Birth Day Sir...
=======================================
ನಿಸಾರ್ ಹೃದಯ ನೀನಾದ..

ನಾಡೋಜ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕವಿಯಾಗಿ ಜನಮಾನಸಕ್ಕೆ ಪರಿಚಿತರಾದ ನಿಸಾರ್, ಇಂದು ೭೫ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಳೆಯ ಕೆಲವು ಖಾಸಗಿ ನೆನಪುಗಳನ್ನು ಅವರು ‘ಲವಲವಿಕೆ’ಯೊಂದಿಗೆ ಹಂಚಿಕೊಂಡಿದ್ದಾರೆ. ಅಪರೂಪದ ಈ ನೆನಪಿನ ಬುತ್ತಿ ನಿಮ್ಮ ಮುಂದೆ...
‘ನೆನಪಾಗಿ ಬಾರದಿರು ಮಣ್ಣುಗೂಡಿದ ಒಲವೇ-
ಎಂದೋ ನಲಿಸಿದ ನಗೆಯ ಸಂಚಿನಲ್ಲಿ ;
ಹೊಸ ಬದುಕ ಕಲೆಗೊಳಿಸಲೆಂದು ನಾ ಹೆಣಗಿರುವೆ-
ಹೊಲೆಗೆಡಿಸದಿರು ಕಂಬನಿಯ ಕುಂಚದಲ್ಲಿ.’
ಕೆಎಸ್.ನಿಸಾರ್ ಅಹಮದ್ ಅವರ ಜತೆ ಬಾಲ್ಯದಲ್ಲಿ ಇದ್ದುದು ಒಂದೇ ಒಂದು ಅದು ಲಾಲ್‌ಬಾಗ್! ಆದರೆ ಅವರಿಗೆ ಓದಿನ ಗೀಳು ಹಚ್ಚಿದ್ದು ಅವರ ತಂದೆ ಕೆ.ಎಸ್. ಹೈದರ್, ಶಿಸ್ತು ಬೆಳೆಸಿದ್ದು ತಾಯಿ ಹಮೀದಾ ಬೇಗಂ. ಇದೆಲ್ಲದರ ಜತೆಗೆ ಕವಿ ನಿಸಾರ್ ಒಬ್ಬ ಭಗ್ನ ಪ್ರೇಮಿಯೂ ಹೌದು...!! ಅದೂ ಕೂಡ ಸಾಕಷ್ಟು ಕವಿತೆಗಳಿಗೆ ಸೂರ್ತಿ...
ಅದನ್ನು ನಿಸಾರ್ ನಿಸ್ಸಂಕೋಚವಾಗಿ ಒಪ್ಪಿಕೊಳ್ಳುತ್ತಾರೆ. ಅವೆಲ್ಲ ಘಟನೆಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ನಡೆಯಲೇಬೇಕು. ದ್ವೇಷ, ಅಸೂಯೆಗಳನ್ನು ಬಿತ್ತಿ ಬೆಳೆಸಿಕೊಳ್ಳುವುದರ ಬದಲು

ಪ್ರೀತಿಯ ಗುಲಾಬಿ ಗಿಡ ನೆಟ್ಟುಕೊಳ್ಳುವುದೇ ಲೇಸು ಎನ್ನುತ್ತಾರೆ ನಿಸಾರ್. ಪ್ರೀತಿ ಕೈ ಕೊಟ್ಟಾಗ ಮುಳ್ಳಿನ ಹಾಗೆ ಚುಚ್ಚುತ್ತದೆ; ಆದರೂ ಆ ಹೂವು ಕಂಡಾಗ ಅವೆಲ್ಲವೂ ಗೌಣವಾಗುತ್ತವೆ ಎನ್ನುವುದು ಅವರ ಅಂತರಾಳದ ನುಡಿ.
ನಾನೂ ಒಬ್ಬ ಸಾಮಾನ್ಯ ಮನುಷ್ಯ. ಪ್ರೇಮ ಲೋಕದಿಂದ ಹೊರಗುಳಿದಿಲ್ಲ. ೨ನೇ ಹಾನರ‍್ಸ್ ಮಾಡುವಾಗ ಕಾಲೇಜು ದಿನಗಳಲ್ಲಿ ಪ್ರೀತಿಸಿದ್ದೇನೆ. ಆದರೆ ಅದನ್ನು ಪಡೆಯದೆ ಸೋತಿದ್ದೇನೆ. ಪ್ರೀತಿ ಶೃಂಗಾರ ಕಾವ್ಯ. ಅದರ ಸೆಳೆತಕ್ಕೆ ಸಿಕ್ಕಿ ನಾನು ಸೋತು, ವಿರಹ ವೇದನೆ ಅನುಭವಿಸಿದ್ದೇನೆ. ಆಗ ನಾನು, ಅವಳು ಇಬ್ಬರೂ ಪ್ರೀತಿಸುತ್ತಿದ್ದೆವು. ಕಲ್ಪನೆಯಲ್ಲಿ ವಿಹರಿಸುತ್ತಿದ್ದೆವು. ಅದು ಇಬ್ಬರಿಗೂ ಗೊತ್ತಿತ್ತು. ಆದರೆ ಇಬ್ಬರೂ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಲಿಲ್ಲ. ಆದರೆ ಭಾವನೆಯ ಬುತ್ತಿ ಬಿಚ್ಚುವಷ್ಟರಲ್ಲಿ ಆಕೆಗೆ ಮನೆಯವರು ‘ಮದುವೆ’ ನಿಶ್ಚಯ ಮಾಡಿದ್ದರು. ಆಗ ಇಬ್ಬರಿಗೂ ಸಿಡಿಲು ಬಡಿದಿತ್ತು. ಒಬ್ಬರಿಗೊಬ್ಬರು ಗೊತ್ತಿಲ್ಲದೆ ನೊಂದುಕೊಂಡಿದ್ದೆವು. ನಾನಂತೂ ತುಂಬಾ ನೊಂದಿದ್ದೆ. ಆ ಅಗಲಿಕೆಯ ವೇದನೆಯೇ ನನ್ನಿಂದ ಬಹುತೇಕ ವಿರಹದ ಕಾವ್ಯಗಳ ‘ಚಿಲುಮೆ’ಯಾಯಿತು. ‘ನವೋಲ್ಲಾಸ ’ ಸಂಕಲನದ ‘ಎಲ್ಲಿರುವೆಯೋ ಈಗ ನನ್ನ ಚಿನ್ನ’, ‘ನನ್ನ ಬಾಲ್ಯದ ಗೆಳತಿ’ ಮುಂತಾದ ಕಾವ್ಯಗಳು ಆ ನೆನಪಿನಲ್ಲೇ ಬರೆದವು.
ಆದರೆ ಆಗ ಪ್ರೀತಿಯಲ್ಲಿ ಸೋತಿದ್ದರಿಂದ ಕೆಲವೊಮ್ಮೆ ಜೀವನವೇ ಬೇಡ, ಇದು ‘ನಾದವಿರದ ಬದುಕು’ ಎನಿಸಿದ್ದೂ ಉಂಟು! ಆಗ ನನ್ನ ಕೈ ಹಿಡಿದಿದ್ದೇ ಲಾಲ್‌ಬಾಗ್. ಹಾಗಂತ ಎದೆಗುಂದಲಿಲ್ಲ. ನೀ ಮತ್ತೆ ‘ನೆನಪಾಗಿ ಬಾರದಿರು’ ಎನ್ನುತ್ತಲೇ ಸಾಹಿತ್ಯದ ಕಡೆ ಒಲವು ತೋರಿದೆ. ಭಾವನೆಗಳೇ ಕಾವ್ಯವಾಗಿ ಹೊರ ಬಂದವು. ಮತ್ತೆ ‘ನಿತ್ಯೋತ್ಸವ’ ಶುರವಾಯಿತು. ಆದರೆ ಅದಕ್ಕಿಂತ ನನಗೆ ಹೆಚ್ಚು ಕಾಡಿದ್ದು ‘ಎಲ್ಲ ಮರೆತಿರುವಾಗ’ ನಾನು ಪ್ರೀತಿಸಿದ ಹುಡುಗಿ ಅಜ್ಜಿಯಾಗಿ ಮಗಳು, ಮೊಮ್ಮಗುವಿನೊಂದಿಗೆ ಒಂದು ಆರತಕ್ಷತೆಯಲ್ಲಿ ಸಿಕ್ಕು ಮಾತನಾಡಿಸಿದ್ದು...!! ಆಕೆಯೇ ನನ್ನನ್ನು ಗುರುತಿಸಿ, ಬಂದು ಮಾತನಾಡಿಸಿ “ನನ್ನ ಪರಿಚಯವಿದೆಯಾ ನಿಮಗೆ...?" ಎಂದಾಗ ಆದ ಶಾಕ್ ಅಷ್ಟಿಷ್ಟಲ್ಲ. ಆಗ ‘ಆ ನೋವಿನ ಹಾಡು’ ಮನದ ಸ್ವಾಸ್ಥ್ಯ ಕೆಡಿಸಿದ್ದು ನಿಜ, ಆಗ ಬಾಯಿ ಕಟ್ಟಿ ಹೋಗಿತ್ತು. ಕ್ಷಣ ಹೊತ್ತು ಭಾವೋತ್ಕಟತೆಯಿಂದ ವರ್ತಿಸಿದ್ದೆ. ಹಳೆಯ ನೆನಪುಗಳು ಮರುಕಳಿಸಿ ಜೋಗದ ‘ಜಲಪಾತ’ವಾಗಿ ಹರಿಯುವುದರ ಜತೆಗೆ ಅಂದು ನಾನೇನಾದರೂ ತಪ್ಪಾಗಿ ಮಾತನಾಡಿರಬಹುದೇ ? ಅದರಿಂದ ಇಂದು ಅವಳೆದುರು ನಾ ಚಿಕ್ಕವನಾದೆನೆ? ಎಂಬ ಅಳುಕು. ಕಾಲೇಜು ದಿನಗಳಲ್ಲಿ ಎಷ್ಟೇ ಜಾಗೃತನಾಗಿ ಭಯದಿಂದಲೇ ಸಭ್ಯರಾಗಿ ಅವಳ ಜತೆ ನಾನು, ನನ್ನ ಜತೆ ಅವಳು ವ್ಯವಹರಿಸುವಾಗ ಆಡಿದ ಮಾತುಗಳಲ್ಲಿ ತಪ್ಪಿದ್ದರೆ, ಇವನೇನಾ... ನಿಸಾರ್ ಅಹಮದ್ ಎಂಬ ಭಾವನೆ ಮೂಡಿದ್ದರೆ!? ಎಂಬ ಆತಂಕ ಕಾಡತೊಡಗಿತ್ತು. ಆ ಕಾರಣಕ್ಕೇ ಎರಡು ದಿನ ಕಂಗೆಟ್ಟಿದ್ದೂ ಉಂಟು. ಹರೆಯದಲ್ಲಿ ಒಬ್ಬ ಹುಡುಗ ಹುಡುಗಿ ನಡುವೆ ಪ್ರೀತಿ ಶುರುವಾದಾಗ ಖಾಸಗಿತನ ಹುಟ್ಟಿಕೊಳ್ಳುತ್ತದೆ. ಆ ಕಾರಣಕ್ಕೇ ಆ ದುಗುಡ ನನ್ನನ್ನು ಕಾಡಿದ್ದು.
ಜೀವನವೇ ಅಂತಹದ್ದು, ಅಂದುಕೊಂಡದ್ದಕ್ಕಿಂತ ಮೀರಿ ನಿಲ್ಲುತ್ತಲೇ ದೊಡ್ಡ ದೊಡ್ಡ ಸವಾಲು ತಂದೊಡ್ಡುವುದೇ ಬದುಕು. ಅದಕ್ಕೇ ಅದು ನಿಗೂಢ ಎನಿಸುತ್ತದೆ. ಅಘಟಿತ ಘಟನಾ ಪರಂಪರೆಯನ್ನು ಜೀವನ ಸೃಷ್ಟಿ ಮಾಡುತ್ತದೆ. ಇಲ್ಲಿ ಒಂದು ಘಟನೆ ಮತ್ತೊಂದನ್ನು ಮರೆಸುತ್ತಾ ಬರುತ್ತೆ. ಇದು ನನ್ನ ಜೀವನದ ಮರೆಯಲಾಗ ಪ್ರೀತಿ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ಆನಂತರ ಇಂಥ ಸಾಕಷ್ಟು ಘಟನೆಗಳು ನಡೆದಿವೆ. ‘ನಗೆಯೇ ಪ್ರೀತಿಯೆಂದು ನಂಬಿ’, ‘ನೀನೇ ಸರ್ವಸ್ವ’ ಎಂದುಕೊಂಡದ್ದೂ ಉಂಟು. ಆದರೆ ಅವ್ಯಾವೂ ಅಚ್ಚಳಿಯದೆ ಉಳಿದಿಲ್ಲ. ಆ ಕಾರಣಕ್ಕೋ ಏನೋ First love is Best love ಎನ್ನುವುದು.
ಪ್ರೀತಿಯನ್ನು ಲೈಂಗಿಕತೆಯಿಂದ ಅಳೆಯಬಾ
ರದು. ಅದೊಂದು ಸ್ವಚ್ಛಂದವಾದ ಭಾವನಾತ್ಮಕ ಸಂಬಂಧ. ಈ ಸಮಯದಲ್ಲಿ ಲಾಲ್ ಬಾಗ್ ನನಗೆ ಕಾಶ್ಮೀರವಾಗಿತ್ತು. ಏಕಾಂತಕ್ಕೆ ಅದೇ ನನ್ನ ಅಚ್ಚುಮೆಚ್ಚಿನ ತಾಣ. ಲೋಕಾಂತಕ್ಕೆ ಗಾಂಬಜಾರ್‌ನ ಕಲಾಮಂದಿರ...
ಯಾರೇ ಆಗಲಿ ಒಂದು ಸಲ ಪ್ರೇಮದ ಸವಿಯನ್ನು ಸವಿಯಬೇಕು. ಅದರಿಂದ ಬಿಡಿಸಿಕೊಂಡು ಆಚೆ ಬಂದಾಗ ಜೀವನ ಸಾರ್ಥಕ ಎನಿಸುತ್ತದೆ. ಪ್ರೀತಿಯಲ್ಲಿ ಬರುವ ತ್ಯಾಗದ ನೋವಲ್ಲೂ ಏನೋ ಒಂದು ರೀತಿ ಹಿತವಿರುತ್ತದೆ...
ವಿವಾಹದ ನಂತರದ ಪ್ರೇಮ:

“ನನ್ನದು Arrenged Marriage. ೩೦ನೇ ವರ್ಷಕ್ಕೆ ವಿವಾಹವಾದೆ. ಆಗ ನನಗೆ ಮೆಚ್ಯೂರಿಟಿ ಬಂದಿತ್ತು. ನಮ್ಮಲ್ಲಿ ಎಷ್ಟೆಲ್ಲಾ ಸಂಪ್ರದಾಯಗಳಿದ್ದರೂ ನಾನು ಷಾನವಾಜ್ ಬೇಗಂ ಅವರನ್ನು ನೋಡಿ ಮೆಚ್ಚಿಕೊಂಡು ಕೈಹಿ

ಡಿದೆ. ಆ ಕಾರಣಕ್ಕೋ ಏನೋ ಷಾನವಾಜ್ ನನ್ನ ಬದುಕಲ್ಲಿ ಗೃಹಲಕ್ಷ್ಮೀಯಾಗಿ ಬಂದಳು. ಆಕೆ ಕೂಡ ಡಬ್ಬಲ್ ಗ್ಯಾಜುಯೆಟ್. ಪ್ರಾಧ್ಯಾಪಕಿಯಾಗಿದ್ದವಳು. ಮನೆ, ಮನ ಎರಡನ್ನೂ ಬೆಳಗುವುದರ ಜತೆಗೆ ಈಗ ಮನೆಯ ಇಡೀ ಜವಾಬ್ದಾರಿಯನ್ನು ನಿರ್ವಹಿಸುವವಳು ಅವಳೇ. ‘ಮದುವೆ’ ನಂತರದ ಪ್ರೀತಿಯಲ್ಲಿ ಗೆದ್ದಿದ್ದೇನೆ. ಆಕೆಯನ್ನು ಮದುವೆಯಾಗಿದ್ದಕ್ಕೆ ನನಗೆ, ನನ್ನನ್ನು ವಿವಾಹವಾಗಿದ್ದಕ್ಕೆ ಅವಳಿಗೆ ಹೆಮ್ಮೆಯಿದೆ. ಆದರೆ ನಮ್ಮ ನಡುವಿರುವ ವ್ಯತ್ಯಾಸ ನಾನು ಅಜಾತಕನು. ಅವಳು ಜಾತಕಳು. ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊಮ್ಮಕ್ಕಳಿಗೆ ‘ತಾತ’ ಎಂದರೆ ಅಚ್ಚುಮೆಚ್ಚು.
ಇವರು ಸಹಾಯಕ ಭೂ ವಿಜ್ಞಾನಿ!

೧೯೫೭ರಲ್ಲಿ ಬಿಎಸ್ಸಿ ಹಾನರ‍್ಸ್
ಮುಗಿಸಿ ೧೯೫
೮ರಲ್ಲಿ ಭೂ ವಿeನದಲ್ಲಿ ಎಂಎಸ್ಸಿ ಮಾಡುವಾಗ ನಿಸಾರ್ ಅಹಮದ್ ಅವರಿಗೆ ಗುಲ್ಬರ್ಗದಲ್ಲಿ ಮೈಸೂರು ಗಣಿ ಮತ್ತು ಭೂ ವಿeನ ಇಲಾಖೆಯಲ್ಲಿ ಸಹಾಯಕ ಭೂ ವಿeನಿಯಾಗಿ ನೌಕರಿ ಸಿಕ್ಕಿತು. ಕೆಲಸಕ್ಕೆ ಸೇರಿದ ಅವರು, ಗುಲ್ಬರ್ಗಕ್ಕೆ ತೆರಳಿ ಒಂದು ವರ್ಷ ಸೇವೆ ಮಾಡಿದರು. ಜೀವನದ ಮೊದಲ ‘ಬಿಸಿ’ ಅನುಭವಿಸಿದ್ದೇ ಅಲ್ಲಿ. ಅದು ‘ಆದಿಯನರಿಯದ ಪಯಣ’. ಅವರು ಕಚೇರಿಯಲ್ಲಿಯೇ ಇರುವ ರೂಮಿನಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಅಲ್ಲಿನ ಜೀವನವನ್ನು ಅವರಿಂದ ಇಂದಿಗೂ ಮರೆಯಲಾಗುತ್ತಿಲ್ಲ. ಕಾರಣ ಅಲ್ಲಿನ ವಾತಾವರಣ, ನೀರು, ಹಿಡಿಸದೆ ತುಂಬಾ ವೇದನೆ ಅನುಭವಿಸುತ್ತಾ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು. ಆದರೂ ಗುಲ್ಬರ್ಗ ಜಿಲ್ಲೆಯಾದ್ಯಂತ ಸುತ್ತಿ ಸರ್ವೆ ಕಾರ್ಯ ನಡೆಸಿದ್ದರು. ಅಂತರ್ಜಲ, ಸುಣ್ಣದ ಕಲ್ಲು ಸರ್ವೇಕ್ಷಣೆ ಮಾಡಿದ್ದರು. ಸೇಡಂ ಬಳಿ ಅವರು ಸರ್ವೆ ಮಾಡಿದ ಕರಿಘಟ್ಟವೇ ಇಂದಿನ ಸಿಮೆಂಟ್ ಕಾರ್ಖಾನೆಯಾಗಿದೆ.
ಕೆಲಸ ಇಷ್ಟವಾದರೂ ಮನೆಯವರಿಂದ ದೂರವಾಗಿದ್ದರಿಂದ, ಜತೆಗೆ ಸಾಹಿತಿಗಳ ಹಾಗೂ ಆಕಾಶವಾಣಿಯ ಸಂಪರ್ಕ ಕಳೆದುಕೊಂಡಿದ್ದರಿಂದ ಏನೋ ಕಳೆದುಕೊಂಡಂತ ಅನುಭವ, ಅನಾಥ ಪ್ರe ಹಾಗೂ ‘ಮತ್ತದೇ ಬೇಸರ’ ಕಾ
ಡುತ್ತಿತ್ತು. ಆ ಕಾರಣಕ್ಕೆ ೧೯೫೯ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ವಾಪಸ್ ಬಂದರು.
ಸಿನಿಮಾ ಹುಚ್ಚಿತ್ತು :

‘ಬಾಲ್ಯ’ದಿಂದಲೂ ಹಿಂದಿ ಸಿನಿಮಾ
ಎಂದರೆ ನಿಸಾರ್ ಅವರಿಗೆ ಪ್ರಾಣ. ಮನೆ ಬಳಿಯೇ ಮಿನರ್ವ ಟಾಕೀಸ್ ಇತ್ತು. ಒಂದಾಣೆ, ಎರಡಾಣೆ ಸಂಗ್ರಹಿಸಿ ತಮ್ಮನ ಜತೆಗೂಡಿ ಅಂದಿನ ಪ್ಯಾರಾಮೌಂಟ್ ಚಿತ್ರಮಂದಿರದ ಗೇಟ್ ಕೀಪರ್‌ಗೆ ಕೊಟ್ಟು ಮೆಲ್ಲಗೆ ನುಸುಳಿಕೊಂಡು ಹೋಗಿ ಸಿನಿಮಾ ನೋಡುತ್ತಿದ್ದರು. ಸಿನಿಮಾ ನೋಡಿ ಲೇಟಾಗಿ ಮನೆಗೆ ಬಂದಾಗ ತಮ್ಮಿಂದ ಶಿಸ್ತು ಬಯಸುತ್ತಿದ್ದ ಅಮ್ಮ ಕೇಳಿದಾಗ ಸು
ಳ್ಳು ಹೇಳಿದ್ದೂ ಉಂಟು. ಅಪ್ಪನಿಗೆ ಅದು ಗೊತ್ತಾಗುತ್ತಿತ್ತು. ಆದರೂ ಸುಮ್ಮನಿರುತ್ತಿದ್ದರು.
ಅಪ್ಪನ ಪ್ರೇರಣೆ:

ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಬೆಳೆಸಿದ್ದು ಅಪ್ಪ ಕೆ.ಎಸ್. ಹೈದರ್. ಆ ಕಾರಣಕ್ಕಾಗಿಯೇ ಅವರಿಗೆ ತಂದೆಯೇ ಮೊದಲ ಗುರು. ಆಹಾರ ನಿರೀಕ್ಷಕರಾದ ತಂದೆಯೇ ಅವರಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತವನ್ನೂ ಹೇಳಿಕೊಟ್ಟದ್ದು. ಹದ್ದು ಮೀರಿ ವರ್ತಿಸದಂತೆ ಎಚ್ಚರವಹಿಸುವುದು, ಉದಾರ ಮನೋಭಾವ, ಸರಳತೆ ಬೆಳೆಸಿದ್ದು ತಂದೆಯೇ. ತಾಯಿಯಿಂದ ಶಿಸ್ತು ಕಲಿತರೆ, ಜನರ ಮಧ್ಯೆ ಬೆಳೆಯುವುದನ್ನು ಕಲಿತದ್ದು ತಂದೆಯಿಂದ.
ನೆನಪಿನ ಬುತ್ತಿಯ ಅಚ್ಚು ಮೆಚ್ಚು:

* ಹೈಸ್ಕೂಲಿನಲ್ಲಿದ್ದಾಗ ಜಲಪಾತವನ್ನೇ ನೋಡದೆ ಮೊದಲು ಬರೆದ ಪದ್ಯ ‘ಜಲಪಾತ’.
*ನಿಸಾರ್ ಅಹಮದ್ ೧೯೫೫ರಲ್ಲಿ ದ.ರಾ.ಬೇಂದ್ರೆ ಅಧ್ಯಕ್ಷತೆಯಲ್ಲಿ ಬೆಂಗಳೂರು ಕಸಾಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ‘ಸಮರ ಗೀತೆ’ ಪದ್ಯ ಓದಿ, ಬೇಂದ್ರೆಯಿಂದ ಬೆನ್ನು ತಟ್ಟಿಸಿಕೊಂಡಿದ್ದರು.
* ಆನಂತರ ೧೯೫೬ರಲ್ಲಿ ಮೊದಲ ಬಾರಿಗೆ ಆಕಾಶವಾಣಿಯಲ್ಲಿ ‘ಕಾವ್ಯಧಾರೆ’ ಎಂಬ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅದೇ ಕಾವ್ಯವನ್ನು ಓದಿದ್ದು.
* ಗಾಂಬಜಾರ್‌ನ ಕಲಾಮಂದಿರದಿಂದಲೇ ಸಾಹಿತಿಗಳ ಸಂಪರ್ಕ ಸಿಕ್ಕಿತ್ತು.
* ಅಶೋಕ್ ಕುಮಾರ್, ಶ್ಯಾಮ್, ಕುಂದಲ್‌ಲಾಲ್ ಸೈಗಲ್, ದಿಲೀಪ್‌ಕುಮಾರ್, ರಾಜ್‌ಕಪೂರ್ ನೆಚ್ಚಿನ ಹೀರೋಗಳು.
*‘ಕಿಸ್ಮತ್’ ನೆಚ್ಚಿನ ಚಿತ್ರ. ಅಂದೇ ಎರಡ್ಮೂರು ಬಾರಿ ನೋಡಿದ್ದ ಇನ್ನೊಂದು ಚಿತ್ರ ‘ಫನ್ನಾ’
*ಫೈಜಲ್ ಪಂಕಜ್ ಮಲ್ಲಿಕ್ ಇಷ್ಟದ ಗಾಯಕರು.
* ವಿಜಯದಶಮಿ ವಿಶೇಷ ಕವಿ ಸಮ್ಮೇಳನದಲ್ಲಿ ಕುವೆಂಪು, ಮಾಸ್ತಿ, ಪುತಿನ ಸಮ್ಮುಖದಲ್ಲಿ ಮತ್ತ್ತೆ ಕಾವ್ಯ ವಾಚನ. ಕುವೆಂಪು ಅವರಿಂದ ಪ್ರಶಂಸೆ.
* ಮೈಸೂರಿನ ದಸರಾ ಕವಿ ಸಮ್ಮೇಳನದಲ್ಲಿ ಮತ್ತೆ ಕುವೆಂಪು ಎದುರು ‘ಸಿಡಿದ ಸದ್ದು’ ಕಾವ್ಯವಾಚನ.
* ಮೈಸೂರು ವಿವಿಯ ವೈಸ್ ಚಾನ್ಸಲರ್ ಆಗಿದ್ದ ಕುವೆಂಪು ಅವರ ಕೃಪೆಯಿಂದ ೧೯೫೯ರ ನ.೧೬ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವೆಂಕಟಾಚಲಪತಿ ಎಂಬ ಪ್ರಾಧ್ಯಾಪಕರ ಜಾಗಕ್ಕೆ ಪ್ರಾಧ್ಯಾಪಕರಾಗಿ ನೇಮಕ.
*ಶಿವಮೊಗ್ಗದಲ್ಲಿ ಕಳೆದ ೮ ವರ್ಷಗಳು ಮರೆಯುವಂತಿಲ್ಲ. ಅದು ಸೃಜನಶೀಲತೆಯ ತವರು.

Friday, February 3, 2012

ಕನ್ನಡದ ಹಾಸ್ಯ ನಟ ಕರಿಬಸವಯ್ಯ ಇನ್ನಿಲ್ಲ

ಕನ್ನಡದ ಹಾಸ್ಯ ನಟ ಕರಿಬಸವಯ್ಯ ಇಂದು ಮಧ್ಯಾನ ನಿಧನರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ Pristine ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಸೋಮವಾರ ಕನಕಪುರ ರಸ್ತೆಯಲ್ಲಿ ಅವರ ವಾಹನ ಆಳವಾದ ತಗಿಗೆ ಬಿದ್ದು ಅಪಘಾತಕ್ಕೆ ಈಡಾಗಿತ್ತು. ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಮಂಗಳವಾರ ಬೆಳಗಿನ ಜಾವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ (ಇಂದು) ಮಧ್ಯಾನ ಕೊನೆಯುಸಿರೆಳೆದಿದ್ದಾರೆ.
ರಂಗಭೂಮಿಯಿಂದ ಕನ್ನಡ ಚಿತ್ರ ರಂಗಕ್ಕೆ ಬಂದ ಅವರು, ನಾಗತಿ ಹಳ್ಳಿ ಚಂದ್ರಶೇಖರ್ ನಿರ್ದೇಶನದ "ಉಂಡು ಹೋದ ಕೊಂದು ಹೋದ" ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಅಲ್ಲಿಂದ 100 ಕ್ಕೂ ಹೆಚ್ಹು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಜನಪದ ಕಲೆಯಾದ ಹರಿಕತೆಯಲ್ಲಿ ವಿದ್ವಾನ್ ಆಗಿದ್ದವರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲವರ್ಷಗಳ ಕಾಲ ಕೆಲಸ ಮಾಡಿದವರು. ತಾಯಿ, ಉಲ್ಟಾ ಪಲ್ಟಾ, ಪರಿಚಯ, ಸ್ಟೋರಿ, ಯಾರಿಗೆ ಸಾಲುತ್ತೆ ಸಂಬಳ, ಜನಪದ, ಮ್ಯಾಜಿಕ್ ಅಜ್ಜಿ, ರೈಟ್ ಅಂದ್ರೆ, ದುರ್ಗಿ, ಗಲಾಟೆ ಅಳಿಯಂದ್ರು, ಕ್ರೇಜಿ ಕುಟುಂಬ, ಹೋಳಿ, ನೂರು ಜನ್ಮಕು, ಐತಲಕಡಿ, ಉಲ್ಲಾಸ ಉತ್ಸಾಹ, ಶ್ರೀ ಮೋಕ್ಷ, 5 ಈಡಿಯಟ್ಸ್ ಮುಂತಾದವು ಅವರ ಪ್ರಮುಖ ಚಿತ್ರಗಳು. ಅವರ ಸಹಜ ಅಬಿನಯದಿಂದಲೇ ಜನಮನ ಗೆದ್ದಿದ್ದರು.
ಅವರ ಮಗಳು 2009 ರಲ್ಲಿ ರಾಧ ಮದುವೆಯ ನಂತರ ಆತ್ಮಹತ್ಯೆ ಮಾಡಿಕೊಂಡ ನಂತರ ಅವರು ಮಾನಸಿಕವಾಗಿ ನೊಂದಿದ್ದರು. ಅವರ ಆಸ್ಪತ್ರೆಯ ವೆಚವನ್ನು ನಿರ್ದೇಶಕ ನಾಗಿತಿಹಳ್ಳಿ ಚಂದ್ರಶೇಖರ ಅವರು ತಮ್ಮ ಅಭಿವ್ಯಕ್ತಿ ಸಾಂಸ್ಕೃತಿಕ ವೇಧಿಕೆ ವತಿಯಿಂದ ಭರಿಸಲು ಮುಂದೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಅವರು ಕನ್ನಡ ಹಾಸ್ಯ ನಟ ಮಾತ್ರವಲ್ಲ ರಂಗ ಭೂಮಿಯಲ್ಲೂ ಅಪಾರ ಸೇವೆ ಸಲ್ಲಿಸಿದವು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಹಾಸ್ಯ ನಟ ಕರಿಬಸವಯ್ಯ ನಿಧನ

ನಿಜಕ್ಕೂ ಇವರು ಕನ್ನಡದ ಪ್ರತಿಭಾವಂತ ನಟ, ಕಡು ಕಷ್ಟದಲ್ಲೂ ಈ ಮಟ್ಟಕ್ಕೆ ಬೆಳೆದು ಬಂದವರು. ರಂಗ ಕಲೆ, ಕನ್ನಡದ ಸಿನೆಮಾ ಹಾಗೂ ದಾರವಾಹಿಗಳಲ್ಲಿ ತಮ್ಮದೇ ಆದ ಹೆಸರು ಮಾಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ...
http://www.youtube.com/watch?v=CS_bsKCfgEw&feature=colike
Powered By Blogger