Thursday, February 12, 2009

ಪ್ರೀತ್ಸೋದ್ ತಪ್ಪಾ ...?

‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ?
ಮಳೆ ಸುರಿದೀತು ಹೇಗೆ...?
-ಹೀಗೆ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಹಿಂದೆಯೇ ತಮ್ಮ ಕಾವ್ಯದಲ್ಲಿ ಪ್ರಶ್ನೆ ಮಾಡಿದ್ದಾರೆ.
ಪ್ರಪಂಚದ ಯಾವುದೇ ಒಂದೇ ಒಂದು ಜೀವಿಯ ಮನದಾಳದಲ್ಲಿ ಪ್ರೀತಿ ಇಲ್ಲ ಎಂದು ತೋರಿಸಲು ಸಾಧ್ಯವೇ ? ಸಾಧ್ಯವೇ ಇಲ್ಲ. ಪ್ರೀತಿ ಜಗತ್ತಿನ ಉದಯಕ್ಕೆ ಸಾಕ್ಷಿ. ಪ್ರೀತಿ ಜೀವನೋತ್ಸಾಹದ ಚಿಲುಮೆ. ಪ್ರೀತಿ ಸೂರ್ತಿ. ಅದನ್ನು ಹೃದಯಪೂರ್ವಕವಾಗಿ ಅನುಭವಿಸಿದವರಿಗೇ ಗೊತ್ತು ಅದರ ಗಂಧ ಗಾಳಿ...
ಗೋರ್ಕಲ್ಲ ಮೇಲೆ ಮಳೆ ಸುರಿದು ಪ್ರಯೋಜನವಾದರೂ ಏನು ? ಈಗ ರಾಜ್ಯದಲ್ಲಿ ಆಗುತ್ತಿರುವುದೂ ಅದೇ. ಶ್ರೀರಾಮಸೇನೆ ಹಾಗೂ ಸಂಘಪರಿವಾರ ‘ಭಾರತೀಯ ಸಂಸ್ಕೃತಿ’ಯ ಹೆಸರಿನಲ್ಲಿ ತಾವೇ ‘ಸಂಸ್ಕೃತಿ ರಕ್ಷಕರು’ ಎಂದು ಸ್ವಯಂ ಘೋಷಿಸಿಕೊಂಡು ಅದರ ಉಳಿವಿಗೆ ಹೋರಾಡುವುದು ಅನಾಗರಿಕತನ.
ಪ್ರೀತಿ ಅನ್ನೋ ಆ ಹೂವು ಯಾರಲ್ಲೂ ಹೇಳಿ ಕೇಳಿ ಹುಟ್ಟುವುದಿಲ್ಲ. ಅದಕ್ಕೆ ಒಂದು ದಿನ ಅಥವಾ ಒಂದು ಸಮಯ ಎಂಬುದೇ ಇಲ್ಲ. ಅದರ ಉಗಮವೇ ಆಗೋಚರ. ಹಾಗೆಂದು ನಾವು ಪ್ರೀತಿಸಿದವರೆಲ್ಲರನ್ನೂ ಮದುವೆಯಾಗಬೇಕು ಎಂಬುದು ಕೂಡ ಖಡು ಮೂರ್ಖತನ. ಭಾರತೀಯ ಸಂಸ್ಕೃತಿ ರಕ್ಷಕರು ಎಂದು ಹೇಳಿಕೊಳ್ಳುವ ಈ ಭಟ್ಟಂಗಿಗಳಿಗೆ ಸ್ತ್ರೀಯನ್ನು ಗೌರವಿಸುವ ಕನಿಷ್ಠ eನ ಕೂಡ ಇಲ್ಲ. ಹೀಗಿರುವಾಗ ಇವರು ರಕ್ಷಿಸುವುದಾದರೂ ಏನು ?
ಸಮಾಜದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಸಮಾನವಾದ ಸ್ಥಾನ ಮಾನಗಳಿವೆ. ಹೀಗಿರುವಾಗ ಪ್ರೀತಿಸುವ ಹೃದಯಗಳೆರಡು ಸಮಾಜದಲ್ಲಿ ಸಮಾನವಾಗಿ ಬದುಕುವುದರಲ್ಲಿ ತಪ್ಪೇನು ? ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದರ ಹರಣವಾಗಬಾರದು ಅಷ್ಟೇ. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಅದನ್ನು ರಕ್ಷಿಸುವ ಹೆಸರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಲು ಶ್ರೀರಾಮಸೇನೆ ನಾಯಕರಿಗೆ ಯಾವ ನೈತಿಕ ಹಕ್ಕಿದೆ ?
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಮೂಲಭೂತ ಹಕ್ಕುಗಳಿವೆ. ಅವುಗಳನ್ನು ಈಗ ಈ ಭಟ್ಟಂಗಿಗಳು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ಅನ್ಯ ಕೋಮಿನ ಹರೆಯದ ಯುವಕ ಯುವತಿಯರು ಒಟ್ಟುಗೂಡಿ ನಡೆದಾಡಿದರೆ ಅವರು ಪ್ರೇಮಿಗಳೇ ಇರಬೇಕು !? ಅವರ ನಡುವೆ ಅನೈತಿಕ ಸಂಬಂಧವೇ ಇರಬೇಕು !? ಎಂದು ಭಾವಿಸುವುದು. ಅವರ ಮೇಲೆ ಹಲ್ಲೆ ಮಾಡುವುದು ಸಂಸ್ಕೃತಿ ರಕ್ಷಣೆಯಾ...? ಈ ಸಮಾಜದಲ್ಲಿ ಜಾತಿ, ಧರ್ಮಗಳಾಚೆಗೆ ಸ್ನೇಹ, ಸೌಹಾರ್ಧತೆ, ಪ್ರೀತಿ, ಸಂಬಂಧಗಳು ಬೆಳೆಯಲೇಬಾರದೆ...? ಸಾಮರಸ್ಯ ಎಲ್ಲಿರುತ್ತದೋ ಅಲ್ಲಿ ಸಹಬಾಳ್ವೆ ಇದ್ದೆ ಇರುತ್ತದೆ. ಅದನ್ನು ನಾವು ಮೊದಲು ಅರಿಯಬೇಕು.
ಪಬ್‌ಗಳಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡುವುದು ತಪ್ಪು. ಹೀಗಿರುವಾಗ ಅದಕ್ಕೆ ಅನುಮತಿ ನೀಡುವುದಾದರೂ ಏಕೆ..? ಸರಕಾರಕ್ಕೆ ಬುದ್ದಿ ಇಲ್ಲವೇ ? ಅಲ್ಲಿರುವ ಸಚಿವರು, ಅಕಾರಿಗಳು ಬುದ್ದಿ ಹೀನರೆ..? ಕುಡಿತ ಕೂಡ ಆರೋಗ್ಯಕ್ಕೆ ಹಾನಿ. ಹೀಗಿರುವಾಗ ಗಲ್ಲಿಗೊಂದರಂತೆ ಬಾರ್‌ಗಳು, ರೆಸ್ಟೋರಂಟ್‌ಗಳು ತಲೆ ಎತ್ತಿರುವುದು ಯಾಕೆ..? ಅದು ಪುರುಷರು ಮಾಡಿದರೆ ತಪ್ಪು ಮಹಿಳೆಯರು ಮಾಡಿದರೆ ಅನೈತಿಕ, ಅಪಚಾರ... ಇದು ಯಾವ ರೀತಿಯ ಕಾನೂನು ?
ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್‌ಗೆ ಪ್ರೀತಿ ಅರ್ಥವೇ ಗೊತ್ತಿಲ್ಲ. ಅವನೊಬ್ಬ ಬ್ರಹ್ಮಚಾರಿ. ಹೀಗಿರುವಾಗ ಅದರ ಅರಿವೇ ಇಲ್ಲದೆ ಪ್ರೇಮಿಗಳ ದಿನವನ್ನು ನಿಷೇಸಿ, ಪ್ರೇಮಿಗಳು ಕಂಡರೆ ಮದುವೆ ಮಾಡಿಸುತ್ತೇವೆ ಎನ್ನುವ ಆತನಿಗೆ ಯಾವ ನೈತಿಕ ಹಕ್ಕಿದೆ ಎಂಬುದು ಆತನಿಗೇ ಗೊತ್ತಿಲ್ಲ. ಕಲ್ಲು ಬಂಡೆಯಂತಿರುವ ಪ್ರಮೋದ್ ಮೊದಲು ಧರ್ಮವನ್ನೂ ಮೀರಿ ನಡೆದುಕೊಳ್ಳುವುದನ್ನ, ಅನ್ಯ ಕೋಮಿನವರೊಡನೆ ಸಹಬಾಳ್ವೆಯಿಂದ ಬದುಕುವುದನ್ನು ಕಲಿಯಲಿ. ಅನಂತರ ಆ ವಿಚಾರದ ಬಗ್ಗೆ ಮಾತನಾಡಲಿ.
ಎಲ್ಲರ ಹೃದಯದಲ್ಲೂ ಅರಳಲೇಬೇಕಾದ ಕೋಮಲ ಹೂವು ಈ ಪ್ರೀತಿ. ಎಳೆಯ ಹೃಯದಲ್ಲಿ ಅದು ಅರಳಿದರೆ ಆ ವ್ಯಕ್ತಿ ಸರಿ ದಾರಿಯಲ್ಲಿ , ಮಾನವೀಯತೆಯಿಂದ ಬದುಕಲು ಸಾಧ್ಯ. ಬರೀ ದ್ವೇಷ, ಅಸೂಹೆ, ಧರ್ಮಾಂಧತೆಗಳನ್ನೇ ಮೈಗೂಡಿಸಿಕೊಂಡರೆ ಸಮಾಜಕ್ಕೆ ಒಂದು ‘ಕೆಟ್ಟ ಹುಳ ’ ಹುಟ್ಟಿಕೊಂಡಂತೆಯೇ. ಈಗ ಹೇಳಿ ಪ್ರೀತ್ಸೋದ್ ತಪ್ಪಾ ?
ಸಾರ್ವಜನಿಕರನ್ನು ಕೆಣಕಿದವರು ಈ ಸಮಾಜದಲ್ಲಿ ಯಾರೋಬ್ಬರೂ ನೆಟ್ಟಗೆ ಬದುಕಿದ ಇತಿಹಾಸವಿಲ್ಲ. ಪ್ರೇಮಿಗಳ ದಿನವಾದ ಫೆ.೧೪ರಂದು ಗಲಭೆ ಮಾಡಲು ಹೊರಡುವ ಶ್ರೀರಾಮ ಸೇನೆಯ ನಾಯಕರನ್ನು ಅದೇ ಯುವ ಸಮೂಹ ಚೆಡ್ಡಿ ಬಿಚ್ಚಿ ಪುಟಗೋಸಿಯಲ್ಲಿ ಕಳಿಸೀತು ! ಎಚ್ಚರವಿರಲಿ...
Powered By Blogger