Wednesday, January 20, 2010

ಬಿಟಿ ಮತ್ತು ರೈತರು

ರಾಜ್ಯದಲ್ಲಿ ಮಾತ್ರವಲ್ಲ ಈಗ ದೇಶದೆಲ್ಲೆಡೆ ಬಿಟಿ ಬದನೆ ಬಗ್ಗೆ ಚರ್ಚೆ ನಡೆಯುತ್ತಿದೆ. ರೈತರು ಮಾತ್ರವಲ್ಲ ಈ ದೇಶದ ನೆಲ ಮತ್ತು ರೈತಪರ ಕಾಳಜಿಯುಳ್ಳ ಎಲ್ಲರೂ ಇದನ್ನು ಸಾರಸಗಟಾಗಿ ವಿರೋಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸೇರಿದಂತೆ ದೇಶದ ೭ ರಾಜ್ಯಗಳು ಈಗಾಲೇ ಈ ಕುಲಾಂತರಿ ತಳಿಗಳನ್ನು ವಿರೋಸಿವೆ. ವಿಶ್ವದ ಶೇ.೮೦ ರಾಷ್ಟ್ರಗಳು ಕೂಡ ಇದನ್ನು ವಿರೋಸಿದ್ದರಿಂದ ಈಗ ಅಮೆರಿಕದ ಕಣ್ಣು ಭಾರತದ ಮೇಲೆ ಬಿದ್ದಿದೆ!
ಇಂಥ ಅಮೆರಿಕದ ಕುತಂತ್ರವನ್ನು ಹಿಂದು ಮುಂದು ನೋಡದೆ ಒಪ್ಪಿಕೊಂಡು ಶೇ.೬೫ ಕುಲಾಂತರಿ ಬೀಜ ಬಳಸಿದ ಅರ್ಜೆಂಟೈನಾ ಮತ್ತು ಪೆರುಗ್ವೆ ದೇಶಗಳಲ್ಲಿ ಈಗ ಇಳುವರಿ ಕಡಿಮೆಯಾಗಿದೆ. ಆದರೆ ಇಷ್ಟೆಲ್ಲಾ ಕುತಂತ್ರವನ್ನು ಇತರ ದೇಶಗಳ ಮೇಲೆ ಹೇರುತ್ತಿರುವ ಅಮೆರಿಕ ಮಾತ್ರ ಸಾವಯವ ಆಹಾರವನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ಎಲ್ಲ ದೇಶಗಳ ಮೇಲೆ ಹೀಗೆ ಬಿಟಿ ಬೀಜಗಳನ್ನು ಬಿತ್ತಲ್ಲು ಹಚ್ಚಿದರೆ ಮುಂದೊಂದು ದಿನ ತಮಗೇ ಸಾವಯವ ಆಹಾರ ಸಿಗುವುದಿಲ್ಲ ಎಂಬ ಸಣ್ಣ ಸತ್ಯ ಕೂಡ ದೊ(ದ)ಡ್ಡಣ ಅಮೆರಿಕಗೆ ತಿಳಿದಿಲ್ಲ. ಇದೇ ವಿಪರ್ಯಾಸ.
ಹೀಗೆ ಆತುರಾತಿರವಾಗಿ ಬಿಟಿ ಬದನೆಯನ್ನು ಭಾರತದ ರೈತರ ಮೇಲೆ ಹೇರಲು ಹುನ್ನಾರ ನಡೆಸಿರುವ ಅಮೆರಿಕ, ಕೇಂದ್ರ ಸರಕಾರದ ಜುಟ್ಟು ಹಿಡಿದು ಕೂತಿದೆ. ಈಗಾಗಲೇ ಭಾರತದ ರೈತರ ಮೇಲೆ ಬಲವಂತವಾಗಿ ಬಿಟಿ ಬದನೆಯನ್ನು ಹೇರಿ ಶೇ.೫೦ರಷ್ಟು ರೈತರ ಭೂವಿಯನ್ನು ಹಾಳುಗೆಡವಿರುವ ಅಮೆರಿಕದ ‘ಸಂಜೆಂಟಾ’, ‘ಮಾನ್ಸಂಟೋ’ದಂಥ ಬಹುರಾಷ್ಟ್ರೀಯ ಕಂಪೆನಿಗಳು ಈಗ ಬಿಟಿ ಬದನೆಯನ್ನು ಮುಂದಿಟ್ಟುಕೊಂಡು ಕೂತಿವೆ.
ಬಿಟಿ ಹತ್ತಿ ಬೆಳೆಯುತ್ತಿರು ರೈತರಲ್ಲಿ ಈಗಾಗಲೇ ಉಬ್ಬಸ, ಚರ್ಮರೋಗದಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಅದರ ಗಾಯ ಇನ್ನೂ ಹಸಿ ಹಸಿಯಾರಿಗುವಾಗಲೇ ಅದರ ಮೇಲೆ ಮತ್ತೊಂದು ಬರೆ ಎಳೆಯಲು ‘ಸಂಜೆಂಟಾ’ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ಇದಕ್ಕೆ ‘ಶಾಂತಾರಾಮ್‌ರಂಥ ಏಜೆಂಟ್’ರನ್ನು ಬಳಸಿಕೊಳ್ಳುತ್ತಿದೆ. ಅದಕ್ಕೆ ಇಂಥವರೆಲ್ಲಾ ವಿeನಿಗಳು ಎಂಬ ಹೆಸರಿನಲ್ಲಿ ಕೋಲೆ ಬಸವನ ರೀತಿ ತಲೆದೂಗುತ್ತಿರುವುದಲ್ಲದೆ ಈ ದೇಶದ ರೈತರನ್ನೂ ತಲೆದೂಗಲು ಹೇಳುತ್ತಿದ್ದಾರೆ.
ಇಲ್ಲಿಯ ರೈತರು ಬೆಳೆದ ಅನ್ನ ತಿಂದು, ನೀರು ಕುಡಿದು ಬೆಳೆದು, ಈ ನೆಲದಲ್ಲಿ ಕಲಿತು ದೊಡ್ಡವರಾಗಿ ಉನ್ನತ ಶಿಕ್ಷಣವನ್ನ ಇನ್ಯಾವುದೋ ಪರದೇಶಿಗಳ ಕೈಲಿ ಕಲಿತು ಅದನ್ನೇ ಮೈಗೂಡಿಸಿಕೊಂಡು ಅವರು ಕೊಟ್ಟ ಪುಡಿಗಾಸನ್ನು ಆರಿಸಿಕೊಳ್ಳುತ್ತಿರುವ ಶಾಂತಾರಾಮ್‌ರಂಥವರು ಜನ್ಮ ನೀಡಿ ಸಾಕಿ ಬೆಳೆಸಿದ ಭೂಮಿಗೇ ವಿಷವಿಕ್ಕಲು ಅಣಿಯಾಗಿದ್ದಾರೆ. ಇಂಥ ‘ದೇಶದ್ರೋಹಿಗಳು’, ‘ಹೃದಯ ಹೀನರು’, ಕಿರಾತಕರಿಗೆ ಅದ್ಯವಾವ ರೀತಿ ಬುದ್ದಿ ಹೇಳಬೇಕೋ ತಿಳಿಯದು.
ಅದಿರಲಿ, ಇಂಥ ಮಾರಕ ಜೀ ವಿರೋ ವಿಚಾರದ ಬಗ್ಗೆ ದೇಶಾದ್ಯಂತ ಬಿಸಿ ಬಿಸಿ ಚರ್ಚೆ ನಡೆಸುವ ಸಂದರ್ಭದಲ್ಲಿ ಬೆಂಗಳೂರಿಗೆ ಅದೇ ವಿಚಾರದ ಬಗ್ಗೆ ಚರ್ಚೆ ನಡೆಸಲು ಖ್ಯಾತ ವಿಜ್ಞಾನಿ ಡಾ. ಪುಷ್ಪ ಎಂ.ಭಾರ್ಗವ್ ಜ.೨೦ರಂದು ಆಗಮಿಸಿದ್ದರು.
ಇದರ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿಯೂ ಪ್ರಚಾರ ಮಾಡಲಾಗಿತ್ತು. ‘ಬಿಟಿ ಬದನೆಯ ತೆರೆಮರೆಯ ಸತ್ಯಕಥೆ’ ಕುರಿತ ಭಾಷಣ ಹಾಗೂ ಚರ್ಚೆ’ಯಲ್ಲಿ ಭಾಗವಹಿಸಲು ರೈತರು, ರೈತ ನಾಯಕರಿಗೆ ಮನವಿ ಮಾಡಲಾಗಿತ್ತು. ಜತೆಗೆ ಚರ್ಚೆಗೆ ಮುಂಚಿತವಾಗಿಯೇ ಹೆಸರು ನೋಂದಣಿ ಮಾಡಿಸಲು ತಿಳಿಸಲಾಗಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಕೆಲವೇ ಕೆಲವು ರೈತರು ಮಾತ್ರ ಅಲ್ಲಿಗೆ ಆಗಮಿಸಿದ್ದರು. ಇನ್ನು ಹೆಸರು ನೋಂದಾಯಿಸಿದ ಪ್ರಮುಖ ರೈತರು ಕೂಡ ಚರ್ಚೆ ವೇಳೆ ಕಾರ್ಯಕ್ರಮದಲ್ಲಿರಲಿಲ್ಲ! ಇದು ನಮ್ಮ ರೈತರ, ರೈತನಾಯಕರ ಉತ್ಸಾಹ, ಆಕ್ರೋಶ ಮತ್ತು ಬುದ್ದಿವಂತಿಕೆ...!!
ರೈತರಿಗೆ ರೈತಾಪಿಯ ಜತೆಗೆ ಅದೆಷ್ಟು ಅನಿವಾರ್ಯತೆ, ಹೊಂದಾಣಿಕೆಗಳಿರುತ್ತವೆ ಎಂಬುದು ಗೊತ್ತು. ಆದರೂ ಇಂಥ ಸುಸಂದರ್ಭಗಳಲ್ಲಿ ಒಂದು ದಿನದ ಮಟ್ಟಿಗಾದರೂ ಬಿಡುವು ಮಾಡಿಕೊಂಡು ಭಾಗವಹಿಸುವುದು, ತಮ್ಮ ಪರ ಕಾಳಜಿ ಇರುವವರ, ತಮ್ಮನ್ನು ಬೆಂಬಲಿಸುವವರ ಜತೆ ಕುಳಿತು ಚರ್ಚೆ ನಡೆಸುವ ಉತ್ಸಾಹವನ್ನಾದರೂ ತೋರಬೇಕು. ಅದಾಗದೆ ಹೋದರೆ ಮುಂದೊಂದು ದಿನ ಇಂಥ ಬಹುರಾಷ್ಟ್ರೀಯ ಕಂಪನಿಗಳು, ಏಜೆಂಟರು ರೈತರನ್ನು ತಿಂದು ತೇಗುವುದರಲ್ಲಿ ಸಂಶಯವಿಲ್ಲ.
ಡಾ.ಪುಷ್ಪ ಎಂ.ಭಾರ್ಗವ್ ಹೇಳಿದ್ದೇನು?
ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಆಯಾ ಪ್ರದೇಶಕ್ಕೆ ಅನುಗುಣವಾಗಿ ಆಹಾರ ಪದ್ಧತಿ ರೂಪಿತವಾಗಿದೆ. ಅದರ ಆಧಾರದ ಮೇಲೆಯೇ ಅಲ್ಲಿನ ರೈತರು ಆಹಾರ ಬೆಳೆಯನ್ನು ಬೆಳೆಯುತ್ತಾರೆ. ಅದೆಲ್ಲವೂ ಅಲ್ಲಿನ ಹವಾಗುಣಕ್ಕೆ ಹೊಂದಿಕೊಂಡಿರುತ್ತದೆ. ಅಲ್ಲಿ ಏನು ಬೆಳೆಯಬೇಕು ಎಂಬುದನ್ನು ರೈತರೇ ನಿರ್ಧರಿಸುತ್ತಾರೆ. ಆದರೆ ಈಗ ಲಾಭದಾಸೆಗಾಗಿ ಮಾನ್ಸಾಂಟೋ ಹಾಗೂ ಸಂಜೆಂಟಾದಂತ ಬಹುರಾಷ್ಟ್ರೀಯ ಕಂಪನಿಗಳು ರೈತರ ಮೇಲೆ ವಿಷಕಾರ ಬೀಜಗಳನ್ನು ಬಿತ್ತಲು ಒತ್ತಡ ಹೇರುತ್ತಿವೆ.
ಬಿಟಿ ತಳಿ ಪರಿಸರಕ್ಕೆ ಮಾರಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಪರೀಕ್ಷೆ ಮಾಡಲು ಕೂಡ ಭಾರತದಂಥ ದೇಶಗಳಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಲ್ಯಾಬ್‌ಗಳಿಲ್ಲ. ಒಂದು ವೇಳೆ ಪರೀಕ್ಷೆ ಮಾಡಲು ಮುಂದಾದರೂ ಅದರ ಫಲಿತಾಂಶ ಗೊತ್ತಾಗಲು ಕನಿಷ್ಠ ೨೦ ವರ್ಷ ಬೇಕು.
ಹೀಗಾಗಿ ಕೇಂದ್ರ ಸರಕಾರ ರೈತಸ್ನೇಹಿಯಾಗಿ ನಿರ್ಧಾರ ಕೈಗೊಂಡು ಬಿಟಿ ಬದನೆಯನ್ನು ತಿರಸ್ಕರಿಸುವುದು ಒಳಿತು. ಬಿಟಿ ಬದನೆ ಕುರಿತು ಸಾಕಷ್ಟು ಜನರಲ್ಲಿ ಅರಿವಿನ ಕೊರತೆಯಿದೆ. ಮುಖ್ಯವಾಗಿ ರೈತರಲ್ಲಿ ಈ ಕುರಿತ ಜಾಗೃತಿ ಮೂಡಲೇಬೇಕಿದೆ. ಬಿಟಿ ಬದನೆ ಕುರಿತು ಎದುರಾಗುವ ಸಮಸ್ಯೆಯ ಸಂಪೂರ್ಣ ವಿವರ ಇದುವರೆಗೂ ಸಿಕ್ಕಿಲ್ಲ. ದೊರೆತ ಮಾಹಿತಿ ಆಧರಿಸಿ ವಿಶ್ಲೇಷಿಸಿದಾಗ ಇದರಿಂದ ಆಗುವ ದುಷ್ಪರಿಣಾಮವೇ ಹೆಚ್ಚು.
ಜತೆಗೆ ಬಿಟಿ ಎಂದಾಕ್ಷಣ ಅದರ ಹಿಂದೆ ಕೇವಲ ಬೀಜ ಮಾತ್ರವಲ್ಲ ಅರ್ಥಶಾಸ್ತ್ರ, ರಾಜಕೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪಿತೂರಿ ಎಲ್ಲವೂ ಅಡಗಿದೆ. ಹೀಗಾಗಿ ಅದೊಂದು ಸುಳ್ಳಿನ ಕಂತೆ. ಭಾರತಕ್ಕೆ ಸ್ವಾತಂತ್ರ್ಯವೇನೊ ಬಂದಿದೆ ಆದರೆ ಇಂಥ ಕಂಪನಿಗಳ ವರ್ತನೆ ಒತ್ತಡಗಳನ್ನು ನೋಡಿದರೆ ಎಲ್ಲಿ ಸ್ವಾತಂತ್ರ್ಯ ಬಂದಿದೆ ಎಂಬ ಪ್ರಶ್ನೆ ಕಾಡುತ್ತದೆ ಎಂದು ವಿeನಿ ಪುಷ್ಪ ಎಂ.ಭಾರ್ಗವ್ ಹೇಳಿದರು. (ಇವು ಪ್ರಮುಖ ಅಂಶಗಳು ಮಾತ್ರ)
ರೈತರೇ ಬನ್ನಿ...
ಅಂದ ಹಾಗೆ ಇದೇ ಬಿಟಿ ಬಗ್ಗೆ ಚರ್ಚೆ ನಡೆಸಲು ಹಾಗೂ ರಾಜ್ಯದ ರೈತರ ಅಭಿಪ್ರಾಯ ಸಂಗ್ರಹಿಸಲು ಜ.೨೫ರ ಸೋಮವಾರ ಕೇಂದ್ರ ಪರಿಸ ಮತ್ತು ಅರಣ್ಯ ಸಚಿವ ಜಯ್‌ರಾಮ್ ರಮೇಶ್ ಆಗಮಿಸಲಿದ್ದಾರೆ.
ಬೆಂಗಳೂರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಸೈಂಟ್ ಜೋಸೆಂಫ್ ಪಿಯು ಕಾಲೇಜು ಮುಂಭಾಗದಲ್ಲಿರುವ ಗುಡ್ ಶೇಫರ್ಡ್ ಆಡಿಟೋರಿಮ್‌ನಲ್ಲಿ ಶೀಘ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ರೈತರು, ರೈತಪರ ಕಾಳಜಿಯುಳ್ಳವರು ಅಂದು ಸಮಯಕ್ಕಿಂತ ಮುಂಚಿತವಾಗಿಯೇ ಬಂದು ಕುಳಿತರೆ ಒಳ್ಳೆಯದು. ಜತೆಗೆ ತಮ್ಮ ರೈತಪರ ನಿಲುವನ್ನು ಪ್ರಕಟಿಸಿದರೆ ಇನ್ನೂ ಒಳಿತು. ರೈತರದಲ್ಲದವರಿಗೂ ಇದು ರಾಜ್ಯದ ರೈತರ ಅನ್ನದ ಋಣವನ್ನು ತೀರಿಸಲು ಒಂದು ಸುವರ್ಣಾವಕಾಶ !
Powered By Blogger