Thursday, June 25, 2009

ಸಂಗೀತ ನಿರ್ದೇಶಕ ಹಂಸಲೇಖ ಜೊತೆ ಹಾಗೆ ಸುಮ್ಮನೆ...

ಕನ್ನಡ ಚಿತ್ರ ರಂಗದ ದಿಗ್ಗಜ, ಸಂಗೀತ ನಿರ್ದೇಶಕಹಂಸಲೇಖ ಅವರ ಜೊತೆ ಹಾಗೆ ಸುಮ್ಮನೆ ಮಾತಿಗಿಳಿದಾಗ... ಕೇಳಿದ ಕೆಲವು ಪ್ರಶ್ನೆಗಳು, ಅವುಗಳಿಗೆ ತುಂಬಾ ಜಾಣತನದಿಂದ ಅವ್ರು ನೀಡಿದ ಉತ್ತರಗಳು ಇಲ್ಲಿವೆ. ನೀವು ಹಾಗೆ ಸುಮ್ಮನೆ ಕಣ್ಣಾಯಿಸಿ....

.ಕನ್ನಡ ಚಿತ್ರರಂಗದಲ್ಲಿ ಸಾಹಿತ್ಯಕಳವುಹೆಚ್ಚಾಗಿದ್ದೇಕೆ ?
*ಈಗ ಹೊಸ ಟ್ರೆಂಡ್ ಶುರುವಾಗಿದೆ. ಜಯಂತ ಕಾಯ್ಕಿಣಿ, ನಾಗೇಂದ್ರ ಪ್ರಸಾದ್‌ರಂಥ ಉತ್ತಮ ಸಾಹಿತಿಗಳು ಅತ್ಯುತ್ತಮ ಗೀತೆ ಬರೆಯುತ್ತಿದ್ದಾರೆ. ಕದ್ದು ಸಾಹಿತ್ಯ ಬರೆಯುವವರು ಸಾಹಿತಿಗಳೇ ಅಲ್ಲ, ಟೆಕ್ನಿಷಿಯನ್ಸ್. ಬೇರೆ ಯಾವುದೋ ಕಾರಣಕ್ಕೆ ಬಂದವರು. ಆದರೆ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ರೀಮೇಕ್ ಹಾಗೂ ಕದಿಯುವ ಸಾಹಿತ್ಯವನ್ನು ಮೊದಲಿನಿಂದಲೂ ನಾನು ವಿರೋಸಿದ್ದೇನೆ.
.ಹಿಂದಿನ ಹಂಸಲೇಖ ಎಲ್ಲೋದರು ?
*ಇಲ್ಲ, ನಾನು ಇನ್ನೂ ನನ್ನ ಟ್ರೆಂಡ್‌ನಲ್ಲಿದ್ದೇನೆ. ಕೆಲವರು ಹೊಸ ಟ್ರೆಂಡ್‌ನಲ್ಲಿದ್ದಾರೆ. ಆಗ ಪ್ರೇಮ, ಯುಗಳ ಗೀತೆಗಳೇ ಹೆಚ್ಚಾಗಿದ್ದವು. ರವಿಚಂದ್ರನ್ ಹಾಗೂ ನನ್ನದು ಒಂದು ಕಮರ್ಷಿಯಲ್ ಕಾಂಬಿನೇಷನ್ ಅಷ್ಟೇ. ಅನಂತರವೂ ‘ನೆನಪಿರಲಿ’ವರೆಗೆ ಒಳ್ಳೆ ಗೀತೆ ನೀಡಿದ್ದೇನೆ, ಜನ ಒಪ್ಪಿದ್ದಾರೆ. ಆ ಕಾರಣಕ್ಕಾಗಿಯೇ ನಾನು ಇನ್ನೂ ಚಿತ್ರರಂಗದಲ್ಲಿ ಜೀವಂತವಾಗಿದ್ದೇನೆ.
.ಈಗಿನ ಕನ್ನಡ ಸಿನಿಮಾರಂಗ ಹೇಗೆನಿಸುತ್ತದೆ ?
*ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಇದು ಪುಣ್ಯ ಕಾಲ; ಜತೆಗೆ ಅಂಜಿಕೆ ಹುಟ್ಟಿಸುವ ಕಾಲ! ಚಿತ್ರರಂಗ ಸ್ವಂತ ಕಾಲ ಮೇಲೆ ನಿಲ್ಲಲು ಹಣ ಬೇಕಿತ್ತು. ಅದನ್ನು ಕಳೆದ ಏಳೆಂಟು ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ತಂದು ಸುರಿದಿದ್ದಾರೆ. ಆ ಮೂಲಕ ನೆಲೆ ಒದಗಿಸಿಕೊಟ್ಟಿದ್ದಾರೆ. ಆದರೆ ಅವರಿಗೆ ಗುಣಮಟ್ಟ ನೀಡಲು ಆಗಿಲ್ಲ. ಅದು ಅವರ ಕೆಲಸವೂ ಅಲ್ಲ. ಪ್ರಯೋಗಗಳಿಗೆ ಇದು ಪರ್ವ ಕಾಲ. ಭಾರತದ ಏಳು ರಾಜ್ಯಗಳಲ್ಲಿ ಪ್ರಾದೇಶಿಕ ಚಿತ್ರರಂಗ ನೆಲಕಚ್ಚಿದೆ. ಆದರೆ ಕನ್ನಡದಲ್ಲಿ ನೆಲೆ ನಿಂತಿದೆ. ಅದೊಂದೇ ಅವರಿಂದ ಆದ ಉಪಯೋಗ.
.ಪಾಶ್ಚಾತ್ಯ ಸಂಸ್ಕೃತಿ ಚಿತ್ರ ಸಾಹಿತ್ಯದ ಮೇಲೆಷ್ಟು ಪರಿಣಾಮ ಬೀರಿದೆ ?
*ನಮ್ಮ ಬಂಗಾರವನ್ನು ನಾವೇ ನವೀಕರಿಸಬೇಕು, ಎಸೆಯಬಾರದು. ಜಾಗತಿಕ ಪ್ರತಿರೋಧವನ್ನು ಎದುರಿಸುವ ಎದೆಗಾರಿಕೆ, ಲಯ ನಮ್ಮಲ್ಲಿ ಹುಟ್ಟಬೇಕು. ನಮ್ಮ ದೇಸೀತನ ದೊಡ್ಡದಾಗಿ ಎದ್ದೇಳಬೇಕು. ಬುದ್ಧಿವಂತ ನಿರ್ದೇಶಕರು ನಾಯಕರ ಮಾತು ಕೇಳದೆ, ಕಥೆಯ ಮತ್ತು ಹೃದಯದ ಮಾತು ಕೇಳಬೇಕು. ಆಗ ಮತ್ತೊಂದು ಸುವರ್ಣಯುಗ ಬರುವುದರಲ್ಲಿ ಅಚ್ಚರಿಯಿಲ್ಲ.
.ದೇಸೀ ವಿದ್ಯಾಸಂಸ್ಥೆ ಸ್ಥಾಪನೆಯ ಉದ್ದೇಶ ?
*ಇದು ನನ್ನ ಪಾರ್ಟ್ ಆಫ್ ಜಾಬ್. ಕಲೆ ಇಷ್ಟು ವರ್ಷ ನನಗೆ ಗೌರವ, ಪುರಸ್ಕಾರ ತಂದುಕೊಟ್ಟಿದೆ. ಅದನ್ನು ಈಗ ಶಿಕ್ಷಣದ ಮೂಲಕ ಮರಳಿಸಬೇಕಿದೆ. ನಮ್ಮ ವಿ.ವಿಗಳು ೫೦ ವರ್ಷಗಳಿಂದ ದೇಸೀ ವಿಮರ್ಶಕರು, ಪಂಡಿತರನ್ನು ಸೃಷ್ಟಿಸಿವೆ. ಆದರೆ ದೇಸೀ ಕಲಾವಿದರನ್ನು ಹುಟ್ಟು ಹಾಕಿಲ್ಲ. ದೇಸೀಯತೆ ನಮ್ಮ ರಕ್ತದಲ್ಲಿದೆ. ಆದ್ದರಿಂದ ಶಿಕ್ಷಣದ ಮೂಲಕ ಕಲೆ, ಕಲೆ ಮೂಲಕ ಶಿಕ್ಷಣ ನೀಡಿ ದೇಸೀಯ ಕಲಾವಿದರನ್ನು ಹುಟ್ಟು ಹಾಕುವ ಸಲುವಾಗಿ ಈ ವಿದ್ಯಾಸಂಸ್ಥೆ ಸ್ಥಾಪಿಸಿದ್ದೇನೆ.

Thursday, June 18, 2009

ಶಿಕ್ಷರೆ ಇದು ಸರಿಯ...?

ಮಕ್ಕಳಿಗೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಹಾಗೂ ಗುಣವಂತರಾಗಲು ಬುದ್ದಿ ಹೇಳಬೇಕಾದ ಶಿಕ್ಷಕರೇ ಈಗ ಬುದ್ದಿ ಹೇಳಿಸಿಕೊಳ್ಳುವಂತಾಗಿದ್ದಾರೆ. ಮೊನ್ನೆ ನಡೆದ ಶಿಕ್ಷಕರ ಸಂಘದ ಚುನಾವಣೆಯೇ ಅದಕ್ಕೆ ಪ್ರತ್ಯಕ್ಷ ನಿದರ್ಶನ... ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರಾದ ಬಸವರಾಜ ಗುರಿಕಾರ್, ಅವರ ಜತೆ ನಡೆಸಿದ ಸಂದರ್ಶನ ನಿಲ್ಲಿದೆ... ಅವರು ಏನೆನ್ನುತ್ತಾರೆ ನೀವೇ ನೋಡಿ...

೧.ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗುಂಪು ರಾಜಕೀಯವೇಕೆ?
*ಗುಂಪುಗಾರಿಕೆಯಿಲ್ಲ, ಇದು ಚುನಾವಣೆಗಾಗಿ ಮಾತ್ರ. ಪ್ರತಿ ತಾಲೂಕಿನಿಂದ ಐವತ್ತು ಶಿಕ್ಷಕರಿಗೆ ಒಬ್ಬರಂತೆ ತಾಲೂಕು ಪ್ರತಿನಿಗಳನ್ನು ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ಈಗ ಚುನಾವಣೆ ನಡೆದಿದೆ. ಮುಂದೆ ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ಪದಾಕಾರಿಗಳ ಆಯ್ಕೆ ನಡೆಯುತ್ತದೆ. ಚುನಾವಣೆ ಮುಗಿದ ನಂತರ ಎಲ್ಲ ಶಿಕ್ಷಕರೂ ಒಂದೇ ರೀತಿ. ಶಿಕ್ಷಕರ ಮೊದಲ ಪ್ರಾಧಾನ್ಯತೆ ಪಾಠ. ಹೀಗಾಗಿ ಚುನಾವಣೆ ಸಮಯದಲ್ಲಿ ಅದು ಮೇಲು ನೋಟಕ್ಕೆ ಹಾಗೆ ಕಾಣುತ್ತದೆ.
೨.ಶಿಕ್ಷಕರ ಇತ್ತೀಚಿನ ನಡವಳಿಕೆಗಳು ಹೇಗನಿಸುತ್ತವೆ?
*ಶಿಕ್ಷಕರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಆದರೆ ಅವರಿಗೆ ಸೌಲಭ್ಯಗಳಿಲ್ಲ. ಶಾಲೆಗಳಲ್ಲಿ ಕುಡಿಯುವ ನೀರಿನ ಸವಲತ್ತುಗಳಿಲ್ಲ, ನಲ್ಲಿ ಸಂಪರ್ಕ ಇದ್ದರೂ ನೀರು ಬರುವುದಿಲ್ಲ. ಇದರಿಂದ ಶೌಚಾಲಯಗಳು ಉಪಯೋಗಕ್ಕೆ ಬರುತ್ತಿಲ್ಲ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕು. ಪ್ರತಿ ಶಾಲೆಗೊಂದರಂತೆ ಬೋರ್‌ವೆಲ್ ಕೊರೆಸುವುದು ಒಳಿತು. ಸ್ಥಳೀಯ ಮಟ್ಟದಲ್ಲಿ ಶೇ.೧ರಷ್ಟು ಮಾತ್ರ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸಂಘ ಬೆಂಬಲಿಸುವುದಿಲ್ಲ. ಆದರೆ ಅವುಗಳನ್ನೇ ಮುಂದಿಟ್ಟುಕೊಂಡು ಕೆಲವರು ಶಿಕ್ಷಕ ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸಲ್ಲದು.
೩.ಪ್ರಾಥಮಿಕ ಶಿಕ್ಷಕರ ಇತ್ತೀಚಿನ ಸಮಸ್ಯೆಗಳೇನು?
*ಶಿಕ್ಷಕ ಕೂಡ ಸಾಮಾನ್ಯ ಪ್ರಜೆ, ನಮಗೂ ನಮ್ಮದೇ ಆದ ಸಮಸ್ಯೆಗಳಿವೆ. ಆದರೆ ಅವುಗಳನ್ನು ಮರೆತು ಮಕ್ಕಳು ದೇವರೆಂದು ಭಾವಿಸಿ ಪಾಠ ಮಾಡುತ್ತೇವೆ. ಆದರೆ ಇತ್ತೀಚೆಗೆ ಬೋಧನೆ ಮಾಡುವ ಶಿಕ್ಷಕನಿಗೆ ಅದಕ್ಕಿಂತ ಬೇರೆ ಕೆಲಸಗಳೇ ಹೆಚ್ಚಾಗುತ್ತಿವೆ. ಸರಕಾರ ೪ನೇ ದರ್ಜೆಯ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಇದರಿಂದ ಎಲ್ಲ ಕೆಲಸಗಳನ್ನು ಶಿಕ್ಷಕರೇ ಮಾಡಿಕೊಳ್ಳಬೇಕಿದೆ. ಕಾಗದ ಪತ್ರ ತಯಾರಿಕೆ ಸೇರಿದಂತೆ ಇತರ ಕೆಲಸಗಳೇ ಹೆಚ್ಚು ಹೊರೆಯಾಗುತ್ತಿವೆ. ಇದೆಲ್ಲದರ ನಡುವೆ ಶಿಕ್ಷಕ ತನ್ನ ಚೌಕಟ್ಟನ್ನು ಮೀರದೆ ಪಾಠ ಹೇಳಿಕೊಡುತ್ತಿದ್ದಾನೆ. ಇಲ್ಲಿ ಪೋಷಕರೂ ಮಕ್ಕಳ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಎಸ್‌ಡಿಎಂಸಿಗಳಿಂದ ಅನುಕೂಲಗಳಾಗಿವೆ. ಆದರೆ ಕೆಲವೆಡೆ ಹಸ್ತಕ್ಷೇಪವೂ ಇದೆ. ಅದು ನಿಲ್ಲಬೇಕು. ಶಿಕ್ಷಕರನ್ನು ಬೇರೆ ಕೆಲಸಗಳಿಂದ ವಿಮುಕ್ತಿಗೊಳಿಸಿ, ಮುಕ್ತವಾಗಿ ಪಾಠ ಮಾಡಲು ಅವಕಾಶ ನೀಡಬೇಕು.
೪.ಸಂಯುಕ್ತ ಪ್ರೌಢ ಶಾಲಾ ವ್ಯವಸ್ಥೆಯನ್ನು ರದ್ದುಗೊಳಿಸಲು ಕಾರಣ ?
*ಅದು ತುಂಬಾ ಅವೈeನಿಕ ವ್ಯವಸ್ಥೆ. ಪ್ರೌಢಶಾಲೆ ವಿದ್ಯಾರ್ಥಿಗಳು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಒಂದೇ ಕಡೆ ವಿದ್ಯಾಭ್ಯಾಸ ಮಾಡಬೇಕಿತ್ತು. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಅದನ್ನು ರದ್ದುಗೊಳಿಸುವ ಮೂಲಕ ಮಕ್ಕಳ ಶಿಕ್ಷಣದ ಹಾದಿಯನ್ನು ಸುಗಮಗೊಳಿಸಿದ್ದೇವೆ.
೫.ನಿಮ್ಮ ಇದೂವರೆಗಿನ ಅಕಾರವಯ ಕೆಲಸ ತೃಪ್ತಿ ತಂದಿದೆಯೇ?
*ಹೌದು, ನೆರೆಯ ರಾಜ್ಯಗಳಲ್ಲಿ ಹಾಗೂ ಕೇಂದ ಸರಕಾರಿ ಪ್ರಾಥಮಿಕ ಶಿಕ್ಷಕರಿಗೂ ರಾಜ್ಯ ಶಿಕ್ಷರಿಗೂ ಬಹಳ ವ್ಯತ್ಯಾಸವಿತ್ತು. ಸರಕಾರದ ಮೇಲೆ ಒತ್ತಡ ಹೇರಿ ನನ್ನ ಅವಯಲ್ಲಿ ೫ನೇ ವೇತನ ಆಯೋಗದಂತೆ ಆರಂಭಧ ವೇತನವನ್ನು ೬,೮೦೦ ರೂ.ಗಳಿಂದ ಹಾಗೂ ಅಂತಿಮ ವೇತನವನ್ನು ೧೩,೦೦೦ರೂ. ವರೆಗೆ ಹೆಚ್ಚಿಸಲು ಶ್ರಮಿಸಿದ್ದೇವೆ. ೨೦೦ರೂ. ವಿಶೇಷ ವೇತನ ಜಾರಿಗೊಳಿಸಲು ವ್ಯವಸ್ಥೆ ಮಾಡಿದ್ದೇವೆ. ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ೭೪೧೬ ಹುದ್ದೆಗಳು ಮಂಜೂರು ಮಾಡಿಸಿದ್ದೇವೆ.

Tuesday, June 2, 2009

ಎಲ್ಲಿದೆಯೋ ನ್ಯಾಯ....? ಅಣ್ಣಾ...

ಬೆಂಗಳೂರಿನಲ್ಲಿ ಅದೇ ಹಳೇ ಪ್ರವೃತ್ತಿ ಮುಂದುವರಿದಿದೆ. ಹೈಟೆಕ್ ಸಿಟಿ, ಐಟಿ ಬಿಟಿ ಕೇಂದ್ರ ಎಂದೆಲ್ಲ ನಮ್ಮನ್ನು ನಾವೇ ಬೆನ್ನು ತಟ್ಟಿಕೊಳ್ಳುತ್ತಿದ್ದರೂ ಇಲ್ಲಿ ಇನ್ನೂ ಮೂಲ ಸವಲತ್ತುಗಳು ದೊರೆಯುವುದು ಕನಸಾಗಿಯೇ ಉಳಿದಿದೆ. ಇದಕ್ಕೆ ಪ್ರಮುಖ ಕಾರಣ ಜನಪ್ರತಿನಿಗಳು ಎಂದು ನೇರವಾಗಿಯೇ ಹೇಳಬಹುದು.
ಮೊನ್ನೆ ಮಾಯಾನಗರದಲ್ಲಿ ಬಿದ್ದ ಮಳೆಗೆ ತಾಯಿಯ ಕೈ ಅಂಚಿನಲ್ಲಿದ್ದ ಎಳೆಯ ಕರುಳ ಕುಡಿಯೊಂದು ಕಣ್ಣೆದುರೇ ಲಿಂಗರಾಜಪುರದ ಮೋರಿಯಲ್ಲಿ ಕೊಳಚೆ ನೀರುಪಾಲಾಗಿದೆ! ಆ ಹೆತ್ತಮ್ಮನ ಆರ್ತನಾಧ ಮುಗಿಲು ಮುಟ್ಟಿದೆ. ಆದರೆ ಮೂರು ದಿನವಾದರೂ ಆ ಮಗುವನ್ನು ಹುಡುಕುವಲ್ಲಿ ಇಲ್ಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ವಿಫಲವಾಗಿದೆ.
ಸ್ಥಳೀಯ ಜನರು ಮಗುವಿಗಾಗಿ ನಡೆಸಿದಷ್ಟೂ ಶೋಧವನ್ನು ನುರಿತ, ಪರಿಣಿತ ಅಕಾರಿಗಳು ನಡೆಸದಿರುವುದು, ಸ್ಥಳಕ್ಕೆ ತೆರಳಿ ಹೆತ್ತ ಕರುಳಿಗೆ ಸಾಂತ್ವನ ಹೇಳಲೂ ಪುರುಸೊತ್ತಿಲ್ಲದ ಮುಖ್ಯಮಂತ್ರಿ ಹಾಗೂ ಸಚಿವರ ನಡವಳಿಕೆ ನಿಜಕ್ಕೂ ನಾಚಿಕೆಗೇಡು. ‘ಅಕಾರದ ಕೊಳಕು ಚರಂಡಿ’ಯಲ್ಲಿ ಅಸ್ತಿತ್ವಕ್ಕಾಗಿ ಒದ್ದಾಡುತ್ತಿರುವ ಜನಪ್ರತಿನಿಗಳಿಗೆ ಮುಗ್ದ ಮಗು ಅಭಿಷೇಕ್‌ನ ಸಾವಾಗಲಿ, ಅವನ ತಾಯಿಯ ಕರುಳಿನ ಕೂಗಾಗಲಿ ಎಲ್ಲಿ ಕೇಳಿಸುತ್ತದೆ?
ಮೊನ್ನೆ ಮೊನ್ನೆಯಷ್ಟೇ ‘ದಾಖಲೆ ಪ್ರಮಾಣದ ತೆರಿಗೆ ಸಂಗ್ರಹ’ ಮಾಡಿದ್ದೇವೆ ಎಂದು ಬೀಗುತ್ತ ಪ್ಯಾಲೇಸ್ ಗ್ರೌಂಡ್‌ನಲ್ಲಿ ಕಂಠಪೂರ್ತಿ ಮಾಡು ತಿಂದು, ಕುಡಿದು, ತೇಗಿರುವ ಅಕಾರಿಗಳಿಗೆ ಇನ್ನೂ ಅದರ ಕಮಟು ಇಳಿದಿಲ್ಲ; ಅಮಲಿನ್ಲಿಯೇ ತೇಲಾಡುತ್ತಿದ್ದಾರೆ. ಅದಕ್ಕಾಗಿಯೇ ಒಂದಿಡೀ ದಿನ ಚರಂಡಿಯಲ್ಲಿ ಕುಳಿತು ಮಗು ಸಿಗಲಿಲ್ಲ ಎಂದು ಎದ್ದು ಬಂದು ಕೈ ತೊಲೆದುಕೊಂಡರು. ಅನಾಹುತಗಳು ನಡೆದಾಗೆಲ್ಲ ನೆಪ ಮಾತ್ರಕ್ಕೆ ಪರಿಹಾರ ಘೋಷಿಸುವುದೊಂದೇ ‘ಸಾಧನೆ’ ಎಂದುಕೊಂಡಿರುವ ಅಕಾರಿಗಳು, ಜನಪ್ರತಿನಿಗಳಿಗೆ ಜನರೇ ಬುದ್ದಿ ಕಲಿಸಬೇಕು.
ಮಾನವೀಯತೆ ಮರೆತ ಸಿಎಂ:
ಮಗು ಚರಂಡಿಯಲ್ಲಿ ತೇಲಿ ಹೋಗಿದೆ ಎಂಬ ಬ್ರೇಕಿಂಗ್ ನ್ಯೂಸ್ ಎಲ್ಲ ಟಿವಿ ಚಾನೆಲ್‌ಗಳಲ್ಲೂ ನಿರಂತರವಾಗಿ ಪ್ರಸಾರವಾಗುತ್ತಲೇ ಇದೆ. ಆದರೆ ಮುಖ್ಯಮಂತ್ರಿ ಮಾತ್ರ ‘ಯಾತ್ರೆ’ಯಲ್ಲಿದ್ದಾರೆ! ಊರಿಗೆಲ್ಲಾ ಬೆಂಕಿ ಬಿದ್ದಾಗ ಅವನ್ಯಾವನೋ ಪಿಟೀಲು ಕೊಯ್ಯುತ್ತಿದ್ದನಂತೆ ಹಾಗೆ ಮುಖ್ಯಮಂತ್ರಿ ಎನಿಸಿಕೊಂಡ ‘ದೊರೆ’ ಬಿ.ಎಸ್.ಯಡಿಯೂರಪ್ಪ ಸಾಯಿಬಾಬಾ ಜತೆ ದರ್ಭಾರಿನಲ್ಲಿದ್ದರು. ಪತ್ನಿ ಸತ್ತಾಗಲೇ ಕಣ್ಣೀರು ಸುರಿಸದ ಕರುಣೆಯಿಲ್ಲದ ವ್ಯಕ್ತಿ ಕರುನಾಡಿಗೆ ಮುಖ್ಯಮಂತ್ರಿ(ಕೆಲವರು ಅವನೇ ಕೊಂದಿದ್ದು ಎನ್ನುತ್ತಾರೆ!?).
ಪರಿಹಾರವೇ ಎಲ್ಲವನ್ನೂ ನಿವಾರಿಸಿ ಬಿಡುತ್ತದಾ? ಒಂದು ಮುಗ್ದ ಮಗುವಿನ ಸಾವಿನ ಬೆಲೆ ಕೇಲವ ಒಂದು ಲಕ್ಷ ರೂಪಾಯಿಗೆ ಮಾತ್ರ ಸೀಮಿತವಾ? ಇದೇ ಒಬ್ಬ ಜನಪ್ರತಿನಿಗಿರುವ ನಿಜವಾದಾ ಲಕ್ಷಣವಾ...? ಕಳಕಳಿಯಾ...?
Powered By Blogger