Monday, March 16, 2009

ಹೊರಗಣವರಿವರು...

ಎರಡು ಗೊಡ್ಡೆಮ್ಮೆ, ಗೊಡ್ಡು ದನ ಕಟ್ಟಿಕೊಂಡು ಪೋಟೋಕ್ಕೆ ಫೋಜು ಕೊಡುವ ಅವರ (ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ) ಬಳಿ ವೋಟು ಇಲ್ಲ, ಪಾಟೂ ಇಲ್ಲ, ಅವರು ಬಿಜೆಪಿ ಸ್ವಾಮಿ...’
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಈ ಮಾತಿನ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ. ಅವರೇನೋ ಮಹಾ ಅಪರಾಧ ಮಾಡಿಬಿಟ್ಟರು ಎಂಬಂತೆ ಬಲಪಂಥೀಯ ರಾಜಕೀಯ ಮುಖಂಡರು, ಬರಹಗಾರರು ಅವರನ್ನು ಟೀಕಿಸಲು ಮುಂದಾಗುತ್ತಿದ್ದಾರೆ. ಕೇವಲ ಚೆಡ್ಡಿ ತೊಟ್ಟ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿರುವ ಹವ್ಯಕ ಬ್ರಾಹ್ಮಣ ನಾಯಕರು ಕೂಡ ‘ಬಂಗಾರಪ್ಪ ಅವರ ಈ ಹೇಳಿಕೆ ಖಂಡನೀಯ’ ಎಂದು ಪಕ್ಷಾತೀತದ ಹೆಸರಿನಲ್ಲಿ ಪ್ರೆಸ್‌ಮೀಟ್ ಮಾಡಿ ಫೋಜು ಕೊಡುತ್ತಿದ್ದಾರೆ. ಇದೆಲ್ಲಾ ಯಾವ ಪುರುಷಾರ್ಥಕ್ಕೆ...?
ಸಮಾಜದಲ್ಲಿ ಬಡತನ, ದಾರಿದ್ರ್ಯ, ಮೌಢ್ಯತೆಗಳು ಇನ್ನೂ ರಾರಾಜಿಸುತ್ತ ರೌದ್ರ ನರ್ತನ ನಡೆಸಿವೆ. ಆಧುನಿಕತೆ, ತಂತ್ರeನದ ಹೆಸರಿನಲ್ಲಿ ನಾವು ಏನೆಲ್ಲಾ ಮಾಡಿದರೂ ಈ ಮೌಢ್ಯಗಳು, ಪೊಳ್ಳು ಕಂದಾಚಾರಗಳನ್ನು ಇನ್ನೂ ದೂರ ಮಾಡಿಲ್ಲ, ಉನ್ನತ ವ್ಯಾಸಂಗ ಮಾಡಿ ಪ್ರತಿ ವರ್ಷ ಹೊರ ಬರುವ ಲಕ್ಷಾಂತರ ಯುವಕ ಯುವತಿಯರು ಪ್ರತಿಭೆ ಇದ್ದೂ ಇಂದು ಅನಾಥರಂತೆ ಸರಕಾರ ನೀಡುವ ಸರ್ಟಿಪಿಕೇಟ್ ಹಿಡಿದು ಬೀದಿಗೆ ಬಿಳುತ್ತಿದ್ದಾರೆ. ಇಂಥ ವಿಚಾರಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.
ಯಾವುದೋ ಒಬ್ಬ ಸ್ವಾಮೀಜಿಯ ವಿರುದ್ಧ ಅಪ್ಪಿ ತಪ್ಪಿ ಒಂದು ಮಾತಂದರೆ ಅದೇ ದೊಡ್ಡ ವಿಷಯವಾಗಿ ಚರ್ಚೆಗೆ ಕೂತುಬಿಡುತ್ತದೆ. ಹೀಗಾದರೆ ಈ ಸಮಾಜದಿಂದ ಜಾತೀಯತೆ, ಮೌಢ್ಯತೆಗಳು ಎಲ್ಲಿಂದ ದೂರವಾಗುತ್ತವೆ ?
ಬಡತನ ಎನ್ನುವುದು ಕೇವಲ ದಲಿತರಿಗೆ, ಹಿಂದುಳಿದವರಿಗೆ ಸೀಮೀತವಾಗಿಲ್ಲ. ಬ್ರಾಹ್ಮಣತ್ವ ಎನ್ನುವುದು ಕೇವಲ ಬ್ರಾಹ್ಮಣ ಜಾತಿಯವರಿಗೆ ಮಾತ್ರ ಅಂಟಿಕೊಂಡಿಲ್ಲ ಅಲ್ಲೂ ಲಕ್ಷಾಂತರ ಕುಟುಂಬಗಳು ಅನ್ನ ನೀರಿಲ್ಲದೆ ಪರಿತಪಿಸುತ್ತಿವೆ. ಇವೆರಡೂ ಎಚ್‌ಐವಿ ವೈರಸ್ ಇದ್ದ ಹಾಗೆ. ಎಲ್ಲೆಡೆ ಸದ್ದಿಲ್ಲದೆ ಪಸರಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ, ಮನುಕುಲವನ್ನೇ ನಾಶ ಮಾಡುತ್ತಿವೆ. ಶಿವಮೊಗ್ಗದ ಹೊಸನಗರ ತಾಲೂಕಿನಲ್ಲಿರುವ ರಾಮಚಂದ್ರಾಪುರ ಮಠದ ಬಗ್ಗೆ ಸರಿ ಸುಮಾರು ೧೦ ವರ್ಷಗಳ ಹಿಂದೆ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ಆ ಗದ್ದುಗೆಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಎಂಬ ವ್ಯಕ್ತಿ ಬಂದು ಕುಳಿತರೋ ಅಲ್ಲಿಂದ ಅದು ಪ್ರಖ್ಯಾತವಾಗುತ್ತಾ ಬರುತ್ತಿದೆ. ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ಪ್ರತಿಷ್ಠೆ ಮೆರೆಯುತ್ತಿದೆ.
ಧನಕರುಗಳುನ್ನು ಸಾಕಿ ಬೆಳೆಸುವುದು, ಅವುಗಳನ್ನು ಉಳಿಸಿ, ಜೋರ್ಣೋದ್ಧಾರ ಮಾಡುವುದು ಕೇವಲ ಒಂದು ಮಠ, ಮಂದಿರ, ಮಸೀದಿ ಅಥವಾ ಚರ್ಚ್‌ನಿಂದ ಮಾತ್ರ ಸಾಧ್ಯವಿಲ್ಲ. ಅವು ಈ ದೇಶಕ್ಕೆ ಅನ್ನ ನೀಡುವ ಅನ್ನದಾತನ ಸ್ನೇಹಿತರು. ಬೇರೆ ಯಾವುದೇ ಉದ್ಯಮವನ್ನು ಕಟ್ಟಿ ಬೆಳೆಸಬಹುದು. ಆದರೆ ಕೃಷಿ ಹಾಗೂ ರೈತನ ಬದುಕನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಧನಕರುಗಳನ್ನು ಉಳಿಸಿ ಬೆಳೆಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಅದು ಸರಕಾರದಿಂದ ಆಗಬೇಕು. ಕೃಷಿಯಿಂದ ಅವು, ಅವುಗಳಿಂದ ಕೃಷಿ. ಇಂದು ದಿನೇ ದಿನೆ ಕೃಷಿ ರೈತರಿಂದಲೂ ದೂರವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಜಮೀನನ್ನು ಒಟ್ಟೊಟ್ಟಿಗೆ ಸರಕಾರ ಕಿತ್ತುಕೊಂಡು ಅವರನ್ನು, ಅವರ ದನಕರುಗಳನ್ನು ಬೀದಿಗೆ ತಳ್ಳುವ ಸರಕಾರದಿಂದ ಆ ಕೆಲಸ ಸಾಧ್ಯವೇ?
ಇಂದು ಲಕ್ಷಾಂತರ ಜೆಒಸಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಪರಿತಪಿಸುತ್ತಿದ್ದಾರೆ. ಆ ಪರೀಕ್ಷೆ ನಡೆಸಿದರೆ ಸರಕಾರದ ಬೊಕ್ಕಸಕ್ಕೆ ೧೦ ಲಕ್ಷ ರೂ. ಹೊರೆಯಾಗುತ್ತದೆ ಎಂಬ ಒಂದೇ ಕಾರಣಕ್ಕೆ ವೃತ್ತಿ ಶಿಕ್ಷಣ ಇಲಾಖೆಯು ಪರೀಕ್ಷೆ ನಡೆಸುತ್ತಿಲ್ಲ. ಇದರಿಂದ ಈ ಎಲ್ಲ ವಿದ್ಯಾರ್ಥಿಗಳ ಬದುಕು ಕತ್ತಲೆಯಲ್ಲಿ ಸಾಗುತ್ತಿದೆ. ಒಂದೊಂದು ಮಠ ಮಾನ್ಯಗಳಿಗೆ ಲಕ್ಷಾಂತರ ರೂ.ಗಳನ್ನು ಚಿಲ್ಲರೆ ಕಾಸಿನಂತೆ ಬಿಜೆಪಿ ಸರಕಾರ ಹಂಚುತ್ತಿದೆ. ಈ ದೇಶದ ಆಸ್ತಿ, ಭಾವೀ ಪ್ರಜೆಗಳು, ಸ್ವಂತ ಕಾಲ ಮೇಲೆ ನಿಲ್ಲಲು ವೃತ್ತಿ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ಓದುವ ವಿದ್ಯಾರ್ಥಿಗಳ ಮೇಲೆ ಈ ಸರಕಾರ ಅದೆಷ್ಟು ಪ್ರೀತಿ ತೋರುತ್ತಿದೆ ನೋಡಿ...
ಇನ್ನು ಮಠ ಮಂದಿರ, ಮಸೀದಿ ಚರ್ಚ್‌ಗಳು ಜನ ಸಮಾನ್ಯರನ್ನು ಜಾತಿ ಮತ ಭೇದ ಮರೆತು ಒಂದುಗೂಡಿ ಸಾಮರಸ್ಯದಿಂದ ಬಾಳವಂತೆ ಮಾಡಿ ಅದಕ್ಕೆ ಪ್ರೇರಣೆಯಾಗಬೇಕು. ಆದರೆ ಈ ಮಠಗಳು ಮಾಡುತ್ತಿರುವುದಾದರೂ ಏನು ? ಮನುಷ್ಯ ಸಂಕುಲವನ್ನೇ ಜಾತಿ ಧರ್ಮಗಳ ಹೆಸರಿನಲ್ಲಿ ಜನರನ್ನು ತುಂಡು ತುಂಡು ಮಾಡುತ್ತಿವೆ. ಒಂದ ಸಮುದಾಯದ ಮಠಗಳಿಗೂ ಇನ್ನೊಂದು ಸಮುದಾಯದ ಮಠಗಳಿಗೂ ಬದ್ಧ ವೈರತ್ವ. ಪುಡಾರಿ ರಾಜಕಾರಣಿಗಳಿಗೂ ಮಠಗಳಲ್ಲಿನ ಸ್ವಾಮೀಜಿಗಳಿಗೂ ಈಗ ಯಾವುದೇ ವ್ಯತ್ಯಾಸಗಳಿಲ್ಲವಾಗಿದೆ. ಅದಕ್ಕೆ ಮೂರ್‍ನಾಲ್ಕು ವರ್ಷಗಳಿಂದೀಚಿನ ಘಟನಾವಳಿಗಳೇ ಪ್ರತ್ಯಕ್ಷ ನಿದರ್ಶನ.
ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡಿ, ಜಾತಿ, ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ಕೊಳ್ಳಿ ಇಟ್ಟು ಅದರ ಝಳದಲ್ಲಿ ಕೈ ಕಾಯಿಸುವುದು, ಬೇಳೆ ಬೇಯಿಸಿಕೊಳ್ಳುವುದನ್ನು ಬಿಜೆಪಿ ಸರಕಾರ ಹಾಗೂ ಅದರ ಅಂಗ ಸಂಘಗಳು ಮೊದಲು ಬಿಡಲಿ, ಮಠ ಮಂದಿರಗಳನ್ನು ಪೋಷಿಸುವುದನ್ನು ನಿಲ್ಲಿಸಿ ಸಮಾಜದ ಒಟ್ಟು ಏಳಿಗೆಗೆ ಶ್ರಮಿಸಲಿ. ಇಲ್ಲ, ಸ್ವಾಸ್ಥ್ಯ ಸಮಾಜದಿಂದ ತಮ್ಮ ಪಾಡಿಗೆ ತಾವು ದೂರ ಇರಲಿ...

Thursday, March 12, 2009

ಎಲ್ಲರೂ ಒಂದೇ ದೋಣಿಯ ಕಳ್ಳರು...

ರಾಜಕೀಯ ಅನ್ನೋದೇ ಹೊಲಸು ಹೀಗಂತಾ ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣ ನಮ್ಮ ಜನಪ್ರತಿನಿಗಳು ಹಾಗೂ ಅವರು ಆಡುವ ದೊಂಬರಾಟ. ಇಲ್ಲಿ ಯಾರೂ ಸಾಚಾ ಅಲ್ಲ, ಯಾರೂ ನಿಷ್ಠನಲ್ಲ, ಯಾರೂ ಪ್ರಮಾಣಿಕರಲ್ಲ ಎಂಬುದೇ ಅದರ ಅರ್ಥ.
ರಾಜಕಾರಣ ಎನ್ನುವುದು ಒಂದು ಸಮುದ್ರ. ಇಲ್ಲಿ ಈಜಿದಷ್ಟೂ ನಮ್ಮ ಜನಪ್ರತಿನಿಗಳಿಗೆ ಖುಷಿಯೋ ಖುಷಿ. ಮನ ತಣಿಯುವುದೇ ಇಲ್ಲ . ಏಳಲಿ, ಮುಳುಗಲಿ, ನೀರು ಕುಡಿಯಲಿ, ಕುಡಿಸಲಿ ಎಲ್ಲದೂ ಒಂದು ರೀತಿಯ ಖುಷಿ . ಅಷ್ಟೆಲ್ಲಾ ಏಳು ಬೀಳುಗಳನ್ನು ಕಂಡರೂ ಅವರನ್ನು ಒಮ್ಮೆ ಕೇಳಿ ನೋಡಿ? ‘ರಾಜಕೀಯದಲ್ಲಿದ್ದೊಷ್ಟು ಹೊಲಸು ಬೇರೆಲ್ಲೂ ಇಲ್ಲ, ಇಲ್ಲಿ ಯಾರಿಗೂ ತತ್ತ್ವ ಸಿದ್ಧಾಂತಗಳಿಲ್ಲ, ಎಲ್ಲರೂ ...ಬಿಟ್ಟಿದ್ದಾರೆ.’ ಎಂದು ಕಟುವಾಗಿ ಮಾತನಾಡುತ್ತಾರೆ.
ಈ ಸಾಗರದಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ, ಸಂಘಪರಿವಾರಕ್ಕೆ ‘ರಾಮಬಾಣ’ವೇ ಅಸ್ತ್ರ. ಕಾಂಗ್ರೆಸ್ ಬತ್ತಳಿಕೆಯಲ್ಲಿರುವುದು ‘ಗಾಂವಾದ’. ಜೆಡಿಎಸ್‌ನಲ್ಲಿರುವುದು ‘ಜಾ(ತ್ಯ)ತೀ(ತ)ವಾದ ’. ಇನ್ನು ಉಳಿದ ಪಕ್ಷಗಳು ಕೂಡ ಅವರದ್ದೇ ಆದ ಬತ್ತಳಿಕೆಯಲ್ಲಿ ಅವರದ್ದೇ ಆದ ‘ಅಸ್ತ್ರ’ಗಳನ್ನು ಇಟ್ಟುಕೊಂಡಿವೆ. ಇವರೆಲ್ಲರೂ ಹೇಳುವುದು ಒಂದೇ ‘ ಅವರು ಸರಿ ಇಲ್ಲ’. ಇವರೆಲ್ಲರೂ ಬೇರೆಯವರನ್ನು ಬೆರಳು ಮಾಡಿ ತೋರಿಸುತ್ತಾರೆ. ಆದರೆ ಅವರ ನಾಲ್ಕು ಬೆರಳುಗಳು ಮಾತ್ರ ಆಪಾದಿಸುವವರನ್ನೇ ತೋರಿಸುತ್ತಿರುತ್ತವೆ. ಇದು ಇಂದಿನ ರಾಜಕೀಯ.
ಇಲ್ಲಿನ ಚಟವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸರಳವಾಗಿ ಹೇಳುವುದಾದರೆ ‘ಎಲ್ಲೂ ಸಲ್ಲದವನು ಇಲ್ಲಿ ಸಲ್ಲುವನಯ್ಯ’. ರಾಜಕೀಯ ಪರಿಣಿತರು, ಧುರೀಣರೇ ಹೇಳುವ ಹಾಗೆ ರಾಜಕೀಯದಲ್ಲಿ ಯಾರೂ ಶತೃಗಳಲ್ಲ, ಯಾರೂ ಮಿತ್ರರಲ್ಲ. ಜತೆಗೆ ಇವರ್‍ಯಾರಿಗೂ ಇಂದಿನ ಸ್ಥಿತಿಯಲ್ಲಿ ರ್ನಿಷ್ಟ ತತ್ತ್ವ ಸಿದ್ಧಾಂತಗಳಿಲ್ಲ!
‘ಮೊದ ಮೊದಲು ಬಂಗಾರಪ್ಪ ಅವರನ್ನು ಪಕ್ಷಾಂತರಿ, ಒಂದು ಪಕ್ಷದಲ್ಲಿ ಉಳಿಯುವುದು ಗೊತ್ತಿಲ್ಲ. ಅವರಿಗೆ ಅಕಾರ ಬೇಕು’ ಎಂದು ಹೇಳುತ್ತಿದ್ದ ಘಟಾನುಘಟಿ ರಾಜಕಾರಣಿಗಳಲ್ಲಿ ಕೆಲವರು ಈಗ ಆಪರೇಷನ್ ಕಮಲಕ್ಕೆ ಸಿಕ್ಕಿ ಗಾಳದೊಳಗಿನ ಮೀನುಗಳಾಗಿದ್ದಾರೆ. ಮತ್ತೆ ಕೆಲವರು ತತ್ತ್ವ ಸಿದ್ಧಾಂತಗಳನ್ನೆಲ್ಲಾ ಗಾಳಿಗೆ ತೂರಿ ಒಂದು ಸುತ್ತು ಸುತ್ತಿ, ಸುಸ್ತಾಗಿ ಮತ್ತೆ ಅದೇ ಪಕ್ಷಕ್ಕೆ ಬಂದು ನೆಲೆ ನಿಂತಿದ್ದಾರೆ. ಬಂಗಾರಪ್ಪನವರನ್ನು ರಾಜಕೀಯವಾಗಿ ವಿರೋಸುತ್ತಿದ್ದವರು ಅವರನ್ನೂ ಮೀರಿಸುವಂತೆ ಪಕ್ಷಾಂತರ ಮಾಡಿ ‘ಮರಕೋತಿ’ ಎನಿಸಿಕೊಂಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಜೆಡಿಯು, ಬಿಜೆಪಿ ಯಾವುದೇ ಪಕ್ಷಕ್ಕೆ ಹೋದರೂ ಅಲ್ಲಿ ಎಲ್ಲರೂ ಕನವರಿಸುವುದು ಅಕಾರದ ಗದ್ದುಗೆಯನ್ನೇ. ಆದರೆ ಹೆಸರಿಗೆ ಮಾತ್ರ, ಜನಸಾಮಾನ್ಯರನ್ನು ಯಾಮಾರಿಸಲು, ತೋರುಗಾಣಿಕೆಗೆ ತತ್ತ್ವ ಸಿದ್ಧಾಂತ ಹಾಗೂ ವ್ಯಕ್ತಿಗತ ವಿಚಾರಗಳನ್ನು ಮುಂದಿಡುತ್ತಾರಷ್ಟೆ. ಅದು ಈಗ ಮತ್ತೆ ಸಾಭೀತಾಗಿದೆ. ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದೆ ಎಂದು ಒಂದು ಕಾಲದಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಗೌಡರು ಜನತಾ ದಳ ಛದ್ರವಾದ ನಂತರ ಜಾ(ತ್ಯ)ತೀ(ತ) ಜನತಾದಳ ಮಾಡಿ, ಅದರ ನೆರಳಲ್ಲೇ ತಮ್ಮ ಮಕ್ಕಳಾದ ಕುಮಾರಸ್ವಾಮಿ, ರೇವಣ್ಣ ಅವರನ್ನು ಪೋಷಿಸಿ ಬೆಳೆಸಿದರು. ಅದು ನಡೆದದ್ದು ಅಕಾರ ಬಂದ ನಂತರವೇ...
ಈಗ ಅದೇ ಕೆಲಸವನ್ನು ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮಾಡಿದ್ದಾರೆ. ತಮ್ಮ ಪುತ್ರ ಇದೂವರೆಗೆ ಬಿಜೆಪಿಗಾಗಿ ಏನನ್ನೂ ಮಾಡದಿದ್ದರೂ ಶಿಕಾರಿಪುರ ಪುರಸಭೆಯ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. ಈಗ ನೇರವಾಗಿ ದಿಲ್ಲಿಗೆ ದಿಬ್ಬಣ ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕುಟುಂಬ ರಾಜಕಾರಣವನ್ನು ವಿರೋಸುತ್ತಿದ್ದ ಯಡಿಯೂರಪ್ಪನವರೇ ಈಗ ತಮ್ಮ ಮಗನಿಗೆ ಲೋಕಸಭೆಗೆ ಟಿಕೆಟ್ ಕೊಡಿಸುವ ಮೂಲಕ ‘ಪುತ್ರ ವಾತ್ಸಲ್ಯ’ ಮೆರೆಯುತ್ತಿದ್ದಾರೆ.
ಇದರಿಂದ ಎಲ್ಲ ರಾಜಕೀಯ ಪಕ್ಷಗಳು, ನಾಯಕರೂ ಪರಿತಪಿಸುವುದು ಅಕಾರಕ್ಕಾಗಿ ಎಂಬುದು ಸಾಭೀತಾಗಿದೆ. ಎಲ್ಲರ ಮನದಾಳದ ಮೂಲೆಯಲ್ಲಿರುವುದು ದೇಶದ ಅಥವಾ ರಾಜ್ಯದ ಹಿತಕ್ಕಿಂತ ಕುಟುಂಬದ ಹಿತ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ. ಇವರೆಲ್ಲಾ ಒಂದೇ ದೋಣಿಯಲ್ಲಿ ಬಂದಿರುವ, ನಾನಾ ಮುಖವಾಡಗಳನ್ನು ಅಂಟಿಸಿಕೊಂಡಿರುವ ಕಳ್ಳರು ಎನ್ನುವುದು ಧೃಡಪಟ್ಟಿದೆ.
ಚುನಾವಣೆ ಮತ್ತೆ ಜನರ ಮುಂದೆ ಬಂದಿದೆ. ಮುಗ್ದ ಮತದಾರನ ಮತವನ್ನು ಕೊಳ್ಳೆ ಹೊಡೆದ ಅಥವಾ ಕೊಳ್ಳೆ ಹೊಡೆಯುವ ಖದೀಮರು ಯಾರು ಎಂದರೆ ಉತ್ತರ ಅದೇ. ಒಂದೇ ದೋಣಿಯ ಕಳ್ಳರು...!
Powered By Blogger