Tuesday, July 17, 2012

ಜಿ.ಎಸ್.ಶರ್ಮಾ ಎಂಬ ಹೆಗ್ಗಣ...!


ಜಿ.ಎಸ್.ಶರ್ಮಾ
ಕೇವಲ 31 ಶಾಲೆಗಳು ಬೆಂಬಲ ನೀಡುತ್ತಿವೆ ಎನ್ನುವ ಒಂದೇ ಕಾರಣಕ್ಕೆ ತಮಗೇನೂ ಬಾರಿ ಬೆಂಬಲ ಸಿಕ್ಕ ಹಾಗೆ ಬೀಗುತ್ತಿರುವ ಕುಸ್ಮಾ(ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ)  ಅಮಾಯಕ ಶಾಲಾ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಲು ಅಣಿಯಾಗಿದೆ!
ಶಿಕ್ಷಣ ಕಾಯಿದೆ ಹಕ್ಕನ್ನೇ ವಿರೋಧಿಸುತ್ತಿರುವ ಕುಸ್ಮಾ ಸಂಘಟನೆಯ ವಾದ ನಿಜಕ್ಕೂ ಕಿಡಿಗೆಡಿತನದ್ದು. ಸಾಮಾನ್ಯ ಸಾರ್ವಜನಿಕರನ್ನೇ ಮನಸೋ ಇಚ್ಛೆ ನಿಂದಿಸುವ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಸ್.ಶರ್ಮಾ ಅವರದ್ದು ತೀರ ಬ್ಲ್ಯಾಕ್ ಮೇಲೆ ತಂತ್ರ. ಸರಕಾರದ ನೀತಿ ನಿಯಮಗಳನ್ನೇ ಗಾಳಿಗಿ ತೋರಿ ಶಾಲೆಗಳನ್ನು ನಡೆಸುತ್ತ ಅದನ್ನೇ ಉದ್ಯಮ ಮಾಡಿಕೊಂಡಿರುವ ಶಾಲೆಗಳು ಇಂಥವರ ಬೆನ್ನಿಗೆ ನಿಂತಿವೆ. ಆದರೆ ಸರಕಾರ ಹಾಗು ಇಂಥ ಸಂಘಟನೆಯ ಜಗಳದ ಮಧ್ಯೆ ಮಕ್ಕಳ ಓದು ಹಾಳಾಗುತ್ತಿದೆ. ಒಂದು ದಿನವೂ ಶಾಲೆಗೇ ತಪ್ಪಿಸದೇ ಶಾಲೆಗೇ ಮಕ್ಕಳನ್ನು ಕಲಿಸುವ ಪೋಷಕರು ಇಂಥ ವ್ಯವಸ್ಥೆಯ ಬಗ್ಗೆ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಸರಕಾರೀ ಶಾಲೆಗಳಲ್ಲಿ ಓದುವ ಮಕ್ಕಳು ಹಾಗು ಪೋಷಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಶರ್ಮಾ, ಈ ದೇಶದಲ್ಲಿ  ಇಂದು ಉನ್ನತ ಹುದ್ದೆಯಲ್ಲಿದ್ದವರೆಲ್ಲ ಒಂದು ಕಾಲದಲ್ಲಿ ಅದೇ ಸರಕಾರೀ ಶಾಲೆಯಲ್ಲಿ ಓದು ಮುಂದೆ ಮನದವರು. ಅದೇ ಸರಕಾರಿ ಶಾಲೆಯ ಶಿಕ್ಷಕರ ಕೈಲಿ ಕಲಿತವರು ಎನ್ನುವುದನ್ನು ಮರೆತಂತಿದೆ. ಅವರಿಗೆ ಈಗ ಅವರ ಬೆಲೆ ಬೆಯಬೇಕಷ್ಟೇ ಹೊರತು. ಸಾಮಾನ್ಯ ಮಕ್ಕಳ ಹಾಗು ಅವರ ಭವಿಷ್ಯದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಹಣ ಮಾಡುವುದೊಂದೇ ಉದ್ದೇಶ ಮಾಡಿಕೊಂಡಿರುವ ಇಂಥ ಹೆಗ್ಗಣಗಳನ್ನು ಹೆಣ ಮಾಡಿ ಮಣ್ಣು ಮುಚ್ಚುವವರೆಗೆ ಈ ರಾಜ್ಯ, ದೇಶದಲ್ಲಿ ಶಿಕ್ಷಣಕ್ಕೆ ಬೆಲೆ ಬರುವುದಿಲ್ಲ...

1 comment:

Anonymous said...

Nimma maatu nija sir. badavaru illi badavaraagiye uliyuttiruvuu intha kaaranagaligaayiye..

Powered By Blogger