Saturday, January 22, 2011

ಮಾನಗೆಟ್ಟ ಸಿ.ಎಂ. : ಮರ್ಯಾದೆ ಮರೆತ ಮತದಾರ.

ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಬಹಳ ವರ್ಷಗಳಿಂದ ಹೊಸ ಬದಲಾವಣೆಯನ್ನು ಬಯಸುತ್ತಿದ್ದ ಕರ್ನಾಟಕಕ್ಕೆ ಇಂಥ ಹೀನ ಸ್ಥಿತಿ ಬೇಕಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ರಾಜ್ಯದಲ್ಲಿ ಎಲ್ಲ ಬಗೆಯ ಸರಕಾರಗಳನ್ನು ನೋಡಿ ಆಗಿದೆ ಇನ್ನು ಬಿಜೆಪಿಯನ್ನು ಒಮ್ಮೆ ನೋಡಿ ಬಿಡೋಣ ಎಂದು ಕುತೂಹಲಬರಿತನಾಗಿ ಬೆಮ್ಬಲಿಸಿದ್ದ ಮತದಾರೆ ಈಗೆ ಬಾಯಿ ಬಿಗಿ ಹಿಡಿದು ಕೂರುವ ಸ್ಥಿತಿ ನಿಮಾನವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ... ಆದ್ರೆ ಆ ಎಲ್ಲ ಕಾರಣಗಳನ್ನು ನೋಡಿದರೆ ಅವೆಲ್ಲವೂ ಕುಖ್ಯಾತಿ...!!
ನಿಜ ಹೇಳಿ ಇಂಥ ಸರಕಾರ ಬೇಕಿತ್ತಾ...!? ಖಂಡಿತಾ ಇಲ್ಲ ಎನಿಸದಿರದು. ಸತತ 30 ವರ್ಷಗಳಿಂದ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿದಿಸುತ್ತಲೇ ವಿರೋಧ ಪಕ್ಷದ ನಾಯಕನಾಗಿ ಮೆರೆದ ಯಡಿಯೂರಪ್ಪ ಆರಂಭದಿಂದಲೂ ರೈತರ ಹೆಸರನ್ನೇ ಹೇಳಿಕೊಂಡು ಬೆಳೆದವರು. ಶಿಕಾರಿಪುರದ ಬಗರ್ ಹುಕುಂ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಪಾದಯಾತ್ರೆ ಮಾಡುವ ಮೂಲಗೆ ಶೈನ್ ಆದ ಯಡಿಯೂರಪ್ಪ ಎಂದು ಶಿಕಾರಿಪುರದ ಅಭಿರುದ್ಧಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ...
ಆದರೆ ಉಪ ಮುಖಮಂತ್ರಿಯಾದ ಮೇಲೆ ಕೇವಲ ಶಿಕಾರಿಪುರ ಮಾತ್ರವಲ್ಲ ಶಿವಮೊಗ್ಗ ಜಿಲ್ಲೆಯನ್ನೇ ಕೊಂಚ ಅಭಿರುದ್ಧಿಯ ದಿಕ್ಕಿನತ್ತ ಕೊಂಡೊಯ್ದಿದ್ದು ನಿಜ. ಆದರೆ ಅಲ್ಲೂ ಭ್ರಷ್ಟತನ ಮೆರೆದಿದ್ದು ಅಷ್ಟೇ ಸತ್ಯ. ಆದ್ರೆ ಶಿಕಾರಿಪುರದ ಬಗರ್ ಹುಕುಂ ರೈತರ ಸಮಸ್ಯೆ ಇನ್ನೂ ಹಾಗೆ ಇದೆ.
ಈ ನಡುವೆ ರಾಜ್ಯಾದ್ಯಂತ ತಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡಿರುವ ಯಡಿಯೂರಪ್ಪ ಸಿಕ್ಕ ಸಿಕ್ಕಲ್ಲೆಲ್ಲ ತಿಂದು ತೆಗಿದ್ದಾರೆ. ಈ ಹಿಂದೂ ಕಾಂಗ್ರೆಸ್ ಹಾಗು ಜೆಡಿಎಸ್ ಸರಕಾರಗಳು ತಿಂದು ತೆಗಿವೆ ನಿಜ. ಆದ್ರೆ ಯಡಿಯೂರಪ್ಪನಷ್ಟುನುಂಗಿ ನೀರು ಕುಡಿದಿಲ್ಲ. ಆ ಎರಡು ಪಕ್ಷಗಳು ಸೇರಿ 60 ವರ್ಷ ತಿಂದಿದ್ದನ್ನ ಯಡಿಯೂರಪ್ಪ ಕೇವಲ ಎರಡೂವರೆ ವರ್ಷದಲ್ಲಿ ನುಂಗಿದ್ದಾರೆ. ಅದು ಸ್ಪಷ್ಟವಾಗಿ ಜನರ ಕಣ್ಣಿಗೆ ರಾಚುತ್ತಿದೆ.
ಇದಕ್ಕಾಗಿ ಶಿವಮೊಗ್ಗದವರೇ ಅದ ಸಿರಾಜಿನ್ ಬಾಷಾ ಹಾಗು ಬಾಲರಾಜ್ ಸೇರಿ ರಾಜ್ಯಪಾಲರಿಗೆ ಮುಖ್ಯ ಮಂತ್ರಿಗಳ ವಿರುದ್ಧ ಪ್ರಾಶಿಕ್ಯುಶನ್ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರಿಂದ ಆವರ ದಾಖಲೆಗಳನ್ನು ನೋಡಿ 20 ದಿನಗಳ ಕಾಲ ಪರಿಶೀಲಿಸಿ ರಾಜ್ಯಪಾಲ ಹನ್ಸರಾಜ್ ಭಾರದ್ವಾಜ್ ಕೇಸು ದಾಖಲಿಸಲು ಒಪ್ಪಿಗೆ ನೀಡಿದ್ದಾರೆ. ಅವರು ಮಾಡಿದ್ದರಲ್ಲಿ ಯಾವ ತಪ್ಪು ಇಲ್ಲ.. ಆಡಳಿತ ಪಕ್ಷದ ಆಟಾಟೋಪ ನೋಡಿಕೊಂಡು ಕೂರಲು ಅವರೇನು ಪ್ರತಿಪಕ್ಷದ ಮುಖಂಡರಲ್ಲ. ನಿಜ ಹೇಳಬೇಕೆಂದರೆ ಇಲ್ಲ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗು ಜೆಡಿಎಸ್ ಕೂಡ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿವೆ.
ಆದರೆ ಜನರ ಪರವಾಗಿ ರಾಜ್ಯಪಾಲರು ಸರಿಯಾದ ನಿರ್ಧಾರ ತೆಗೆದುಕೊಂಡು ಕೇಸು ದಾಖಲಿಸಲು ಅವಕಾಶ ನೀಡಿದ್ದರಿಂದ ರಾಜ್ಯ ಸರಕಾರ ತನ್ನ ಬಿಜೆಪಿ ಪಾಳಯಕ್ಕೆ ಹೇಳಿ ಅನಾವಶಕವಾಗಿ ಬಂದ್ ನಡೆಸಿ 65 ಕ್ಕೂ ಹೆಚ್ಚು ಬಸ್ಗಳಿಗೆ ಕಲ್ಲು ಹೊಡೆಸಿದೆ. ಕೇವಲ ಸಾರಿಗೆ ಬಸ್ ಸಂಚಾರ ನಿಲ್ಲಿಸಿದ್ದರಿಂದ ಸರಕಾರಕ್ಕೆ 4.5 ಲಕ್ಷ ರೂ. ನಷ್ಟವಾಗಿದೆ. ಇದಕ್ಕೆಲ್ಲ ಕಾರಣ ಯಡಿಯೂರಪ್ಪ.
ಬಂದ್ ನಿಂದ ರಾಜ್ಯದ ನಾನ ಜಿಲ್ಲೆಗಳಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಗುಂಡಾಗಿರಿ ಮೆರೆದರು ಯಡಿಯೂರಪ್ಪ ಮಾತ್ರ "ಜನ ಸ್ವಯಂಪ್ರೇರಿತರಾಗಿ ಬಂದ್ ನಡೆಸಿದ್ದಾರೆ " ಎಂದು ಹೇಳಿ ತಿಪ್ಪೆ ಸಾರಿಸಿದ್ದಾರೆ. ಇಂತ ಹೇಸಿಗೆ ರಾಜಕಾರಣಕ್ಕೆ ಇಳಿದಿರುವ ಯಡಿಯೂರಪ್ಪನಿಗೆ ಜನ ಕೂಡ ಪ್ರತಿಕ್ರಯಿಸದೆ ಸುಮ್ಮನೆ ಕುಳಿತು ನೋಡುತ್ತಿರುವುದು ಮಾತ್ರ ದುರಂತವೇ ಸರಿ.
ಜನ ಹೀಗೆ ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿಯನ್ನು ಮುಂದುವರಿಸಿದರೆ ಯಡಿಯೂರಪ್ಪ ಮುಂದೊಂದು ದಿನ ಈ ರಾಜ್ಯವನ್ನು ಅಡವಿಟ್ಟರು ಆಶ್ಚರ್ಯವಿಲ್ಲ... ಕರ್ನಾಟಕ ಕಂಡರಿಯದ ಮುಖ್ಯಮಂತ್ರಿಯಾದ ಯಡಿಯೂರಪ್ಪ ರಾಜ್ಯದಲ್ಲೇ ಮೊದಲ ಬಾರಿಗೆ ಸರಕಾರವೇ ಮುಂದೆ ನಿಂತು ಬಂದ್ ಆಚರಿಸಿದ ಕುಖ್ಯಾತಿಗೂ ಪಾತ್ರರಾಗಿದ್ದಾರೆ. ಪ್ರಜಾಪ್ರಭುತ್ವವನ್ನೇ ಅರಿಯದೆ ಹೀಗೆ ಪ್ರಜೆಗಳ ಸಮಸ್ಯೆ ಹಾಗು ಅವರ ಕಷ್ಟಗಳನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಲಜ್ಜೆಗೆಟ್ಟು ಅಧಿಕಾರ ದಾಹ ತೋರುತ್ತ ಜನರ ಕಣ್ಣಿಗೆ ಮನ್ನೆರೆಚಿ ಸ್ವ ಹಿತಾಸಕ್ತಿ ಮೆರೆಯುವ ಇಂಥ ಮಾನಗೇಡಿ ಮುಖ್ಯಮಂತ್ರಿಯನ್ನು ಮತದಾರ ರಾಜ್ಯದ ಮರ್ಯಾದೆಯನ್ನು ಮನದಲ್ಲಿಟ್ಟುಕೊಂಡು ಮನೆಗೆ ಕಳಿಸದೇಹೋದರೆ ಮುಂದೆ ಇನ್ನು ಮಾನ ಕಳೆದುಕೊಳ್ಳಬೇಕಾಗುತ್ತದೆ...ಜತೆಗೆ ಸಾಮಾನ್ಯರು ಕೂಡ ಯದಿಯುರಪ್ಪನನ್ನೇ ಅನುಸರಿಸುತ್ತ "ಮೂರು ಬಿಟ್ಟವರು ಊರಿಗೆ ದೊಡ್ಡವರು'' ಎನ್ನುವ ಗಾದೆಯನ್ನ ಪಾಲಿಸಿದರು ಅಚ್ಚರಿಪಡಬೇಕಾಗಿಲ್ಲ. ಇದು ಸತ್ಯ....

No comments:

Powered By Blogger