Wednesday, October 10, 2012

ವಿಜಯ ವಾಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ

ಮನಸಿಟ್ಟು ಏನಾದರೂ ಮಾಡಿದರೆ ಮೈ- ಮನ ತಣಿಯಬೇಕು, ದಣಿಯಬೇಕು. ಸುಮ್ಮನೆ ಕಾರಿನಲ್ಲೋ, ಬಸ್ಸಿನಲ್ಲೋ, ಟ್ರೈನಿನಲ್ಲೋ ಆರಾಮಾಗಿ ಹೋಗಿ, ಆರಾಮಾಗಿ ವಾಪಸ್ಸಾಗುವ ಪ್ರವಾಸದಲ್ಲೆಲ್ಲ ನಮ್ಮಂತವರಿಗೆ ಅಷ್ಟು ಮನಸಿಲ್ಲ. ನಮಗೆನಿದ್ದರೂ ರಕ್ತ ಕುದಿಯಬೇಕು. ಬಿಸಿಯುಸಿರು ಹೊಮ್ಮಬೇಕು. ಅಪಾಯ ಹತ್ತಿರದಲ್ಲೇ ಇರಬೇಕು! ಸ್ವಲ್ಪ ಹೆಚ್ಚು ಕಮ್ಮಿಯಾದರೆ ಜೀವ ಹೋಗಬೇಕು!! ಇದಕ್ಕಾಗಿಯೇ ಟ್ರೆಕ್ಕಿಂಗ್ ನಮಗೆಲ್ಲ ಆಪ್ತ. ಆದರೆ... ಹುಷಾರು, ಪುಲ್ ಈ ಸುದ್ದಿಯನ್ನು ಓದಿ ಆನಂತರ ಟ್ರೆಕ್ಕಿಂಗ್ ಗೆ ಹೋಗಿ....
ವಿಜಯ ವಾಣಿಯಲ್ಲಿ ಪ್ರಕಟವಾದ ವಿಶೇಷ ಲೇಖನ

Saturday, September 29, 2012

ನನ್ನೂರಿನ ಚಿತ್ರ ಚಿತ್ತಾರ...


ಎಲ್ಲಿ ಹೋದಳು ಇವಳು...
ಹುಡುಕಿ ಸುಸ್ತಾದೆ...

 ಎಲ್ಲಿ ಹೋದೆ ನೀ ನಲ್ಲೆ...


ಹಾರುವೇನು ನಾ... 
 ಬಂದಿದ್ದಾರ ರಾಯರು...!
 ಇನ್ನು ಯಾಕ ಬರಲಿಲ್ಲ ಇವಳು...
ಇಲ್ಲೇ ಇದ್ದೀನಿಕಣ್ರೀ... ಬಂದೆ...
ಛೀ, ನಾಚಿಕೆ ಆಗುತ್ತೆ...
ಬಣ್ಣದ ಚಿಟ್ಟೆಯ ಚಿತ್ತಾರ
ಹುಲ್ಲು ಕೂಡ ಅಂದವೆ, ನೋಡ ಬನ್ನಿ ಹೇಗಿದೆ...!
 ಹುಲ್ಲು ಎಂದು ಜರಿಯಬೇಡಿ...!

 ಹುಲ್ಲಿನ ಉಯ್ಯಾಲೆ...



ಕಾದಿರುವೆ ನಿನಗಾಗಿ...


 ಜೇಡ ಜಂಜಡ...

 ಜೇಡರ ನೆಲೆ..

ಮೀನು ಹುಡುಕಾಟ

 ಬಲಿ ಎಲ್ಲಿ...?


ಕಣಿವೆ ಕಡೆಗೆ ಕಣ್ಣು...!!

 ಏರು ಪಯಣ 

ಸುದೀರ್ಘ ಪ್ರಯಾಣ...

ದನಗಳ ಕಡೆಗೆ ದಾರಿ...
ನನ್ನ ಕಂದನಿಗಾಗಿ ಇನ್ನೂ ಹುಡುಕಬೇಕು...
ಅಮ್ಮಾ, ನನಗೂ ತಿನ್ನಲು ಬೇಕು

 ನನ್ನ ಮಡಿಲ ಗೂಡು 

 ಕಂದನ ಕಾಣಲು...






Friday, September 14, 2012

ನಾನು ಕ್ಲಿಕ್ಕಿಸಿದ ಇತ್ತೀಚಿನ ಚಿತ್ರಗಳು

 ತುಂತುರು ಇಲ್ಲಿ  ನೀರ  ಹಾಡು...
ಮಂಜುಳ ನಾದ...

ಚೆಲುವು ನನ್ನಲ್ಲೂ ಇದೆ...!

ದೂರ ತೀರ ಯಾನ...

ಸಸ್ಯ ಚಿತ್ತಾರ...!

 ಸಂಗಾತಿಗಳ ಸಂಭಾಷಣೆ !

 ವ್ಹಾ... ತುಂಬಾ ಸ್ವೀಟ್ ಆಗಿದೆ... ನಿಮಗೂ ಬೇಕಾ...!?

ಕಾದಿಹೆ ನಾ ನನ್ನಿನಿಯನಿಗಾಗಿ...

ಈ ಹೂವಿನ ಮಕರಂದ ನನಗೂ ಬೇಕು...

 ಜೊತೆಯಾಗಿ ಹಿತವಾಗಿ ಸೇರಿ ನಡೆವ... ಸೇರಿ ನುಡಿವ...

 ನಗು ನಗುತಾ ನಲಿ ನಲಿ... ಏನೇ ಆಗಲಿ... 

ಸರ್ವ ದಿಕ್ಕುಗಳು ಗೊತ್ತು... 


ಮಧುರ ಮಿಲನ...!!

ನಾವು ತ್ರಿಮೂರ್ತಿಗಳು...


ಒಂಟಿ ಒಂಟಿಯಾಗಿರುವುದು ಬಾರೋ ಬೋರು... 

ಅಂದವೋ ಅಂದ...

ಹಾಗೆ ಸುಮ್ಮನೆ ಒಂದು ಗುಟುಕು...

ಹಾರುತ ದೂರ ದೂರ... 

   ಮೇಲೇರುವ ಬಾರಾ ಬಾರಾ...

 ಸಹಸ್ರಪದಿಯ ಸರ್ಕಸ್!


Monday, August 27, 2012

ವಿಜಯ ವಾಣಿಯಲ್ಲಿ ಪ್ರಕಟವಾದ ಪಿ.ಸಾಯಿನಾಥ್ ಅವರ ಸಂದರ್ಶನ...

ಪಿ.ಸಾಯಿನಾಥ್ ಅವರೊಂದಿಗೆ ರಮೇಶ್ ಹಿರೇಜಂಬೂರು ಮಾತುಕತೆ...

Thursday, August 2, 2012

ಈ ವಂಡರ್ಫುಲ್ ಪತ್ರಿಕೆ "ನವ ಮಾನವ" ನೀವೂ ಖರೀದಿಸಿ ಓದಿ...


ಸ್ನೇಹಿತರೆ, ನಿಮೊಂದು ಸಂತಸದ ಸುದ್ದಿ! ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಇದ್ದಾಗ "ಮಾನವ" ಎಂಬ ಸಣ್ಣ ಮಾಸಿಕ ಪತ್ರಿಕೆಯೊಂದು ಹೊರಬರುತ್ತಿತ್ತು. ಅದು ನಿಜಕ್ಕೂ ಅದ್ಭುತವಾಗಿತ್ತು. ಈಗ ಅದೇ ರೀತಿಯ ಮತ್ತೊಂದು ಮಾಸಿಕ ಪತ್ರಿಕೆ "ನವ ಮಾನವ" ನಮ್ಮ ಕಣ್ಣೆದುರೇ ಇದೆ. ಆದರೆ ಅದನ್ನು ಎಷ್ಟು ಜನ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ! ಅಲ್ಲಿ ಜಾಹಿರಾತುಗಳಿಲ್ಲ, ಗೊಡ್ಡು ರಾಜಕಾರಣಿಗಳ ಪೊಳ್ಳು ಭಾಷಣಗಳಿಲ್ಲ , ಬದಲಿಗೆ ಮನಸನ್ನು ಸದಾ ಕಾಡುವ ಈ ದೇಶದ ಸಮಸ್ಯೆಗಳು, ಪ್ರಗತಿಯ ಚಿಂತನೆಗಳಿವೆ. ಅದಕ್ಕೊಂದೆರಡು ಶೀರ್ಷಿಕೆಗಳನ್ನು ಉದಾಹರಿಸಿ ಹೇಳುವುದಾದರೆ "ಬೇಸಾಯ- ನೀ ಸಾಯ... ನಾ ಸಾಯ..."  "ಹಸಿರು ಕ್ರಾಂತಿಯ ಜಾತ್ರೆಯಲ್ಲಿ ಕಾಣೆಯಾದವರು..." "ಅಂಬೇಡ್ಕರ್ ಹಾಗು ಲೋಹಿಯಾ: ಜಾತಿ ಕುರಿತ ಒಂದು ಸಂವಾದ" ಹೀಗೆ ಹತ್ತು ಹಲವು ಲೇಖನಗಳಿವೆ. ಇವು ನಮ್ಮ ಬುದ್ಧಿ, ವಿಚಾರ ಲಹರಿಗಳನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.
ಈ ಪತ್ರಿಕೆಗೆ ಸಂಪಾದಕರಾದ ಶಿವಮೊಗ್ಗದ ಡಿ.ಎಸ್.ನಾಗಭೂಷಣ್ ಅವರು ಹಣ ನಿಗದಿ ಮಾಡಿಲ್ಲ! "ನೀವು ಕೊಟ್ಟಷ್ಟು" ಎಂದು ನಮೂದಿಸಿದ್ದಾರೆ. ಹಾಗಂತ ನಾವು ಪುಕ್ಕಟ್ಟೆ ತೆಗೆದುಕೊಂಡು ಓದುವುದು ಸರಿಯಲ್ಲ. ಇಂಥ ವಿಚಾರಗಳನ್ನು ನಮಗೆ ತುಂಬುವ ಈ ಪತ್ರಿಕೆಗೆ ವರ್ಷಕ್ಕೆ ಕನಿಷ್ಠ 100 ರೂ. ಗಳನ್ನಾದರೂ ನೀಡಿ ಓದೋಣ... ಹಣ ನೀಡಿದರೆ ನೀವಿದ್ದಲ್ಲಿಗೆ ಪತ್ರಿಕೆ ನಿಮ್ಮ ಕೈಗೆ ತಲುಪುತ್ತದೆ.  ಈ ಪತ್ರಿಕೆ ಖರೀದಿಸಲು ಆಸಕ್ತರಿದ್ದಲ್ಲಿ ನನ್ನ ಮೊ: 94495 10318 ಸಂಖೆಗೆ ಸಂಪರ್ಕಿಸಬಹುದು. ಅಥವಾ  ಈ ಪತ್ರಿಕೆಯ ಸಂಪಾದಕರಾದ ಡಿ.ಎಸ್.ನಾಗಭೂಷಣ, ಮೊ: 94492 42284 ಅವರನ್ನಾದರೂ ನೇರವಾಗಿ ಸಂಪರ್ಕಿಸಿ. ನಿಮ್ಮ ಹಣ ಹಾಗು ವಿಳಾಸ ನೀಡಿ. ಪತ್ರಿಕೆಯನ್ನು ನಿಮ್ಮದಾಗಿಸಿಕೊಂಡು ಓದಿ... 
ನೆನಪಿರಲಿ ಇದು ಜೋಪಾನವಾಗಿರಿಸಿಕೊಳ್ಳುವ ಪತ್ರಿಕೆ...
ಇಂತಿ ನಿಮ್ಮ ಆತ್ಮೀಯ 
-ರಮೇಶ್ ಹಿರೇಜಂಬೂರು
Powered By Blogger