Thursday, August 28, 2008

ನೆನಪು

ಕನ್ನ ಮುಂದಿದೆ ಎಲ್ಲ
ಅದ ಬಲ್ಲವನೇ ಬಲ್ಲ
ಕಣ್ಣು ಮುಚಿದರೆ ಕಾನುತ್ತಲ್ಲ
ಬೇಸವೆನ್ದರೂ ಕಾದುತ್ತಲ್ಲ

ನಿನ್ನ ಜತೆ ಆಸುವಾಗ ತುಂಟಾಟ
ಉಳುಕಿದ ಈ ಸೊಂಟ
ನೂವಾದಗೆಲ್ಲ
ಹಿಂದಿನದ್ಯಾವುದೂ ಹಳತಲ್ಲ

ಬೈದಿದ್ದು, ಬೈಸಿಕೊಂಡಿದ್ದು,
ಸಿಟ್ಟು ಬಂದಾಗ ಹೊದೆಸಿಕೊಂಡಿದ್ದು
ಮತ್ತೆ ಮಾತು ಬಿಟ್ಟು ಕುಉತಿದ್ದು
ನಾನೇ ಬಂದು ರಾಜಿಯಗಿದ್ದು..

ಸರಸ ಎಂದು ತಿಳಿಯದ ವಯಸಲ್ಲಿ
ಕುಉತು ಕಚಗುಳಿ ಇಟ್ಟಲ್ಲಿ
ಓದಿ ಬಿದ್ದದ್ದು, ಮರೆತಿಲ್ಲ
ಅಲ್ಲಿ ಗಾಯವಾಗಿದ್ದ ಕಲೆ ಹೋಗಿಲ್ಲ

ಇದು ಎಂದೂ ಮಾಯದ ಗಾಯ
ಈಗ ಬಿಡಲಾಗದು ಬಾಯ
ಏನುಮಾಡಲಿ ಹೆಂಡತಿಯ ಭಯ
ಆದರುಸುಳಿಯುತ್ತದೆ ಹಳೆಯ ಛಾಯ !
ಎಲೆ ವಯಸಿನಲ್ಲಿ ಅದೆಷ್ಟು ಚೆಲುವು ?
ನಿನ್ನ ಮೈ ಅಂದದ ಹೊಳಪು...
ಅಂದು ಇದೆಲ್ಲ ಹೊಳೆದಿದ್ದರೆ
ಇಂದು ಬಿಳುತ್ತಿರಲಿಲ್ಲ ಮನಸಿಗೆ ಬಾರೆ

ಎಲ್ಲ ನೆನಪಾಗುತ್ತದೆ ಕಣೆ
ಬದಿದುಕೊಲ್ಲಬೇಕಾಗಿದೆ ಈಗ ಹಣೆ
ಎದ್ದು ಬರುತ್ತವೆ ಎಲ್ಲ ನಿನ್ನೆ
ಅದಕೇ ಹಾಕುತ್ತೇನೆ ಎಣ್ಣೆ....

Monday, August 25, 2008

ಮಲೆನಾಡು

ಮಲೆನಾಡು ಅಂದರೇನೆ ಹಾಗೆ. ಸದಾ ತಂಪು ನೀಡುವ ನವಿರಾದ ವಾತವರಣ, ಕುಳಿರ್ಗಾಳಿ, ಅದರ ನವುವೆಯೇ ಚುಮು ಚುಮು ಚಳಿ, ಹಿತವಾದ ಬೆಳಕು ಇಣುಕಿ ನೋಡುವಪರಿ ಅದನ್ನೆಲ್ಲಾ ನೋಡಿದರೆ ಅದೇನೋ ಸಂತಸ, ಮೈ ನವಿರೇಳಿಸುವ ಚುಂಬಕ ಶಕ್ತಿ ತುಂಬಿರುತ್ತದೆ.
ನಮ್ಮ ಬಹುತೇಕ ಕವಿಗಳು ಕಾವ್ಯ ಬರೆಯಲು ಪ್ರೇರಣೆ ಪಡೆದಿದ್ದೆ ಈ ಪರಿಸರ, ಕಾಡು ಅಥವಾ ಮಲೆನಾಡು ಎನ್ನುವ ಈ ನಿಸರ್ಗ ಮಡಿಲಿನಿಂದ. ಅದರ ಬಳಿ ಇದ್ದರೆ ಬೇಡ ಎಂದರೂ ಅದು ಬಂದೆ ಬರುತ್ತದೆ.
ಕವಿಗಳಿಗೆ, ಸಾಹಿತಿಗಳಿಗೆ ಪ್ರೇರಣೆ ಹುಟ್ಟುವುದೇ ಹಾಗೆ. ಮನಸಿಗೆ ಮುದ ನೀಡುವ ಯಾವುದೇ ವಾತವರನ್ ಇದ್ದರೂ ಆ ಮಳೆಯಿಂದಲೇ ಅಲ್ಲಿ ಅವರಿಗೆ ಅರಿವಿಲ್ಲದೆ ಸಾಹಿತ್ಯದ ಮೊಳಕೆಯೊಡೆಯುತ್ತದೆ. ಪರಿಸರಕ್ಕಿರುವ ಚುಂಬಕ ಶಕ್ತಿಯೇ ಅದು.
ಮಲೆನಾಡು ತನ್ನ ಹಚ್ಚ ಹಸಿರಿನ ಒಲವಿಂದ ಮನುಷ್ಯನ ಅಂತರಾಳದ್ಲ್ಲಿರುವ ಸುಪ್ತ ಪ್ರತಿಭೆಯನ್ನ ಹೊರಹಾಕಿಸುತ್ತದೆ. ನಿಜಕ್ಕೂ ಇದು ಅವಿಸ್ಮರಣೀಯ. ಅಂತಹ ಚೈತನ್ಯ ಇರುವುದು ಕೇವಲ ಮಲೆನಾಡಿಗೆ ಮಾತ್ರ....

Thursday, August 14, 2008

ಮರೆಯದ ಮಿತ್ರರು...





ಸ್ನೇಹ ಅನ್ನೋ ಸಾಗರದಲ್ಲಿ ಪುಟ್ಟ ಮೀನು ನಾನು. ಅಲ್ಲಿ ಸಿಕ್ಕ ಕೆಲವು ಮುತ್ತುಗಳು ಇವು. ಪ್ರೀತಿಗಿಂತ ಸ್ನೇಹದ ಕಡಲು ದೊಡ್ಡದು ಎಂಬುದು ದೊಡ್ಡವರ ಮಾತು. ಅದು ಸತ್ಯ ಕೂಡ. ಇಲ್ಲಿ ಅಗಾಗ ನಾವು ಬಿಟ್ಟ ಬಲೆಗೆ ಹಾವು ಚೇಳುಗಳು ಬೀಳುತ್ತವೆ. ಆದ್ರೆ ಅವುಗಳನ್ನ ಅಲ್ಲಲ್ಲೇ ಬಿಟು ಮುಂದೆ ಸಾಗಬೇಕು. ಸ್ನೇಹ ಪವಿತ್ರ. ಆದರೆ ಅದನ್ನು ಅರಿತು ನಾವುಗಳು ಮುಂದೆ ಸಾಗಬೇಕಷ್ಟೆ. ಪ್ರೀತಿ ಕಲ್ಲು ಮುಳ್ಳುಗಳ ಹಾಡಿ. ಆದರೆ ಸ್ನೇಹ ಸುಖದ ಸಾಗ... ಪ್ರತಿಯೊಬ್ಬ ಗೆಳಯ, ಗೆಳತಿಯರೂ ಇದನ್ನು ಅರಿಯಲೇಬೇಕು...

Wednesday, August 13, 2008

ಕವಿಗಳ ಸಂತೆ...

ಕವಿಗಳ ಸಂತೆ...



Poornachandra Tejaswi the son of Rastra Kavi kuvempu was a prominent kannada writer and novelist. His contribution to kannada literature is immense. Please sign the petition for the Poornachandra tejaswi research centre. This is a novel method to remember one of the legendary kannada write and do please spread this message.

ನದಿ ನಾಲೆಯಲ್ಲಿ ನರ್ತನ...


ನೋವು ಮರೆತು ನಲಿಯುವ..

ಜೋಗದ ಸಿರಿ.. ಕಾಣಿರೆ..

Saturday, August 9, 2008

ಕಾಡುವ ಕುವೆಂಪು ನೆನಪು ...

ಮಲೆನಾಡಿನಲ್ಲಿ ಬೆಳೆದ ಮೇಲೆ ಕುವೆಂಪು ಅವರನ್ನು ನೆನಪು ಮಾಡಿಕೊಳ್ಳದೆ ಇರಲಾಗದು ಅಲ್ಲವೇ ?
Powered By Blogger