Thursday, June 18, 2009

ಶಿಕ್ಷರೆ ಇದು ಸರಿಯ...?

ಮಕ್ಕಳಿಗೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಹಾಗೂ ಗುಣವಂತರಾಗಲು ಬುದ್ದಿ ಹೇಳಬೇಕಾದ ಶಿಕ್ಷಕರೇ ಈಗ ಬುದ್ದಿ ಹೇಳಿಸಿಕೊಳ್ಳುವಂತಾಗಿದ್ದಾರೆ. ಮೊನ್ನೆ ನಡೆದ ಶಿಕ್ಷಕರ ಸಂಘದ ಚುನಾವಣೆಯೇ ಅದಕ್ಕೆ ಪ್ರತ್ಯಕ್ಷ ನಿದರ್ಶನ... ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರಾದ ಬಸವರಾಜ ಗುರಿಕಾರ್, ಅವರ ಜತೆ ನಡೆಸಿದ ಸಂದರ್ಶನ ನಿಲ್ಲಿದೆ... ಅವರು ಏನೆನ್ನುತ್ತಾರೆ ನೀವೇ ನೋಡಿ...

೧.ಶಿಕ್ಷಕರ ಸಂಘದ ಚುನಾವಣೆಯಲ್ಲಿ ಗುಂಪು ರಾಜಕೀಯವೇಕೆ?
*ಗುಂಪುಗಾರಿಕೆಯಿಲ್ಲ, ಇದು ಚುನಾವಣೆಗಾಗಿ ಮಾತ್ರ. ಪ್ರತಿ ತಾಲೂಕಿನಿಂದ ಐವತ್ತು ಶಿಕ್ಷಕರಿಗೆ ಒಬ್ಬರಂತೆ ತಾಲೂಕು ಪ್ರತಿನಿಗಳನ್ನು ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ಈಗ ಚುನಾವಣೆ ನಡೆದಿದೆ. ಮುಂದೆ ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ಪದಾಕಾರಿಗಳ ಆಯ್ಕೆ ನಡೆಯುತ್ತದೆ. ಚುನಾವಣೆ ಮುಗಿದ ನಂತರ ಎಲ್ಲ ಶಿಕ್ಷಕರೂ ಒಂದೇ ರೀತಿ. ಶಿಕ್ಷಕರ ಮೊದಲ ಪ್ರಾಧಾನ್ಯತೆ ಪಾಠ. ಹೀಗಾಗಿ ಚುನಾವಣೆ ಸಮಯದಲ್ಲಿ ಅದು ಮೇಲು ನೋಟಕ್ಕೆ ಹಾಗೆ ಕಾಣುತ್ತದೆ.
೨.ಶಿಕ್ಷಕರ ಇತ್ತೀಚಿನ ನಡವಳಿಕೆಗಳು ಹೇಗನಿಸುತ್ತವೆ?
*ಶಿಕ್ಷಕರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಆದರೆ ಅವರಿಗೆ ಸೌಲಭ್ಯಗಳಿಲ್ಲ. ಶಾಲೆಗಳಲ್ಲಿ ಕುಡಿಯುವ ನೀರಿನ ಸವಲತ್ತುಗಳಿಲ್ಲ, ನಲ್ಲಿ ಸಂಪರ್ಕ ಇದ್ದರೂ ನೀರು ಬರುವುದಿಲ್ಲ. ಇದರಿಂದ ಶೌಚಾಲಯಗಳು ಉಪಯೋಗಕ್ಕೆ ಬರುತ್ತಿಲ್ಲ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕು. ಪ್ರತಿ ಶಾಲೆಗೊಂದರಂತೆ ಬೋರ್‌ವೆಲ್ ಕೊರೆಸುವುದು ಒಳಿತು. ಸ್ಥಳೀಯ ಮಟ್ಟದಲ್ಲಿ ಶೇ.೧ರಷ್ಟು ಮಾತ್ರ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸಂಘ ಬೆಂಬಲಿಸುವುದಿಲ್ಲ. ಆದರೆ ಅವುಗಳನ್ನೇ ಮುಂದಿಟ್ಟುಕೊಂಡು ಕೆಲವರು ಶಿಕ್ಷಕ ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸಲ್ಲದು.
೩.ಪ್ರಾಥಮಿಕ ಶಿಕ್ಷಕರ ಇತ್ತೀಚಿನ ಸಮಸ್ಯೆಗಳೇನು?
*ಶಿಕ್ಷಕ ಕೂಡ ಸಾಮಾನ್ಯ ಪ್ರಜೆ, ನಮಗೂ ನಮ್ಮದೇ ಆದ ಸಮಸ್ಯೆಗಳಿವೆ. ಆದರೆ ಅವುಗಳನ್ನು ಮರೆತು ಮಕ್ಕಳು ದೇವರೆಂದು ಭಾವಿಸಿ ಪಾಠ ಮಾಡುತ್ತೇವೆ. ಆದರೆ ಇತ್ತೀಚೆಗೆ ಬೋಧನೆ ಮಾಡುವ ಶಿಕ್ಷಕನಿಗೆ ಅದಕ್ಕಿಂತ ಬೇರೆ ಕೆಲಸಗಳೇ ಹೆಚ್ಚಾಗುತ್ತಿವೆ. ಸರಕಾರ ೪ನೇ ದರ್ಜೆಯ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಇದರಿಂದ ಎಲ್ಲ ಕೆಲಸಗಳನ್ನು ಶಿಕ್ಷಕರೇ ಮಾಡಿಕೊಳ್ಳಬೇಕಿದೆ. ಕಾಗದ ಪತ್ರ ತಯಾರಿಕೆ ಸೇರಿದಂತೆ ಇತರ ಕೆಲಸಗಳೇ ಹೆಚ್ಚು ಹೊರೆಯಾಗುತ್ತಿವೆ. ಇದೆಲ್ಲದರ ನಡುವೆ ಶಿಕ್ಷಕ ತನ್ನ ಚೌಕಟ್ಟನ್ನು ಮೀರದೆ ಪಾಠ ಹೇಳಿಕೊಡುತ್ತಿದ್ದಾನೆ. ಇಲ್ಲಿ ಪೋಷಕರೂ ಮಕ್ಕಳ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಎಸ್‌ಡಿಎಂಸಿಗಳಿಂದ ಅನುಕೂಲಗಳಾಗಿವೆ. ಆದರೆ ಕೆಲವೆಡೆ ಹಸ್ತಕ್ಷೇಪವೂ ಇದೆ. ಅದು ನಿಲ್ಲಬೇಕು. ಶಿಕ್ಷಕರನ್ನು ಬೇರೆ ಕೆಲಸಗಳಿಂದ ವಿಮುಕ್ತಿಗೊಳಿಸಿ, ಮುಕ್ತವಾಗಿ ಪಾಠ ಮಾಡಲು ಅವಕಾಶ ನೀಡಬೇಕು.
೪.ಸಂಯುಕ್ತ ಪ್ರೌಢ ಶಾಲಾ ವ್ಯವಸ್ಥೆಯನ್ನು ರದ್ದುಗೊಳಿಸಲು ಕಾರಣ ?
*ಅದು ತುಂಬಾ ಅವೈeನಿಕ ವ್ಯವಸ್ಥೆ. ಪ್ರೌಢಶಾಲೆ ವಿದ್ಯಾರ್ಥಿಗಳು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಒಂದೇ ಕಡೆ ವಿದ್ಯಾಭ್ಯಾಸ ಮಾಡಬೇಕಿತ್ತು. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಅದನ್ನು ರದ್ದುಗೊಳಿಸುವ ಮೂಲಕ ಮಕ್ಕಳ ಶಿಕ್ಷಣದ ಹಾದಿಯನ್ನು ಸುಗಮಗೊಳಿಸಿದ್ದೇವೆ.
೫.ನಿಮ್ಮ ಇದೂವರೆಗಿನ ಅಕಾರವಯ ಕೆಲಸ ತೃಪ್ತಿ ತಂದಿದೆಯೇ?
*ಹೌದು, ನೆರೆಯ ರಾಜ್ಯಗಳಲ್ಲಿ ಹಾಗೂ ಕೇಂದ ಸರಕಾರಿ ಪ್ರಾಥಮಿಕ ಶಿಕ್ಷಕರಿಗೂ ರಾಜ್ಯ ಶಿಕ್ಷರಿಗೂ ಬಹಳ ವ್ಯತ್ಯಾಸವಿತ್ತು. ಸರಕಾರದ ಮೇಲೆ ಒತ್ತಡ ಹೇರಿ ನನ್ನ ಅವಯಲ್ಲಿ ೫ನೇ ವೇತನ ಆಯೋಗದಂತೆ ಆರಂಭಧ ವೇತನವನ್ನು ೬,೮೦೦ ರೂ.ಗಳಿಂದ ಹಾಗೂ ಅಂತಿಮ ವೇತನವನ್ನು ೧೩,೦೦೦ರೂ. ವರೆಗೆ ಹೆಚ್ಚಿಸಲು ಶ್ರಮಿಸಿದ್ದೇವೆ. ೨೦೦ರೂ. ವಿಶೇಷ ವೇತನ ಜಾರಿಗೊಳಿಸಲು ವ್ಯವಸ್ಥೆ ಮಾಡಿದ್ದೇವೆ. ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ೭೪೧೬ ಹುದ್ದೆಗಳು ಮಂಜೂರು ಮಾಡಿಸಿದ್ದೇವೆ.
Powered By Blogger