Saturday, January 22, 2011

ಮಾನಗೆಟ್ಟ ಸಿ.ಎಂ. : ಮರ್ಯಾದೆ ಮರೆತ ಮತದಾರ.

ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಬಹಳ ವರ್ಷಗಳಿಂದ ಹೊಸ ಬದಲಾವಣೆಯನ್ನು ಬಯಸುತ್ತಿದ್ದ ಕರ್ನಾಟಕಕ್ಕೆ ಇಂಥ ಹೀನ ಸ್ಥಿತಿ ಬೇಕಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ರಾಜ್ಯದಲ್ಲಿ ಎಲ್ಲ ಬಗೆಯ ಸರಕಾರಗಳನ್ನು ನೋಡಿ ಆಗಿದೆ ಇನ್ನು ಬಿಜೆಪಿಯನ್ನು ಒಮ್ಮೆ ನೋಡಿ ಬಿಡೋಣ ಎಂದು ಕುತೂಹಲಬರಿತನಾಗಿ ಬೆಮ್ಬಲಿಸಿದ್ದ ಮತದಾರೆ ಈಗೆ ಬಾಯಿ ಬಿಗಿ ಹಿಡಿದು ಕೂರುವ ಸ್ಥಿತಿ ನಿಮಾನವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ... ಆದ್ರೆ ಆ ಎಲ್ಲ ಕಾರಣಗಳನ್ನು ನೋಡಿದರೆ ಅವೆಲ್ಲವೂ ಕುಖ್ಯಾತಿ...!!
ನಿಜ ಹೇಳಿ ಇಂಥ ಸರಕಾರ ಬೇಕಿತ್ತಾ...!? ಖಂಡಿತಾ ಇಲ್ಲ ಎನಿಸದಿರದು. ಸತತ 30 ವರ್ಷಗಳಿಂದ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿದಿಸುತ್ತಲೇ ವಿರೋಧ ಪಕ್ಷದ ನಾಯಕನಾಗಿ ಮೆರೆದ ಯಡಿಯೂರಪ್ಪ ಆರಂಭದಿಂದಲೂ ರೈತರ ಹೆಸರನ್ನೇ ಹೇಳಿಕೊಂಡು ಬೆಳೆದವರು. ಶಿಕಾರಿಪುರದ ಬಗರ್ ಹುಕುಂ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಪಾದಯಾತ್ರೆ ಮಾಡುವ ಮೂಲಗೆ ಶೈನ್ ಆದ ಯಡಿಯೂರಪ್ಪ ಎಂದು ಶಿಕಾರಿಪುರದ ಅಭಿರುದ್ಧಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ...
ಆದರೆ ಉಪ ಮುಖಮಂತ್ರಿಯಾದ ಮೇಲೆ ಕೇವಲ ಶಿಕಾರಿಪುರ ಮಾತ್ರವಲ್ಲ ಶಿವಮೊಗ್ಗ ಜಿಲ್ಲೆಯನ್ನೇ ಕೊಂಚ ಅಭಿರುದ್ಧಿಯ ದಿಕ್ಕಿನತ್ತ ಕೊಂಡೊಯ್ದಿದ್ದು ನಿಜ. ಆದರೆ ಅಲ್ಲೂ ಭ್ರಷ್ಟತನ ಮೆರೆದಿದ್ದು ಅಷ್ಟೇ ಸತ್ಯ. ಆದ್ರೆ ಶಿಕಾರಿಪುರದ ಬಗರ್ ಹುಕುಂ ರೈತರ ಸಮಸ್ಯೆ ಇನ್ನೂ ಹಾಗೆ ಇದೆ.
ಈ ನಡುವೆ ರಾಜ್ಯಾದ್ಯಂತ ತಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡಿರುವ ಯಡಿಯೂರಪ್ಪ ಸಿಕ್ಕ ಸಿಕ್ಕಲ್ಲೆಲ್ಲ ತಿಂದು ತೆಗಿದ್ದಾರೆ. ಈ ಹಿಂದೂ ಕಾಂಗ್ರೆಸ್ ಹಾಗು ಜೆಡಿಎಸ್ ಸರಕಾರಗಳು ತಿಂದು ತೆಗಿವೆ ನಿಜ. ಆದ್ರೆ ಯಡಿಯೂರಪ್ಪನಷ್ಟುನುಂಗಿ ನೀರು ಕುಡಿದಿಲ್ಲ. ಆ ಎರಡು ಪಕ್ಷಗಳು ಸೇರಿ 60 ವರ್ಷ ತಿಂದಿದ್ದನ್ನ ಯಡಿಯೂರಪ್ಪ ಕೇವಲ ಎರಡೂವರೆ ವರ್ಷದಲ್ಲಿ ನುಂಗಿದ್ದಾರೆ. ಅದು ಸ್ಪಷ್ಟವಾಗಿ ಜನರ ಕಣ್ಣಿಗೆ ರಾಚುತ್ತಿದೆ.
ಇದಕ್ಕಾಗಿ ಶಿವಮೊಗ್ಗದವರೇ ಅದ ಸಿರಾಜಿನ್ ಬಾಷಾ ಹಾಗು ಬಾಲರಾಜ್ ಸೇರಿ ರಾಜ್ಯಪಾಲರಿಗೆ ಮುಖ್ಯ ಮಂತ್ರಿಗಳ ವಿರುದ್ಧ ಪ್ರಾಶಿಕ್ಯುಶನ್ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರಿಂದ ಆವರ ದಾಖಲೆಗಳನ್ನು ನೋಡಿ 20 ದಿನಗಳ ಕಾಲ ಪರಿಶೀಲಿಸಿ ರಾಜ್ಯಪಾಲ ಹನ್ಸರಾಜ್ ಭಾರದ್ವಾಜ್ ಕೇಸು ದಾಖಲಿಸಲು ಒಪ್ಪಿಗೆ ನೀಡಿದ್ದಾರೆ. ಅವರು ಮಾಡಿದ್ದರಲ್ಲಿ ಯಾವ ತಪ್ಪು ಇಲ್ಲ.. ಆಡಳಿತ ಪಕ್ಷದ ಆಟಾಟೋಪ ನೋಡಿಕೊಂಡು ಕೂರಲು ಅವರೇನು ಪ್ರತಿಪಕ್ಷದ ಮುಖಂಡರಲ್ಲ. ನಿಜ ಹೇಳಬೇಕೆಂದರೆ ಇಲ್ಲ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗು ಜೆಡಿಎಸ್ ಕೂಡ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿವೆ.
ಆದರೆ ಜನರ ಪರವಾಗಿ ರಾಜ್ಯಪಾಲರು ಸರಿಯಾದ ನಿರ್ಧಾರ ತೆಗೆದುಕೊಂಡು ಕೇಸು ದಾಖಲಿಸಲು ಅವಕಾಶ ನೀಡಿದ್ದರಿಂದ ರಾಜ್ಯ ಸರಕಾರ ತನ್ನ ಬಿಜೆಪಿ ಪಾಳಯಕ್ಕೆ ಹೇಳಿ ಅನಾವಶಕವಾಗಿ ಬಂದ್ ನಡೆಸಿ 65 ಕ್ಕೂ ಹೆಚ್ಚು ಬಸ್ಗಳಿಗೆ ಕಲ್ಲು ಹೊಡೆಸಿದೆ. ಕೇವಲ ಸಾರಿಗೆ ಬಸ್ ಸಂಚಾರ ನಿಲ್ಲಿಸಿದ್ದರಿಂದ ಸರಕಾರಕ್ಕೆ 4.5 ಲಕ್ಷ ರೂ. ನಷ್ಟವಾಗಿದೆ. ಇದಕ್ಕೆಲ್ಲ ಕಾರಣ ಯಡಿಯೂರಪ್ಪ.
ಬಂದ್ ನಿಂದ ರಾಜ್ಯದ ನಾನ ಜಿಲ್ಲೆಗಳಲ್ಲಿ ಜನ ತತ್ತರಿಸಿ ಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಗುಂಡಾಗಿರಿ ಮೆರೆದರು ಯಡಿಯೂರಪ್ಪ ಮಾತ್ರ "ಜನ ಸ್ವಯಂಪ್ರೇರಿತರಾಗಿ ಬಂದ್ ನಡೆಸಿದ್ದಾರೆ " ಎಂದು ಹೇಳಿ ತಿಪ್ಪೆ ಸಾರಿಸಿದ್ದಾರೆ. ಇಂತ ಹೇಸಿಗೆ ರಾಜಕಾರಣಕ್ಕೆ ಇಳಿದಿರುವ ಯಡಿಯೂರಪ್ಪನಿಗೆ ಜನ ಕೂಡ ಪ್ರತಿಕ್ರಯಿಸದೆ ಸುಮ್ಮನೆ ಕುಳಿತು ನೋಡುತ್ತಿರುವುದು ಮಾತ್ರ ದುರಂತವೇ ಸರಿ.
ಜನ ಹೀಗೆ ಸುಮ್ಮನೆ ಕುಳಿತುಕೊಳ್ಳುವ ಪ್ರವೃತ್ತಿಯನ್ನು ಮುಂದುವರಿಸಿದರೆ ಯಡಿಯೂರಪ್ಪ ಮುಂದೊಂದು ದಿನ ಈ ರಾಜ್ಯವನ್ನು ಅಡವಿಟ್ಟರು ಆಶ್ಚರ್ಯವಿಲ್ಲ... ಕರ್ನಾಟಕ ಕಂಡರಿಯದ ಮುಖ್ಯಮಂತ್ರಿಯಾದ ಯಡಿಯೂರಪ್ಪ ರಾಜ್ಯದಲ್ಲೇ ಮೊದಲ ಬಾರಿಗೆ ಸರಕಾರವೇ ಮುಂದೆ ನಿಂತು ಬಂದ್ ಆಚರಿಸಿದ ಕುಖ್ಯಾತಿಗೂ ಪಾತ್ರರಾಗಿದ್ದಾರೆ. ಪ್ರಜಾಪ್ರಭುತ್ವವನ್ನೇ ಅರಿಯದೆ ಹೀಗೆ ಪ್ರಜೆಗಳ ಸಮಸ್ಯೆ ಹಾಗು ಅವರ ಕಷ್ಟಗಳನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಲಜ್ಜೆಗೆಟ್ಟು ಅಧಿಕಾರ ದಾಹ ತೋರುತ್ತ ಜನರ ಕಣ್ಣಿಗೆ ಮನ್ನೆರೆಚಿ ಸ್ವ ಹಿತಾಸಕ್ತಿ ಮೆರೆಯುವ ಇಂಥ ಮಾನಗೇಡಿ ಮುಖ್ಯಮಂತ್ರಿಯನ್ನು ಮತದಾರ ರಾಜ್ಯದ ಮರ್ಯಾದೆಯನ್ನು ಮನದಲ್ಲಿಟ್ಟುಕೊಂಡು ಮನೆಗೆ ಕಳಿಸದೇಹೋದರೆ ಮುಂದೆ ಇನ್ನು ಮಾನ ಕಳೆದುಕೊಳ್ಳಬೇಕಾಗುತ್ತದೆ...ಜತೆಗೆ ಸಾಮಾನ್ಯರು ಕೂಡ ಯದಿಯುರಪ್ಪನನ್ನೇ ಅನುಸರಿಸುತ್ತ "ಮೂರು ಬಿಟ್ಟವರು ಊರಿಗೆ ದೊಡ್ಡವರು'' ಎನ್ನುವ ಗಾದೆಯನ್ನ ಪಾಲಿಸಿದರು ಅಚ್ಚರಿಪಡಬೇಕಾಗಿಲ್ಲ. ಇದು ಸತ್ಯ....

ಕತ್ತು ಹಿಸುಕುವ ಕುಲಾಂತರಿ ತಳಿಯ ಅಗತ್ಯವೇ ಇಲ್ಲ

ಸಿನೇರಿಯಾ ಬ್ಯಾಕ್ಟೀರಿಯ ವಿಷಯುಕ್ತವಾದದ್ದು. ಇದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲೂ ದುಷ್ಪರಿಣಾಮಗಳಾಗುತ್ತವೆ. ಬಿಟಿ ತಳಿಯ ಆಹಾರ ಉತ್ಪನ್ನಗಳು ಒಮ್ಮೆ ಮಾರುಕಟ್ಟೆ ಪ್ರವೇಶಿಸಿದರೆ ನಾಟಿ ಮತ್ತು ಬಿಟಿ ನಡುವಿನ ವ್ಯತ್ಯಾಸ ಕಂಡುಹಿಡಿಯುವುದೇ ತುಂಬಾ ಕಷ್ಟ. ಅದರಲ್ಲೂ ಇದನ್ನು ಸೇವಿಸಿದರೆ ಆಗುವ ದುಷ್ಪರಿಣಾಮವನ್ನು ಪತ್ತೆ ಹಚ್ಚುವುದು ಇನ್ನೂ ಕಷ್ಟ ಎಂಬ ಜಾಗತಿಕ ತ್ಯದ ಅರಿವಿದ್ದರೂ ಐಸಿಎಆರ್ ವಿe ಕೇಂದ್ರಗಳಂತ ಕೆಲವು ಸಂಸ್ಥೆಗಳನ್ನು ಬಳಸಿಕೊಂಡು ಜಾಗತಿಕ ಕಂಪನಿಗಳು ದೇಶಾದ್ಯಂತ ಅಲ್ಲಲ್ಲಿ ಪ್ರಯೋಗದ ಹೆಸರಿನಲ್ಲಿ ಕುಲಾಂತರಿ ತಳಿಗಳನ್ನು ನುಸುಳಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ.

ಕುಲಾಂತರಿ ಎಲ್ಲ ಸಸ್ಯಗಳನ್ನು ವಿಷಯುಕ್ತವಾಗಿಸುತ್ತದೆ. ಆದ್ದರಿಂದ ಇದನ್ನು ಬಳಸಲು ಸಹಜವಾಗಿಯೇ ಭಯವಾಗುತ್ತದೆ. ಇದನ್ನು ಬಳಸುವುದರಿಂದ ನಮ್ಮಷ್ಟಕ್ಕೇ ನಾವೇ ಗುಂಡಿ ತೋಡಿಕೊಂಡ ರೀತಿ. ಅತೀ ಬುದ್ದಿವಂತರು ಎಂದು ಹೇಳಿಕೊಳ್ಳುವ ವಿeನಿಗಳು ಬಿಟಿಯನ್ನು ಬಳಸುವುದರಿಂದ ಹಾನಿಯಾಗುತ್ತದೆ ಎಂಬುದು ಗೊತ್ತಿದ್ದರೂ ತಮ್ಮ ಸ್ವಾರ್ಥಕ್ಕಾಗಿ ಅದನ್ನು ಮುಚ್ಚಿಡುತ್ತಾರೆ ಎನ್ನುವುದು ಅನುವಂಶಿಕತೆ ಶಾಸ್ತ್ರಜ್ಞ(ಜೆನೆಟಿಕ್ಸ್) ಡಾ.ಡೇವಿಡ್ ಸುಜುಕಿ ಅವರ ವಾದ.
ಬಿಟಿ ತಳಿಯಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಜತೆಗೆ ಅನುವಂಶಿಕತೆ ಮೇಲೂ ಪರಿಣಾಮವಾಗುತ್ತದೆ. ಇದರ ಬಳಕೆಯಿಂದ ಮಕ್ಕಳಾಗುವ ಸಾಧ್ಯತೆ ಕೂಡ ಕಡಿಮೆ ಎನ್ನುತ್ತಾರೆ ಇಂಡಿಯನ್ ಬಯೋಡೈವರ್ಸಿಟಿ ಫೋರಂ ಅಧ್ಯಕ್ಷ ಡಾ.ಎಸ್.ಫೈಜಿ.
ಕುಲಾಂತರಿ ತಂತ್ರಜ್ಞಾನದಿಂದ ಪರಿಸರದ ಹಾಗೂ ಜೀವ ಸಂಕುಲದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂದು ಖಚಿತವಾಗಿ ಹೇಳಲಾಗದು. ಇದರಿಂದಾಗುವ ದುಷ್ಪರಿಣಾಮ ಅಷ್ಟು ಸುಲಭವಾಗಿ, ಬೇಗ ತಿಳಿಯದು. ಅದರಿಂದ ಜೀವ ಸಂಕುಲದ ಚಕ್ರದ ಮೇಲೆ ವ್ಯತಿರಿಕ್ತವಾದ ಪರಿಣಾಮವಾಗಿ ಇಡೀ ವ್ಯವಸ್ಥೆಯೇ ಬದಲಾಗಿಬಿಡುತ್ತದೆ. ಡಿಎನ್‌ಎ ಅನ್ನು ಬಳಸಿ ಅಭಿವೃದ್ಧಿಪಡಿಸುವ ಜೀವತಂತುವನ್ನು ಸಂಪೂರ್ಣವಾಗಿ ಅರ್ಥೈಸಲು ಇದೂವರೆಗೆ ಆಗಿಲ್ಲ. ಜತೆಗೆ ಅದರಿಂದಾಗುವ ದುಷ್ಪರಿಣಾಮಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ (೧೯೯೦) ಎನ್ನುವುದು ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಮುಖ್ಯಸ್ಥರಾದ (ಜೆನಿಟಿಕ್ಸ್) ಪ್ರೊ.ರಿಚರ್ಡ್ಸ್ ಲಿವೋಂಟಿನ್ ಅವರ ಅಭಿಪ್ರಾಯ.
ಹೀಗೆ ಬಯೋಟೆಕ್ನಾಲಜಿ ಬಗ್ಗೆ ಚೆನ್ನಾಗಿ ತಿಳಿದವರೆ ಕುತಾಂತರಿ ತಂತ್ರeನದ ಬಗ್ಗೆ ಬಹಳಷ್ಟು ಸತ್ಯಗಳನ್ನು ಬಹಿರಂಗಪಡಿಸಿದ ಮೇಲೂ ಮಾನ್ಸಂಟೋ ಕಂಪೆನಿ ತಮ್ಮ ಏಜೆಂಟರನ್ನು ಬಿಟ್ಟು ಭಾರತದ ರೈತರ ಮೇಲೆ ಕುಲಾಂತರಿ ತಳಿಗಳನ್ನು ಹೇರುವ ಪ್ರಯತ್ನ ನಡೆಸುತ್ತಲೇ ಇದೆ.
ಸಿನೇರಿಯಾ ಬ್ಯಾಕ್ಟೀರಿಯಾ ವಿಷಯುಕ್ತವಾದದ್ದು. ಇದನ್ನು ಉಪಯೋಗಿಸುವುದರಿಂದ ಮನುಷ್ಯನಲ್ಲೂ ದುಷ್ಪರಿಣಾಮಗಳಾಗುತ್ತವೆ. ಬಿಟಿ ತಳಿಯ ಆಹಾರ ಉತ್ಪನ್ನಗಳು ಒಮ್ಮೆ ಮಾರುಕಟ್ಟೆ ಪ್ರವೇಶಿಸಿದರೆ ನಾಟಿ ಮತ್ತು ಬಿಟಿ ನಡುವಿನ ವ್ಯತ್ಯಾಸ ಕಂಡುಹಿಡಿಯುವುದೇ ತುಂಬಾ ಕಷ್ಟ. ಅದರಲ್ಲೂ ಇದನ್ನು ಸೇವಿಸಿದರೆ ಆಗುವ ದುಷ್ಪರಿಣಾಮವನ್ನು ಪತ್ತೆ ಹಚ್ಚುವುದು ಇನ್ನೂ ಕಷ್ಟ ಎಂಬ ಜಾಗತಿಕ ಸತ್ಯದ ಅರಿವಿದ್ದರೂ ಐಸಿಎಆರ್ ವಿeನ ಕೇಂದ್ರಗಳಂತ ಕೆಲವು ಸಂಸ್ಥೆಗಳನ್ನು ಬಳಸಿಕೊಂಡು ಬಹುರಾಷ್ಟ್ರೀಯ ಕಂಪನಿಗಳು ದೇಶಾದ್ಯಂತ ಅಲ್ಲಲ್ಲಿ ಪ್ರಯೋಗದ ಹೆಸರಿನಲ್ಲಿ ಕುಲಾಂತರಿ ತಳಿಗಳನ್ನು ನುಸುಳಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇವೆ. ಹಣದಾಸೆಗೆ ಬಲಿಯಾಗಿ ಕೆಲವು ವಿವಿಗಳು ಕೂಡ ರೈತರ ನೆಲದಲ್ಲಿ ಈ ಪ್ರಯತ್ನ ನಡೆಸುತ್ತಿವೆ. ಇಂಥ ಪ್ರಯತ್ನದ ಹಿಂದಿರುವ ಏಕೈಕ ಇರಾದೆ ಭಾರತದ ದೇಸಿ ಕೃಷಿ ವ್ಯವಸ್ಥೆ ಹಾಗೂ ರೈತಕುಲದ ಸ್ವಾವಲಂಬನೆಯನ್ನು ಸರ್ವನಾಶ ಮಾಡಿ ಅದರ ಮೇಲೆ ತಮ್ಮ ಹಿಡಿತ ಸಾಸುವುದಾಗಿದೆ...
ಬಹುರಾಷ್ಟ್ರೀಯ ಕಂಪೆನಿಗಳು ಭಾರತದ ಕೃಷಿ ವ್ಯವಸ್ಥೆಯನ್ನು ಕೈವಶ ಮಾಡಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಇದೇ ಮೊದಲಲ್ಲ, ೧೯೫೦ರಿಂದಲೂ ಇಂಥ ಪ್ರವೃತ್ತಿಗಳು ನಡೆಯುತ್ತಲೇ ಇವೆ. ಭಾರತದ ಕೊಬ್ಬರಿ ಎಣ್ಣೆ ತನ್ನ ಉತ್ಕೃಷ್ಟತೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಜನತೆಯ ಗಮನ ಸೆಳೆದಿದ್ದ ಸಮಯದಲ್ಲಿ ಅಮೆರಿಕದ ಸೋಯಾಬೀನ್ ಅಸೋಸಿಯೇಷನ್ ತನ್ನ ಸೋಯಾಬೀನ್ ಹಾಗೂ ಜೋಳದ ಎಣ್ಣೆಗೆ ಜಾಗತಿಕ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಲಿಕ್ಕಾಗಿ ಭಾರತದ ತೆಂಗಿನ ಎಣ್ಣೆ ಹೃದಯಕ್ಕೆ ಮಾರಕ ಎಂದು ಬಿಂಬಿಸಿ ಶೇ.೯೦ ಮಂದಿ ತೆಂಗಿನ ಎಣ್ಣೆಯನ್ನು ಬಳಸದಂತೆ ಮಾಡಿತ್ತು!
ಅಲ್ಲಿಂದ ಇಲ್ಲಿ ವರೆಗೆ ಕೊಬ್ಬರಿ ಉದ್ಯಮ ಚೇತರಿಸಿಕೊಳ್ಳಲಾಗಿಲ್ಲ. ನೀರಾ, ಪನೆ ಬೆಲ್ಲ, ಎಳೆನೀರು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಭಾರತದ ಕೃಷಿಯನ್ನು ಜಾಗತಿಕ ಕಂಪೆನಿಗಳು ಹತ್ತಿಕ್ಕುತ್ತಲೇ ಬಂದವು. ಇದರಿಂದಾಗಿ ಇಡೀ ಕೃಷಿ ನೀತಿಯೇ ಬದಲಾಗಿ, ರೈತರು ಹೆಜ್ಜೆ ಹೆಜ್ಜೆಗೂ ಆತ್ಮಹತ್ಯೆ ದಾರಿ ತುಳಿಯುವಂತಾಯಿತು. ಹೀಗಾಗಿ ಆಹಾರ ಭದ್ರತೆ, ಬೀಜ ಶೇಖರಣೆ ಸಂಸ್ಕೃತಿ ಎಲ್ಲವೂ ನಾಶವಾಗಿ ಇಡೀ ದೇಶದ ಕೃಷಿ ವ್ಯವಸ್ಥೆಯೇ ಇಂದು ಜಾಗತಿಕ ಕಂಪೆನಿಗಳ ಕಪಿಮುಷ್ಟಿಗೆ ಸಿಲುಕಿದೆ. ಅದರ ನಡುವೆ ಈಗ ಈ ‘ಬಿಟಿ ತಂತ್ರಜ್ಞಾನದ ಹೊಸ ವರಸೆ’. ಭಾರತದ ಕೃಷಿ ಅಭಿವೃದ್ಧಿಗೆ ಕುಲಾಂತರಿ ತಳಿ ತಂತ್ರಜ್ಞಾನವೊಂದೇ ಮುಖ್ಯವಲ್ಲ. ಕಳೆದ ಫೆಬ್ರುವರಿಯಲ್ಲಿ ಬಿಟಿ ಬದನೆ ಬಗ್ಗೆ ದೇಶಾದ್ಯಂತ ದೊಡ್ಡ ಚರ್ಚೆ ನಡೆದಾಗ ರೈತರು ವಿರೋಸಿದ್ದು ಬದನೆಯನ್ನು ಮಾತ್ರವಲ್ಲ, ಇಡೀ ಕುಲಾಂತರಿ ತಂತ್ರeನವನ್ನು.
ಕುಲಾಂತರಿ ತಂತ್ರeನದಿಂದಾಗುವ ದುಷ್ಟಪರಿಣಾಮಗಳನ್ನು ಅರಿಯಲು ಕನಿಷ್ಠ ೨೦ ವರ್ಷ ಬೇಕು. ಅಂತಹದ್ದರಲ್ಲಿ ಕೇಂದ್ರದ ಯುಪಿಎ ಸರಕಾರ ಅದಕ್ಕೊಂದು ಬಯೋಟೆಕ್ನಾಲಜಿ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ(ಬಿಆರ್‌ಎಐ) ಸ್ಥಾಪಿಸುವ ಹೇಳಿಕೆ ನೀಡಿ ಕುಲಾಂತರಿ ಬಗ್ಗೆ ಎದ್ದ ಬಿಸಿಯನ್ನು ತಣ್ಣಗೆ ಮಾಡಿತು ಅಷ್ಟೇ. ಆದರೆ ಈ ಕಂಪೆನಿಗಳು ಅದಕ್ಕೂ ಕೂಡ ಕಾಯದೆ ಆತುರಾತುರವಾಗಿ ಬಿಟಿ ತಂತ್ರಜ್ಞಾನಕ್ಕೆ ಪರವಾನಗಿ ಬೇಕು ಎಂದು ಬೊಬ್ಬೆ ಹೊಡೆಯುತ್ತಿವೆ. ಇವುಗಳ ಹಿಂದಿನ ಉದ್ದೇಶವಾದರೂ ಏನು? ಅಂದರೆ ಇವುಗಳಿಗೆ ಅಷ್ಟೂ ವ್ಯವದಾನವಿಲ್ಲ, ಬೇಗ ಕೃಷಿ ವ್ಯವಸ್ಥೆಯನ್ನು ತಮ್ಮ ಕೈವಶ ಮಾಡಿಕೊಂಡು ಕುಳಿತುಕೊಳ್ಳುವ ದುರುದ್ದೇಶ ಇಲ್ಲಿ ಎದ್ದು ಕಾಣುತ್ತದೆ. ನಾಳೆ ಬಿಆರ್‌ಎಐ ಸ್ಥಾಪಿಸಿದ ನಂತರ ಸಂಪೂರ್ಣವಾಗಿ ಬಿಟಿಯನ್ನು ಇಡೀ ದೇಶವೇ ತಿರಸ್ಕರಿಸಿದರೆ ಕಂಪೆನಿಯ ತಂತ್ರಗಳೆಲ್ಲಾ ತಲೆಕೆಳಗಾಗುತ್ತವೆ ಎನ್ನುವ ಭಯ ಕೂಡ ಕಾಡುತ್ತಿದೆ.
ಈಗ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ನ್ಯಾಷನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ದಿಲ್ಲಿ ಹಾಗೂ ಹೈದರಾಬಾದ್ ಮೂಲದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್ ಸೇರಿದಂತೆ ಏಳು ‘ಅತ್ಯನ್ನತ ಅಕಾಡೆಮಿಗಳು’ ‘ಇಂಟರ್ ಅಕಾಡೆಮಿ ರಿಪೋರ್ಟ್ ಆನ್ ಜಿ.ಎಂ. ಕ್ರಾಪ್ಸ್’ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದು ನಿಜ. ಆದರೆ ಕುಲಾಂತರಿ ತಂತ್ರeನದಲ್ಲಿ ಎಲ್ಲವೂ ಸರಿಯಾಗಿವೆ ಅದಕ್ಕಾಗಿ ‘ಕುಲಾಂತರಿ ತಳಿಗೆ ಜೈ ಹೋ’ ಎಂದಿಲ್ಲ! ಬದಲಿಗೆ ‘ಕುಲಾಂತರಿ ತಳಿಗಳು ಕೆಲವು ಅಪಾಯಗಳನ್ನು ತಂದೊಡ್ಡುತ್ತವೆ. ಆದರೆ ವಿಜ್ಞಾನ ಅವುಗಳ ಹಿಂದೆ ನಿಂತರೆ ಆ ಆತಂಕದಿಂದ ದೂರಾಗಬಹುದು’ ಎಂದು ಅಭಿಪ್ರಾಯಪಟ್ಟಿವೆ. ಹಾಗೇಯೇ ‘ಯಾವುದೇ ಪದಾರ್ಥ ಶೇ.೧೦೦ಕ್ಕೆ ನೂರರಷ್ಟು ಸುರಕ್ಷಿತವಲ್ಲ, ಹಾಗಾಗಿ ಬಿಟಿ ಬದನೆಯನ್ನು ಮಾತ್ರ ದೂರುವುದು ಸರಿಯಲ್ಲ’ ಎಂದು ಹೇಳಿವೆ.
ಅಂದರೆ ಈ ‘ಅತ್ಯುನ್ನತ ವಿಜ್ಞಾನ ಅಕಾಡೆಮಿಗಳು’ ಕೂಡ ರೈತರ ವಿಚಾರದಲ್ಲಿ ‘ಸುರಕ್ಷಿತವಲ್ಲ’ ಎನ್ನುವುದು ಇಲ್ಲಿ ಸ್ಪಷ್ಟ. ಈ ವರದಿ ಕೂಡ ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗಿದೆ. ‘ಕುಲಾಂತರಿ ತಳಿಯಿಂದ ಸಾಮಾಜಿಕ ಮತ್ತು ಆರ್ಥಿಕ ಗಂಡಾಂತರಗಳು ಒದಗಲಿವೆಯೋ ಅಥವಾ ಲಾಭಕರವೋ ಎಂಬ ವಿಷಯವನ್ನು ನಿರ್ಧರಿಸಬೇಕಾದದ್ದು ಎನ್‌ಜಿಒಗಳ ಗುಂಪಲ್ಲ’.
ನಿಜ, ಆದರೆ ಅದನ್ನು ನಿರ್ಧರಿಸಬೇಕಾದದ್ದು ಜಾಗತಿಕ ಕಂಪೆನಿಗಳೂ ಅಲ್ಲ. ಅದು ‘ರೈತರ ಹಕ್ಕು’.
ರೈತನು ಬೆಳೆದ ಸರಕು ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ನಿರ್ಧಾರವಾಗುತ್ತಿವೆ. ಅದೇ ಈ ದೇಶದ ರೈತರನ್ನು ಬಡತನದಲ್ಲಿ ಬಳಲುವಂತೆ ಮಾಡಿದ್ದು ಎಂಬುದು ಅಕ್ಷರಶಃ ಸತ್ಯ. ರೈತ ಬೆಳೆದ ಪ್ರತಿ ಬೆಳೆಗೂ ಅವನೇ ದರ ನಿಗದಿಪಡಿಸುವ ಹಕ್ಕನ್ನು ಅವನಿಂದ ಕಸಿದುಕೊಳ್ಳದೆ ಹೋಗಿದ್ದರೆ ಇಂದು ಜಾಗತಿಕ ಕಂಪೆನಿಗಳು, ಅವುಗಳ ಪರ ಬೊಬ್ಬಿಡುವ ಸ್ವಯಂಘೋಷಿತ ವಿಜ್ಞಾನಿಗಳು ಇಂದು ರೈತರ ವಿರುದ್ಧ ಬಡಬಡಿಸುವ ಪ್ರಮೆಯವೇ ಬರುತ್ತಿರಲಿಲ್ಲ, ಅದಕ್ಕೆ ಅವಕಾಶವೂ ಇರುತ್ತಿರಲಿಲ್ಲ; ಜತೆಗೆ ರೈತರು ಆತ್ಮಹತ್ಯೆ ದಾರಿಯನ್ನೂ ತುಳಿಯುತ್ತಿರಲಿಲ್ಲ...
ಇಲ್ಲಿ ನಿಜವಾಗಿಯೂ ಆತಂಕ ಪಡುತ್ತಿರುವವರು ರೈತರು. ಅವರ‍್ಯಾರೂ ಕೆಲಸಬಿಟ್ಟು ಮನವಿ ಹಿಡಿದು ವಿeನಿಗಳು ಅಥವಾ ಸರಕಾರದ ಬಳಿ ಬರುವುದಿಲ್ಲ. ಕಾರಣ ಇಷ್ಟೇ ಅವರೆಲ್ಲ ಒಂದು ದಿನ ಉತ್ತುವುದು, ಬಿತ್ತುವುದು ಅಥವಾ ಬೆಳೆಗಳ ನಡುವೆ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಈ ದೇಶದ ಅದೆಷ್ಟೋ ಲಕ್ಷ ಜನ ಅನ್ನವಿಲ್ಲದೆ ಪರದಾಡಬೇಕಾಗುತ್ತದೆ!!
ಜಾಕತಿಕ ಕಂಪೆನಿಗಳು ಈ ರೀತಿ ಮತ್ತೆ ಮತ್ತೆ ‘ಕಿತಬಿ’ ತೆಗೆಯುತ್ತಿರುವುದರಿಂದ ರೈತರು ಬೀದಿಗಿಳಿಯುತ್ತಿದ್ದು, ಅದರಿಂದಾಗಿ ಭಾರತದಲ್ಲಿ ಆಹಾರ ಅಭದ್ರತೆ ನಿತ್ಯ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ೬ ವರ್ಷಗಳಿಂದೀಚೆಗೆ ಈ ಅಭದ್ರತೆ ಎಲ್ಲೆ ಮೀರಿದೆ. ಆದ್ದರಿಂದಲೇ ಜಾಗತಿಕ ಕಂಪೆನಿಗಳ ಇಂಥ ಹುನ್ನಾರಗಳನ್ನು ಅರಿತು ಈ ನೆಲದ ಜನ ಆಗಾಗ ರೈತರ ಬೆನ್ನಿಗೆ ನಿಲ್ಲುವ ಮೂಲಕ ಅನ್ನದ ಋಣ ತೀರಿಸುತ್ತಿದ್ದಾರೆ ಅಷ್ಟೇ...
ಆಗಾಗ ಅಭಿವೃದ್ಧಿ, ಆಧುನಿಕತೆ, ಜಾಗತಿಕರಣ, ಖಾಸಗಿಕರಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಜತೆಗೆ ‘ನಮ್ಮದೇ ಸರಕಾರಗಳು’ ಇನ್ನಿಲ್ಲದ ಹುನ್ನಾರ ನಡೆಸುತ್ತಿವೆ. ಭೂಮಿಯನ್ನು ಕಸಿದುಕೊಳ್ಳುವುದರ ಜತೆಗೆ ಇದ್ದ ತುಸು ಜಾಗದಲ್ಲಾದರೂ ಬೆಳೆ ಬೆಳೆಯೋಣವೆಂದು ರೈತರು ಅಣಿಯಾದಾಗ ಜಾಗತಿಕ ಕಂಪೆನಿಗಳು ಹೀಗೆ ಮತ್ತೆ ಮತ್ತೆ ಈ ದೇಶದ ಸ್ವಾವಲಂಬನೆಯನ್ನು ಅಡವಿಟ್ಟುಕೊಳ್ಳಲು ಕುಂತಂತ್ರ ನಡೆಸತ್ತಲೇ ಇವೆ. ಆದ್ದರಿಂದ ಈ ಮಣ್ಣಿನಲ್ಲಿ ಬೆಳೆದು ಇದೇ ಮಣ್ಣಿನಲ್ಲಿಯೇ ಬದುಕಬೇಕಿರುವ ನಾವು ಇಂಥ ಹುನ್ನಾರಗಳ ಬಗ್ಗೆ ಸದಾ ಜಾಗೃತರಾಗಿರಬೇಕು...
Powered By Blogger