Monday, August 27, 2012

ವಿಜಯ ವಾಣಿಯಲ್ಲಿ ಪ್ರಕಟವಾದ ಪಿ.ಸಾಯಿನಾಥ್ ಅವರ ಸಂದರ್ಶನ...

ಪಿ.ಸಾಯಿನಾಥ್ ಅವರೊಂದಿಗೆ ರಮೇಶ್ ಹಿರೇಜಂಬೂರು ಮಾತುಕತೆ...

Thursday, August 2, 2012

ಈ ವಂಡರ್ಫುಲ್ ಪತ್ರಿಕೆ "ನವ ಮಾನವ" ನೀವೂ ಖರೀದಿಸಿ ಓದಿ...


ಸ್ನೇಹಿತರೆ, ನಿಮೊಂದು ಸಂತಸದ ಸುದ್ದಿ! ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಇದ್ದಾಗ "ಮಾನವ" ಎಂಬ ಸಣ್ಣ ಮಾಸಿಕ ಪತ್ರಿಕೆಯೊಂದು ಹೊರಬರುತ್ತಿತ್ತು. ಅದು ನಿಜಕ್ಕೂ ಅದ್ಭುತವಾಗಿತ್ತು. ಈಗ ಅದೇ ರೀತಿಯ ಮತ್ತೊಂದು ಮಾಸಿಕ ಪತ್ರಿಕೆ "ನವ ಮಾನವ" ನಮ್ಮ ಕಣ್ಣೆದುರೇ ಇದೆ. ಆದರೆ ಅದನ್ನು ಎಷ್ಟು ಜನ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ! ಅಲ್ಲಿ ಜಾಹಿರಾತುಗಳಿಲ್ಲ, ಗೊಡ್ಡು ರಾಜಕಾರಣಿಗಳ ಪೊಳ್ಳು ಭಾಷಣಗಳಿಲ್ಲ , ಬದಲಿಗೆ ಮನಸನ್ನು ಸದಾ ಕಾಡುವ ಈ ದೇಶದ ಸಮಸ್ಯೆಗಳು, ಪ್ರಗತಿಯ ಚಿಂತನೆಗಳಿವೆ. ಅದಕ್ಕೊಂದೆರಡು ಶೀರ್ಷಿಕೆಗಳನ್ನು ಉದಾಹರಿಸಿ ಹೇಳುವುದಾದರೆ "ಬೇಸಾಯ- ನೀ ಸಾಯ... ನಾ ಸಾಯ..."  "ಹಸಿರು ಕ್ರಾಂತಿಯ ಜಾತ್ರೆಯಲ್ಲಿ ಕಾಣೆಯಾದವರು..." "ಅಂಬೇಡ್ಕರ್ ಹಾಗು ಲೋಹಿಯಾ: ಜಾತಿ ಕುರಿತ ಒಂದು ಸಂವಾದ" ಹೀಗೆ ಹತ್ತು ಹಲವು ಲೇಖನಗಳಿವೆ. ಇವು ನಮ್ಮ ಬುದ್ಧಿ, ವಿಚಾರ ಲಹರಿಗಳನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ.
ಈ ಪತ್ರಿಕೆಗೆ ಸಂಪಾದಕರಾದ ಶಿವಮೊಗ್ಗದ ಡಿ.ಎಸ್.ನಾಗಭೂಷಣ್ ಅವರು ಹಣ ನಿಗದಿ ಮಾಡಿಲ್ಲ! "ನೀವು ಕೊಟ್ಟಷ್ಟು" ಎಂದು ನಮೂದಿಸಿದ್ದಾರೆ. ಹಾಗಂತ ನಾವು ಪುಕ್ಕಟ್ಟೆ ತೆಗೆದುಕೊಂಡು ಓದುವುದು ಸರಿಯಲ್ಲ. ಇಂಥ ವಿಚಾರಗಳನ್ನು ನಮಗೆ ತುಂಬುವ ಈ ಪತ್ರಿಕೆಗೆ ವರ್ಷಕ್ಕೆ ಕನಿಷ್ಠ 100 ರೂ. ಗಳನ್ನಾದರೂ ನೀಡಿ ಓದೋಣ... ಹಣ ನೀಡಿದರೆ ನೀವಿದ್ದಲ್ಲಿಗೆ ಪತ್ರಿಕೆ ನಿಮ್ಮ ಕೈಗೆ ತಲುಪುತ್ತದೆ.  ಈ ಪತ್ರಿಕೆ ಖರೀದಿಸಲು ಆಸಕ್ತರಿದ್ದಲ್ಲಿ ನನ್ನ ಮೊ: 94495 10318 ಸಂಖೆಗೆ ಸಂಪರ್ಕಿಸಬಹುದು. ಅಥವಾ  ಈ ಪತ್ರಿಕೆಯ ಸಂಪಾದಕರಾದ ಡಿ.ಎಸ್.ನಾಗಭೂಷಣ, ಮೊ: 94492 42284 ಅವರನ್ನಾದರೂ ನೇರವಾಗಿ ಸಂಪರ್ಕಿಸಿ. ನಿಮ್ಮ ಹಣ ಹಾಗು ವಿಳಾಸ ನೀಡಿ. ಪತ್ರಿಕೆಯನ್ನು ನಿಮ್ಮದಾಗಿಸಿಕೊಂಡು ಓದಿ... 
ನೆನಪಿರಲಿ ಇದು ಜೋಪಾನವಾಗಿರಿಸಿಕೊಳ್ಳುವ ಪತ್ರಿಕೆ...
ಇಂತಿ ನಿಮ್ಮ ಆತ್ಮೀಯ 
-ರಮೇಶ್ ಹಿರೇಜಂಬೂರು
Powered By Blogger