Thursday, December 11, 2008

ಬಾಬಾಬುಡನ್‌ಗಿರಿಯಲ್ಲಿ ಭಜರಂಗಿಗಳ ‘ಬಂಡಾಟ’




ಡಿಸೆಂಬರ್ ಬಂತೆದರೆ ಚಳಿ ಜೋರಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಚಿಕ್ಕಮಗಳೂರಿನಲ್ಲಿ ಮಾತ್ರ ಬಿಸಿ ಏರುತ್ತದೆ. ಆ ಬಿಸಿ ಗಾಳಿ ಕೇವಲ ಅಲ್ಲಿಗೆ ಮಾತ್ರ ಸೀಮಿತಗೊಳ್ಳುದಿಲ್ಲ. ಇಡೀ ರಾಜ್ಯಕ್ಕೇ ವ್ಯಾಪಿಸಿ ಕೂಮು ದಳ್ಳುರಿ ಹೊತ್ತಿಕೊಳ್ಳಲು ಪ್ರಚೋದನೆ ನೀಡುತ್ತದೆ.
ಇದಕ್ಕೆಲ್ಲಾ ಕಾರಣ ಸಂಘಪರಿವಾರದ ನಾಯಕರು ಹಾಗೂ ಕಾರ್ಯಕರ್ತರು. ಹೌದು, ಚಿಕ್ಕಮಗಳೂರಿನ ಹೊಟ್ಟೆಯಲ್ಲಿರುವ ಪ್ರಶಾಂತ ಹಾಗೂ ಸೌಹಾರ್ದ ಕೇಂದ್ರ ಬಾಬಾಬುಡನ್‌ಗಿರಿ. ಇದು ನಿಜಕ್ಕೂ ರಮಣೀಯ ತಾಣ. ಬೆಟ್ಟದ ಮೇಲೆ ಹತ್ತಿ ಹುಳಿತರೆ ಆ ಸ್ವರ್ಗವೇ ಧರೆಗಿಳಿದು ಬಂದಂತಿರುತ್ತದೆ. ಆ ನಯನ ಮನೋಹರ ದೃಶ್ಯವನ್ನು ನೋಡಲು ಕಣ್ಣುಗಳೇ ಸಾಲದು. ಅದು ಅಂಥ ಅದ್ಬುತ ಪ್ರವಾಸಿ ತಾಣ. ಇಲ್ಲಿಗೆ ನಿತ್ಯವೂ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ ( ಈಗ ಕಡಿಮೆಯಾಗಿದ್ದಾರೆ).
ಆದರೆ ಡಿಸೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಯಾವ ಪ್ರವಾಸಿಗರೂ ಈ ಕಡೆ ಮುಖ ಮಾಡಿ ಕೂಡ ನೋಡುವುದಿಲ್ಲ. ಕಾರಣ ಇಲ್ಲಿ ಸುಳಿಯುವ ಬಿಸಿ ಗಾಳಿ ! ಅಂದರೆ ಇಲ್ಲಿಯ ವಾತಾವರಣ ಬಿಸಿಯಾಗುತ್ತದೆ ಎಂದರ್ಥವಲ್ಲ. ಇಡೀ ವಾತಾವರಣವನ್ನು ಸಂಘಪರಿವಾರದ ಕಿಡಿಗೇಡಿಗಳು ಬಿಸಿ ಮಾಡುತ್ತಾರೆ ಅಷ್ಟೆ.
ಇವರಿಗೆ ಬೇರೆ ಕೆಲಸ ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರತಿ ಡಿಸೆಂಬರ್‌ಗೆ ಒಂದಲ್ಲ ಒಂದು ತಗಾದೆ ತೆಗೆಯಬೇಕೆಂದು ವರ್ಷವಿಡೀ ಹೊಂಚು ಹಾಕುವುದಂತೂ ಸತ್ಯ. ಅದಕ್ಕೇ ಎರಡು ಸಮುದಾಯಗಳ ನಡುವೆ ಈ ತಿಂಗಳು ಶೀಥಲ ಸಮರ ನಡೆಯುತ್ತದೆ. ಜಿಲ್ಲಾಡಳಿತ ಹಾಗೂ ಪೊಲೀಸರು ಸ್ವಲ್ಪ ಎಚ್ಚರ ತಪ್ಪಿದರೂ ಅಲ್ಲಿ ಭಾರೀ ಕದನ ನಡೆದರೂ ಅಚ್ಚರಿಯಿಲ್ಲ.
ಬಾಬಾಬುದಡನ್‌ಗಿರಿ ನಿಜಕ್ಕೂ ಸಮನ್ವಯ ತಾಣ. ಟಿಪ್ಪುವಿನ ಹಿಂದಿನ ಕಾಲದಿಂದಲೂ ಅಲ್ಲಿ ದತ್ತಾತ್ರೇಯ ಹಾಗೂ ಬಾಬಾನ ಅನುಯಾಯಿಗಳು ತಮ್ಮದೇ ಆದ ರೀತಿಯಲ್ಲಿ ಯಾವುದೇ ಸಂಪ್ರದಾಯ, ಕಂದಾಚಾರಗಳಿಲ್ಲದೆ, ಶಾಂತಿ ಮತ್ತು ಸಮನ್ವಯತೆಯಿಂದ ಪೂಜೆ ಮಾಡಿಕೊಂಡು ಬರುತ್ತಿದ್ದರು. ೧೯೮೦ರ ನಂತರ ಹಿಂದುತ್ವಕ್ಕೆ ರಾಜ್ಯದಲ್ಲೂ ಪ್ರಚೋದನೆ ಹಾಗೂ ತುಸು ಬೆಂಬಲ ದೊರೆತ ಕೂಡಲೇ ಈ ‘ಸೌಹಾರ್ದ ಗಿರಿ’ ಸೇರಿದಂತೆ ಅನೇಕ ಸ್ಥಳಗಳನ್ನು ಸಂಘಪರಿವಾರ ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳಲು ಇಂದಿಗೂ ಹೊಂಚು ಹಾಕುಲೇ ಇದೆ.
ಹಿಂದಿನ ಪುರಾಣಗಳನ್ನು ಕೆದಕುವುದು ಬೇಡ ಈಗಿನದರ ಬಗ್ಗೆ ಯೋಚಿಸೋಣ. ಮೊನ್ನೆ ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ಬಾಬಾಬುಡನ್‌ಗಿರಿಯಲ್ಲಿ ಯತ್ಥಾ ಸ್ಥಿತಿ ಕಾಪಾಡಿಕೊಳ್ಳಿ, ಹೊಸ ಆಚರಣೆಗಳು ಬೇಡ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಸಂಘ ಪರಿವಾರದ ಜನ ಮಾಡಿದ್ದಾದರೂ ಏನು...? ಅದೇ... ಜಾಗದಲ್ಲಿ ಕಡ್ಡಿ ಹಾಕಿ ಕೆದಕುವ ಕೆಲಸ.
ಪ್ರತಿಭಾರಿ ಶೋಭಾಯಾತ್ರೆ, ಹನುಮಜಯಂತಿ ಅಂತೆಲ್ಲಾ ಪೂಜೆ ಮಾಡಿ ಚಿಕ್ಕಮಗಳೂರಿನ ಬೀದಿ ಬೀದಿಗಳಲ್ಲಿ ಕೇಸರಿ ಧ್ವಜ ಹಿಡಿದು ಮೆರವಣಿಗೆ ಮಾಡುತ್ತಿದ್ದರು., ಗಂಟಲು ಹರಿದುಕೊಳ್ಳುತ್ತಿದ್ದರು. ಆದರೆ ಈ ವರ್ಷ ರಾಜ್ಯದ ಮೂಲೆ ಮೂಲೆಗಳಿಂದ ಮಹಿಳಾ ಮೋರ್ಚಾದ ಸಾವಿರಾರು ಮಹಿಳೆಯರನ್ನು ಚಿಕ್ಕಮಗಳೂರಿಗೆ ಕರೆಸಿ, ಅಲ್ಲಿ ಹೊಸದಾಗಿ ಅನುಸೂಯ ಯಾತ್ರೆ ಮಾಡಿದ್ದಾರೆ. ಇದು ತರವೇ? ಕಡ್ಡಿ ಹಾಕಿ ಕೆದಕುವುದು ಅಂದರೆ ಇದೇ ತಾನೆ ?
ಜತೆಗೆ ಬಾಬಾ ಬುಡನ್‌ಗಿರಿಯಲ್ಲಿ ಗುಹೆ ಕುಸಿದಿದೆ. ಅಷ್ಟಕ್ಕಾದರೂ ಇವರು ಸುಮ್ಮನಾಗುತ್ತಾರೆ ಎಂದುಕೊಳ್ಳೋಣ ಎಂದು ಯೋಚಿಸುತ್ತಿರುವಾಗಲೇ ಗಿರಿಯ ಮೇಲೆ ಶೆಡ್ ಹಾಕಿ, ದತ್ತಾತ್ರೇಯ ಹಾಗೂ ಅನುಸೂಯ ದೇವಿಯ ಬೆಳ್ಳಿ ಮೂರ್ತಿ ತಂದು ಇಟ್ಟು , ಪೂಜೆ ಹೋಮ, ಹವನ ಮಾಡುತ್ತಿದ್ದಾರೆ. ಸಮಾಜದಲ್ಲಿ ತಾವೇ ನಿಷ್ಠಾವಂತ ಹಿಂದೂಗಳು ಎಂದು ತೋರಿಸಿಕೊಳ್ಳಲು ಪಾಪ ಇವರಿಗೆ ಬೇರೆ ದಾರಿಯೇ ಸಿಕ್ಕಿಲ್ಲವೇನೂ ಅದಕ್ಕೆ ಇಂಥ ಸೂಕ್ಷ್ಮ ವಿಚಾರಗಳನ್ನು ಕೆದಕಿ ಕೆದಕಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬಂದಾಗಿದೆ. ಆದರೂ ಇವರು ತಮ್ಮ ಹಳೇ ಚಾಳಿ ಬಿಟ್ಟಿಲ್ಲ. ಅಕಾರಕ್ಕೆ ಬಂದ ನಂತರ ಮಾಡಿದ ‘ಮಹಾನ್‌ಕಾರ್ಯ’ ಮೆಚ್ಚಿಕೊಂಡು ಈಗ ನಿತ್ಯವೂ ಬೀದಿಗಿಳಿಯುತ್ತಿದ್ದಾರೆ. ಇಷ್ಟಾದರೂ ಈ ಚಡ್ಡಿಗಳಿಗೆ ಬುದ್ದಿ ಬಂದಿಲ್ಲ. ನಾಚಿಕೆಯಾಗುತ್ತಿಲ್ಲ.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಸೇರಿದಂತೆ ನಾಡಿನ ನಾನಾ ಪ್ರಗತಿಪರ ಸಂಘಟನೆಗಳು, ಪರಿಸರವಾದಿಗಳು, ಪ್ರಗತಿಪರರು, ವಿಚಾರವಂಥರು ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇ ಇಷ್ಟು ಆಡುವ ಈ ಭಜರಂಗಿಗಳು ಯಾವುದೇ ಪ್ರತಿರೋಧ ಇಲ್ಲದೆ ಹೋಗಿದ್ದರೆ ಇಷ್ಟೊತ್ತಿಗಾಗಲೇ ಇಡೀ ಬಾಬಾಬುಡನ್‌ಗಿರಿಯೇ ಸಂಘ ಪರಿವಾರದ್ದು ಎಂದು ಸಾರಿ, ಅಲ್ಲಿ ಚಡ್ಡಿಗಳಿಗೆ ಮಾರ್ಚಫಾಸ್ಟ್ ಮಾಡಿಸುತ್ತಿದ್ದರೋ ಏನೋ....
Powered By Blogger