Wednesday, January 20, 2010

ಬಿಟಿ ಮತ್ತು ರೈತರು

ರಾಜ್ಯದಲ್ಲಿ ಮಾತ್ರವಲ್ಲ ಈಗ ದೇಶದೆಲ್ಲೆಡೆ ಬಿಟಿ ಬದನೆ ಬಗ್ಗೆ ಚರ್ಚೆ ನಡೆಯುತ್ತಿದೆ. ರೈತರು ಮಾತ್ರವಲ್ಲ ಈ ದೇಶದ ನೆಲ ಮತ್ತು ರೈತಪರ ಕಾಳಜಿಯುಳ್ಳ ಎಲ್ಲರೂ ಇದನ್ನು ಸಾರಸಗಟಾಗಿ ವಿರೋಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸೇರಿದಂತೆ ದೇಶದ ೭ ರಾಜ್ಯಗಳು ಈಗಾಲೇ ಈ ಕುಲಾಂತರಿ ತಳಿಗಳನ್ನು ವಿರೋಸಿವೆ. ವಿಶ್ವದ ಶೇ.೮೦ ರಾಷ್ಟ್ರಗಳು ಕೂಡ ಇದನ್ನು ವಿರೋಸಿದ್ದರಿಂದ ಈಗ ಅಮೆರಿಕದ ಕಣ್ಣು ಭಾರತದ ಮೇಲೆ ಬಿದ್ದಿದೆ!
ಇಂಥ ಅಮೆರಿಕದ ಕುತಂತ್ರವನ್ನು ಹಿಂದು ಮುಂದು ನೋಡದೆ ಒಪ್ಪಿಕೊಂಡು ಶೇ.೬೫ ಕುಲಾಂತರಿ ಬೀಜ ಬಳಸಿದ ಅರ್ಜೆಂಟೈನಾ ಮತ್ತು ಪೆರುಗ್ವೆ ದೇಶಗಳಲ್ಲಿ ಈಗ ಇಳುವರಿ ಕಡಿಮೆಯಾಗಿದೆ. ಆದರೆ ಇಷ್ಟೆಲ್ಲಾ ಕುತಂತ್ರವನ್ನು ಇತರ ದೇಶಗಳ ಮೇಲೆ ಹೇರುತ್ತಿರುವ ಅಮೆರಿಕ ಮಾತ್ರ ಸಾವಯವ ಆಹಾರವನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಪ್ರಮುಖ ಸ್ಥಾನದಲ್ಲಿದೆ. ಎಲ್ಲ ದೇಶಗಳ ಮೇಲೆ ಹೀಗೆ ಬಿಟಿ ಬೀಜಗಳನ್ನು ಬಿತ್ತಲ್ಲು ಹಚ್ಚಿದರೆ ಮುಂದೊಂದು ದಿನ ತಮಗೇ ಸಾವಯವ ಆಹಾರ ಸಿಗುವುದಿಲ್ಲ ಎಂಬ ಸಣ್ಣ ಸತ್ಯ ಕೂಡ ದೊ(ದ)ಡ್ಡಣ ಅಮೆರಿಕಗೆ ತಿಳಿದಿಲ್ಲ. ಇದೇ ವಿಪರ್ಯಾಸ.
ಹೀಗೆ ಆತುರಾತಿರವಾಗಿ ಬಿಟಿ ಬದನೆಯನ್ನು ಭಾರತದ ರೈತರ ಮೇಲೆ ಹೇರಲು ಹುನ್ನಾರ ನಡೆಸಿರುವ ಅಮೆರಿಕ, ಕೇಂದ್ರ ಸರಕಾರದ ಜುಟ್ಟು ಹಿಡಿದು ಕೂತಿದೆ. ಈಗಾಗಲೇ ಭಾರತದ ರೈತರ ಮೇಲೆ ಬಲವಂತವಾಗಿ ಬಿಟಿ ಬದನೆಯನ್ನು ಹೇರಿ ಶೇ.೫೦ರಷ್ಟು ರೈತರ ಭೂವಿಯನ್ನು ಹಾಳುಗೆಡವಿರುವ ಅಮೆರಿಕದ ‘ಸಂಜೆಂಟಾ’, ‘ಮಾನ್ಸಂಟೋ’ದಂಥ ಬಹುರಾಷ್ಟ್ರೀಯ ಕಂಪೆನಿಗಳು ಈಗ ಬಿಟಿ ಬದನೆಯನ್ನು ಮುಂದಿಟ್ಟುಕೊಂಡು ಕೂತಿವೆ.
ಬಿಟಿ ಹತ್ತಿ ಬೆಳೆಯುತ್ತಿರು ರೈತರಲ್ಲಿ ಈಗಾಗಲೇ ಉಬ್ಬಸ, ಚರ್ಮರೋಗದಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಅದರ ಗಾಯ ಇನ್ನೂ ಹಸಿ ಹಸಿಯಾರಿಗುವಾಗಲೇ ಅದರ ಮೇಲೆ ಮತ್ತೊಂದು ಬರೆ ಎಳೆಯಲು ‘ಸಂಜೆಂಟಾ’ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ಇದಕ್ಕೆ ‘ಶಾಂತಾರಾಮ್‌ರಂಥ ಏಜೆಂಟ್’ರನ್ನು ಬಳಸಿಕೊಳ್ಳುತ್ತಿದೆ. ಅದಕ್ಕೆ ಇಂಥವರೆಲ್ಲಾ ವಿeನಿಗಳು ಎಂಬ ಹೆಸರಿನಲ್ಲಿ ಕೋಲೆ ಬಸವನ ರೀತಿ ತಲೆದೂಗುತ್ತಿರುವುದಲ್ಲದೆ ಈ ದೇಶದ ರೈತರನ್ನೂ ತಲೆದೂಗಲು ಹೇಳುತ್ತಿದ್ದಾರೆ.
ಇಲ್ಲಿಯ ರೈತರು ಬೆಳೆದ ಅನ್ನ ತಿಂದು, ನೀರು ಕುಡಿದು ಬೆಳೆದು, ಈ ನೆಲದಲ್ಲಿ ಕಲಿತು ದೊಡ್ಡವರಾಗಿ ಉನ್ನತ ಶಿಕ್ಷಣವನ್ನ ಇನ್ಯಾವುದೋ ಪರದೇಶಿಗಳ ಕೈಲಿ ಕಲಿತು ಅದನ್ನೇ ಮೈಗೂಡಿಸಿಕೊಂಡು ಅವರು ಕೊಟ್ಟ ಪುಡಿಗಾಸನ್ನು ಆರಿಸಿಕೊಳ್ಳುತ್ತಿರುವ ಶಾಂತಾರಾಮ್‌ರಂಥವರು ಜನ್ಮ ನೀಡಿ ಸಾಕಿ ಬೆಳೆಸಿದ ಭೂಮಿಗೇ ವಿಷವಿಕ್ಕಲು ಅಣಿಯಾಗಿದ್ದಾರೆ. ಇಂಥ ‘ದೇಶದ್ರೋಹಿಗಳು’, ‘ಹೃದಯ ಹೀನರು’, ಕಿರಾತಕರಿಗೆ ಅದ್ಯವಾವ ರೀತಿ ಬುದ್ದಿ ಹೇಳಬೇಕೋ ತಿಳಿಯದು.
ಅದಿರಲಿ, ಇಂಥ ಮಾರಕ ಜೀ ವಿರೋ ವಿಚಾರದ ಬಗ್ಗೆ ದೇಶಾದ್ಯಂತ ಬಿಸಿ ಬಿಸಿ ಚರ್ಚೆ ನಡೆಸುವ ಸಂದರ್ಭದಲ್ಲಿ ಬೆಂಗಳೂರಿಗೆ ಅದೇ ವಿಚಾರದ ಬಗ್ಗೆ ಚರ್ಚೆ ನಡೆಸಲು ಖ್ಯಾತ ವಿಜ್ಞಾನಿ ಡಾ. ಪುಷ್ಪ ಎಂ.ಭಾರ್ಗವ್ ಜ.೨೦ರಂದು ಆಗಮಿಸಿದ್ದರು.
ಇದರ ಬಗ್ಗೆ ಎಲ್ಲ ಮಾಧ್ಯಮಗಳಲ್ಲಿಯೂ ಪ್ರಚಾರ ಮಾಡಲಾಗಿತ್ತು. ‘ಬಿಟಿ ಬದನೆಯ ತೆರೆಮರೆಯ ಸತ್ಯಕಥೆ’ ಕುರಿತ ಭಾಷಣ ಹಾಗೂ ಚರ್ಚೆ’ಯಲ್ಲಿ ಭಾಗವಹಿಸಲು ರೈತರು, ರೈತ ನಾಯಕರಿಗೆ ಮನವಿ ಮಾಡಲಾಗಿತ್ತು. ಜತೆಗೆ ಚರ್ಚೆಗೆ ಮುಂಚಿತವಾಗಿಯೇ ಹೆಸರು ನೋಂದಣಿ ಮಾಡಿಸಲು ತಿಳಿಸಲಾಗಿತ್ತು. ಆದರೆ ಅಲ್ಲಿ ಆಗಿದ್ದೇ ಬೇರೆ. ಕೆಲವೇ ಕೆಲವು ರೈತರು ಮಾತ್ರ ಅಲ್ಲಿಗೆ ಆಗಮಿಸಿದ್ದರು. ಇನ್ನು ಹೆಸರು ನೋಂದಾಯಿಸಿದ ಪ್ರಮುಖ ರೈತರು ಕೂಡ ಚರ್ಚೆ ವೇಳೆ ಕಾರ್ಯಕ್ರಮದಲ್ಲಿರಲಿಲ್ಲ! ಇದು ನಮ್ಮ ರೈತರ, ರೈತನಾಯಕರ ಉತ್ಸಾಹ, ಆಕ್ರೋಶ ಮತ್ತು ಬುದ್ದಿವಂತಿಕೆ...!!
ರೈತರಿಗೆ ರೈತಾಪಿಯ ಜತೆಗೆ ಅದೆಷ್ಟು ಅನಿವಾರ್ಯತೆ, ಹೊಂದಾಣಿಕೆಗಳಿರುತ್ತವೆ ಎಂಬುದು ಗೊತ್ತು. ಆದರೂ ಇಂಥ ಸುಸಂದರ್ಭಗಳಲ್ಲಿ ಒಂದು ದಿನದ ಮಟ್ಟಿಗಾದರೂ ಬಿಡುವು ಮಾಡಿಕೊಂಡು ಭಾಗವಹಿಸುವುದು, ತಮ್ಮ ಪರ ಕಾಳಜಿ ಇರುವವರ, ತಮ್ಮನ್ನು ಬೆಂಬಲಿಸುವವರ ಜತೆ ಕುಳಿತು ಚರ್ಚೆ ನಡೆಸುವ ಉತ್ಸಾಹವನ್ನಾದರೂ ತೋರಬೇಕು. ಅದಾಗದೆ ಹೋದರೆ ಮುಂದೊಂದು ದಿನ ಇಂಥ ಬಹುರಾಷ್ಟ್ರೀಯ ಕಂಪನಿಗಳು, ಏಜೆಂಟರು ರೈತರನ್ನು ತಿಂದು ತೇಗುವುದರಲ್ಲಿ ಸಂಶಯವಿಲ್ಲ.
ಡಾ.ಪುಷ್ಪ ಎಂ.ಭಾರ್ಗವ್ ಹೇಳಿದ್ದೇನು?
ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಆಯಾ ಪ್ರದೇಶಕ್ಕೆ ಅನುಗುಣವಾಗಿ ಆಹಾರ ಪದ್ಧತಿ ರೂಪಿತವಾಗಿದೆ. ಅದರ ಆಧಾರದ ಮೇಲೆಯೇ ಅಲ್ಲಿನ ರೈತರು ಆಹಾರ ಬೆಳೆಯನ್ನು ಬೆಳೆಯುತ್ತಾರೆ. ಅದೆಲ್ಲವೂ ಅಲ್ಲಿನ ಹವಾಗುಣಕ್ಕೆ ಹೊಂದಿಕೊಂಡಿರುತ್ತದೆ. ಅಲ್ಲಿ ಏನು ಬೆಳೆಯಬೇಕು ಎಂಬುದನ್ನು ರೈತರೇ ನಿರ್ಧರಿಸುತ್ತಾರೆ. ಆದರೆ ಈಗ ಲಾಭದಾಸೆಗಾಗಿ ಮಾನ್ಸಾಂಟೋ ಹಾಗೂ ಸಂಜೆಂಟಾದಂತ ಬಹುರಾಷ್ಟ್ರೀಯ ಕಂಪನಿಗಳು ರೈತರ ಮೇಲೆ ವಿಷಕಾರ ಬೀಜಗಳನ್ನು ಬಿತ್ತಲು ಒತ್ತಡ ಹೇರುತ್ತಿವೆ.
ಬಿಟಿ ತಳಿ ಪರಿಸರಕ್ಕೆ ಮಾರಕ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಪರೀಕ್ಷೆ ಮಾಡಲು ಕೂಡ ಭಾರತದಂಥ ದೇಶಗಳಲ್ಲಿ ಸುಸಜ್ಜಿತ ಅಂತಾರಾಷ್ಟ್ರೀಯ ಲ್ಯಾಬ್‌ಗಳಿಲ್ಲ. ಒಂದು ವೇಳೆ ಪರೀಕ್ಷೆ ಮಾಡಲು ಮುಂದಾದರೂ ಅದರ ಫಲಿತಾಂಶ ಗೊತ್ತಾಗಲು ಕನಿಷ್ಠ ೨೦ ವರ್ಷ ಬೇಕು.
ಹೀಗಾಗಿ ಕೇಂದ್ರ ಸರಕಾರ ರೈತಸ್ನೇಹಿಯಾಗಿ ನಿರ್ಧಾರ ಕೈಗೊಂಡು ಬಿಟಿ ಬದನೆಯನ್ನು ತಿರಸ್ಕರಿಸುವುದು ಒಳಿತು. ಬಿಟಿ ಬದನೆ ಕುರಿತು ಸಾಕಷ್ಟು ಜನರಲ್ಲಿ ಅರಿವಿನ ಕೊರತೆಯಿದೆ. ಮುಖ್ಯವಾಗಿ ರೈತರಲ್ಲಿ ಈ ಕುರಿತ ಜಾಗೃತಿ ಮೂಡಲೇಬೇಕಿದೆ. ಬಿಟಿ ಬದನೆ ಕುರಿತು ಎದುರಾಗುವ ಸಮಸ್ಯೆಯ ಸಂಪೂರ್ಣ ವಿವರ ಇದುವರೆಗೂ ಸಿಕ್ಕಿಲ್ಲ. ದೊರೆತ ಮಾಹಿತಿ ಆಧರಿಸಿ ವಿಶ್ಲೇಷಿಸಿದಾಗ ಇದರಿಂದ ಆಗುವ ದುಷ್ಪರಿಣಾಮವೇ ಹೆಚ್ಚು.
ಜತೆಗೆ ಬಿಟಿ ಎಂದಾಕ್ಷಣ ಅದರ ಹಿಂದೆ ಕೇವಲ ಬೀಜ ಮಾತ್ರವಲ್ಲ ಅರ್ಥಶಾಸ್ತ್ರ, ರಾಜಕೀಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪಿತೂರಿ ಎಲ್ಲವೂ ಅಡಗಿದೆ. ಹೀಗಾಗಿ ಅದೊಂದು ಸುಳ್ಳಿನ ಕಂತೆ. ಭಾರತಕ್ಕೆ ಸ್ವಾತಂತ್ರ್ಯವೇನೊ ಬಂದಿದೆ ಆದರೆ ಇಂಥ ಕಂಪನಿಗಳ ವರ್ತನೆ ಒತ್ತಡಗಳನ್ನು ನೋಡಿದರೆ ಎಲ್ಲಿ ಸ್ವಾತಂತ್ರ್ಯ ಬಂದಿದೆ ಎಂಬ ಪ್ರಶ್ನೆ ಕಾಡುತ್ತದೆ ಎಂದು ವಿeನಿ ಪುಷ್ಪ ಎಂ.ಭಾರ್ಗವ್ ಹೇಳಿದರು. (ಇವು ಪ್ರಮುಖ ಅಂಶಗಳು ಮಾತ್ರ)
ರೈತರೇ ಬನ್ನಿ...
ಅಂದ ಹಾಗೆ ಇದೇ ಬಿಟಿ ಬಗ್ಗೆ ಚರ್ಚೆ ನಡೆಸಲು ಹಾಗೂ ರಾಜ್ಯದ ರೈತರ ಅಭಿಪ್ರಾಯ ಸಂಗ್ರಹಿಸಲು ಜ.೨೫ರ ಸೋಮವಾರ ಕೇಂದ್ರ ಪರಿಸ ಮತ್ತು ಅರಣ್ಯ ಸಚಿವ ಜಯ್‌ರಾಮ್ ರಮೇಶ್ ಆಗಮಿಸಲಿದ್ದಾರೆ.
ಬೆಂಗಳೂರಿ ರೆಸಿಡೆನ್ಸಿ ರಸ್ತೆಯಲ್ಲಿರುವ ಸೈಂಟ್ ಜೋಸೆಂಫ್ ಪಿಯು ಕಾಲೇಜು ಮುಂಭಾಗದಲ್ಲಿರುವ ಗುಡ್ ಶೇಫರ್ಡ್ ಆಡಿಟೋರಿಮ್‌ನಲ್ಲಿ ಶೀಘ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ರೈತರು, ರೈತಪರ ಕಾಳಜಿಯುಳ್ಳವರು ಅಂದು ಸಮಯಕ್ಕಿಂತ ಮುಂಚಿತವಾಗಿಯೇ ಬಂದು ಕುಳಿತರೆ ಒಳ್ಳೆಯದು. ಜತೆಗೆ ತಮ್ಮ ರೈತಪರ ನಿಲುವನ್ನು ಪ್ರಕಟಿಸಿದರೆ ಇನ್ನೂ ಒಳಿತು. ರೈತರದಲ್ಲದವರಿಗೂ ಇದು ರಾಜ್ಯದ ರೈತರ ಅನ್ನದ ಋಣವನ್ನು ತೀರಿಸಲು ಒಂದು ಸುವರ್ಣಾವಕಾಶ !

Saturday, January 16, 2010

ಬನ್ನಿ ಪುಸ್ತಕ ಪರಿಷೆಗೆ

ಇದು ಹೊತ್ತಗೆ ಎತ್ತಿಕೊಳ್ಳುವ ಹೊತ್ತು
ಕಡಲೆ ಪರಿಷೆ ನಡೆಯೋ ಜಾಗ ಬೆಂಗಳೂರಿನ ಬಸವನಗುಡಿ ಇನ್ನೊಂದು ಪರಿಷೆಗೆ ಸಜ್ಜಾಗಿದೆ. ಈ ಬಾರಿ ಕಡಲೆ ಸಿಗಲ್ಲ. ಪುಸ್ತಕ ಸಿಗುತ್ತೆ !
ಇದು ‘ಪುಸ್ತಕ ಪರಿಷೆ’. ಹಿಂದೆ ನಡೆಯದಿದ್ದ ವಿನೂತನ ಪ್ರಯೋಗವಿದು. ಯಾವುದೇ ಪುಸ್ತಕ ಮೇಳ, ಪುಸ್ತಕ ಸಂತೆ ಅಥವಾ ಮಳಿಗೆಗೆ ಕಾಲಿಟ್ಟರೂ ಹಣ ಕೊಟ್ಟೇ ಪುಸ್ತಕ ಖರೀದಿ ಮಾಡಬೇಕು. ಹಳೇ ಪುಸ್ತಕದ ಅಂಗಡಿಗೆ ಕಾಲಿಟ್ಟರೂ ದುಡ್ಡು ಕೊಡದೆ ಒಂದು ಖಾಲಿ ಹಾಳೆಯೂ ಸಿಗುವುದಿಲ್ಲ ! ಅಂಥದ್ದರಲ್ಲಿ ಇಲ್ಲಿ ಪುಕ್ಕಟೆ, ಅದೂ ನಿಮಗೆ ಇಷ್ಟವಾದ ಪುಸ್ತಕ ದೊರೆಯುತ್ತದೆ !
ನಿಜ, ಅದೇ ಇಲ್ಲಿನ ವಿಶೇಷತೆ. ಜ.೧೭ರಂದು ಬಸವನಗುಡಿಯಲ್ಲಿ ‘ಪುಸ್ತಕ ಪರಿಷೆ’ ನಡೆಯಲಿದೆ. ‘ಸೃಷ್ಟಿ ವೆಂಚರ‍್ಸ್’ ಸಂಸ್ಥೆ ಈ ಕಾರ್ಯಕ್ರಮಕ್ಕೆ ಕೈ ಹಾಕಿದೆ. ‘ತಮಗೊಂದು ಪುಸ್ತಕ ಉಚಿತವಾಗಿ ಮತ್ತು ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿ’ ಎಂಬ ಘೋಷಣೆಯೊಂದಿಗೆ ನಡೆಸುತ್ತಿರುವ ಈ ಪರಿಷೆಗೆ ಈಗಾಗಲೇ ಸಾಕಷ್ಟು ಅಮೂಲ್ಯ ಪುಸ್ತಕಗಳು ಕೊಡುಗೆಯಾಗಿ ಬಂದಿವೆ. ಪುಸ್ತಕಗಳನ್ನು ಪ್ರೀತಿಸುವವರು, ಕೊಳ್ಳಲು ಹಣವಿಲ್ಲ ಎಂದು ಯೋಚಿಸುವವರೂ ಈ ಪರಿಷೆಗೆ ಆಗಮಿಸಬಹುದು. ಆದರೆ ನಿಮಗಿಷ್ಟವಾದ ಒಂದೇ ಒಂದು ಪುಸ್ತಕವನ್ನು ಮಾತ್ರ ತೆಗೆದುಕೊಂಡು ಹೋಗಬಹುದು.
ಇದು ಓದುಗರ ಅಭಿರುಚಿ ಹೆಚ್ಚಿಸುವ ಜತೆಗೆ ಪುಸ್ತಕಗಳ ಬಗ್ಗೆ ಓದುಗರಲ್ಲಿ ಆಸಕ್ತಿಯನ್ನೂ ಹೆಚ್ಚಿಸಲಿದೆ ಎಂಬುದು ಸುಳ್ಳಲ್ಲ. ಈ ವಿಶೇಷತೆಯಿಂದಾಗಿಯೇ ಈಗಾಗಲೇ ಪರಿಷೆ ಬಗ್ಗೆ ಪುಸ್ತಕಪ್ರಿಯರಲ್ಲಿ ಕುತೂಹಲ ಆರಂಭವಾಗಿದೆ. ಕನ್ನಡದಲ್ಲಿ ಓದುಗರೇ ಇಲ್ಲವಾಗುತ್ತಿದ್ದಾರೆ ಎಂಬ ಅಪವಾದದ ನಡುವೆಯೂ ಪುಸ್ತಕಗಳು ಹರಿದು ಬರುತ್ತಿರುವುದು ಹಾಗೂ ಈ ಬಗ್ಗೆ ಪುಸ್ತಕ ಪ್ರೇಮಿಗಳ ನಡುವೆ ಚರ್ಚೆಯಾಗುತ್ತಿರುವುದು ನೋಡಿದರೆ ಆ ಮಾತು ಸುಳ್ಳು ಎನಿಸದಿರದು. ಪಂಚಭೂತ, ಬಣ್ಣದ ಬಯಲು, ವಿeನ ಶಿಬಿರದಂಥ ಕಾರ್ಯಕ್ರಮ ನಡೆಸಿದ್ದ ‘ಸೃಷ್ಟಿ ವೆಂಚರ‍್ಸ್’ ಈಗ ಈ ಪ್ರಯೋಗಕ್ಕೆ ಕೈ ಹಾಕಿದೆ.
ಇಲ್ಲಿ ಎಲ್ಲ ರೀತಿಯ ಪುಸ್ತಕಗಳೂ ಸಿಗಲಿವೆ. ಇಲ್ಲಿಗೆ ಬರಲು ಯಾವುದೇ ನಿರ್ಬಂಧಗಳಿಲ್ಲ. ಪುಸ್ತಕಪ್ರಿಯನಾಗಿರಬೇಕು ಎಂಬುದೊಂದೇ ಕಟ್ಟಳೆ. ಬರುವಾಗ ಒಂದಾದರೂ ಪುಸ್ತಕ ತನ್ನಿ ಎಂಬುದು ಪ್ರೀತಿಯ ಕಂಡಿಷನ್. ಬರುತ್ತೀರಲ್ವಾ...?

೧೭ರಂದು ಬಸವನಗುಡಿಯಲ್ಲಿಪುಸ್ತಕ ಪರಿಷೆನಡೆಯಲಿದೆ. ‘ಸೃಷ್ಟಿ ವೆಂಚರ್ಸ್ಸಂಸ್ಥೆಯ ಸಾಹಸವಿದು. ‘ತಮಗೊಂದು ಪುಸ್ತಕ ಉಚಿತವಾಗಿ ಮತ್ತು ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿಎಂಬುದು ಇದರ ಘೋಷಣೆ.

ಬಸವನಗುಡಿಯಲ್ಲಿ .೧೭ರಂದು ಬೆಳಗ್ಗೆ೧೦ ಗಂಟೆಗೆ ಪುಸ್ತಕ ಪರಿಷೆಯನ್ನು ಸಾಹಿತಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಉದ್ಘಾಟಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಕಾರದ ಅಧ್ಯಕ್ಷ ಡಾ.ಸಿದಟಛಿಲಿಂಗಯ್ಯ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಪರಿಷೆ ನಡೆಯುವ ಸ್ಥಳ: ನಂ.೮೧, ೧ನೇ ಮಹಡಿ,(ಪುಳಿಯೊಗರೆ ಪಾಯಿಂಟ್ ಮೇಲೆ), ..ಟಿ.ರಸ್ತೆ, ಎನ್.ಆರ್.ಕಾಲನಿ, ಬಸವನಗುಡಿ, ಬೆಂಗಳೂರು
-ಭಾಗ್ಯ ನೆಲ್ಲಿಕ್ಕಳಯ

Wednesday, December 30, 2009

ಅವರು ಮತ್ತೆ ಹುಟ್ಟಿ ಬರಲಿ...




ಕನ್ನಡ ಮೇರು ವ್ಯಕ್ತಿಗಳಾದ ಡಾ.ಸಿ.ಅಶ್ವತ್ಥ್ ಹಾಗೂ ಡಾ. ವಿಷ್ಣುವರ್ಧನ್ ಇನ್ನಿಲ್ಲವಾಗಿದ್ದಾರೆ... ಅವರಿಬ್ಬರೂ ಮತ್ತೆ ಹುಟ್ಟಿಬರಲಿ...
ಅವರನ್ನು ತನ್ನೂರಿಗೆ ಕರೆದೊಯ್ದ ಜವರಾಯನಿಗೆ ನನ್ನ
ದೊಂದು ಶಾಪ...



Wednesday, December 2, 2009

ಪುಸ್ತಕ ಬಿಡುಗಡೆ...

ರೈತ ಹೋರಾಟಗಾರ, ಎಂದು ಧಿಕಾರ ಗದ್ದುಗೆ ಕಡೆ ಮುಖ ಮಾಡದೆ ಕೇವಲ ರೈತರ ಏಳಿಗೆಗಾಗಿ ಅವರ ಒಗ್ಗಟ್ಟಿಗಾಗಿ ಶ್ರಮಿಸಿದ ದೀಮಂತ ನಾಯಕ ಕಡಿದಾಳು ಶಾಮಣ್ಣ ಅವರ " ದಶಕ" ಪುಸ್ತಕ ಬುದುಗದೆ ಸಮಾರಂಭ.











ಪುಸ್ತಕ ಬಿಡುಗಡೆ ಮುನ್ನ...













ದೇವನೂರು ಮಹಾದೇವ ಅವರು ಮಾತನಾಡುತ್ತಿರುವುದು.













ಕಡಿದಾಳು ಶಾಮಣ್ಣ ಅವರ ತಾಯಿಗೆ ಸನ್ಮಾನ..













ಸಮಾರಂಭಕ್ಕೆ ಆಗಮಿಸಿದ ಸಭಿಕರು...












ಪ್ರೊ. ರವಿವರ್ಮ ಕುಮಾರ ಅವರ ಜೊತೆಗೆ...














ಕಡಿದಾಳು ಶಾಮಣ್ಣ ಅವರ ಜೊತೆ...













ದೇವನೂರು ಮಹಾದೇವ ಹಾಗು ಡಿ.ಎಸ್. ನಾಗಭೂಷಣ್ ಅವರ ಜತೆ ಅಭಿಮಾನಿಗಳು...













ಶಾಮಣ್ಣ ಹಾಗು ದೇವನೂರು ಜೆತೆಗೆ ಅಭಿಮಾನಿಗಳು...

Friday, October 23, 2009

ಅಮ್ಮಾ ನಿನ್ನ ಎದೆ ಹಾಲಲ್ಲಿ ಬೆಳೆಯಲಿ ‘ಅಮೃತ’ ಬಳ್ಳಿ

ಅದು ಅಕ್ಷರಶಃ ಅಮೃತಧಾರೆ. ತಾಯ ಹೃದಯಾಂತರಾಳದಿಂದ ಉಕ್ಕುವ ಆ ವಾತ್ಸಲ್ಯ ಧಾರೆಗೆ ಸರಿಸಮನಾದುದು ಈ ಜಗತ್ತಿನಲ್ಲಿ ಬೇರಾವುದೂ ಸಿಗಲಾರದು. ಜೀವವನ್ನು ಪೊರೆದು ಒಂದಿಡೀ ಬದುಕಿಗೆ ಭದ್ರ ಬುನಾದಿ ಹಾಕಿಕೊಡುವ ಅಮ್ಮನಕ್ಕರೆಯ ಸವಿ ಸಕ್ಕರೆಯ ಆ ಒಂದೊಂದು ಹನಿಯೂ ಈ ಭೂಮಿಯ ಮೇಲೆ ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ. ಅಂಥ ಅಮ್ಮನ ಅತ್ಯಮೂಲ್ಯ ಎದೆ ಹಾಲಿನಿಂದಲೇ ವಂಚಿತರಾಗಿಬಿಟ್ಟರೆ ? ಆ ಜೀವಿ ಕಳಕೊಳ್ಳುವುದಕ್ಕೆ ಬೇರೇನು ಬಾಕಿ ಉಳಿದೀತು ? ಬಹುಶಃ ಇದೀಗ ಮೊಳಕೆಯೊಡೆ ಯುತ್ತಿರುವ ಈ ಕನಸು ಸಾಕಾರಗೊಂಡರೆ ಭಾರತದ ಯಾವ ಮಗುವೂ ತಾಯ ಹಾಲಿಂದ ವಂಚಿತವಾಗಲಾರದು.
ಭಾರತದಲ್ಲಿ ತಾಯಂದಿರಿಗೆ ಸರಿಯಾದ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಅದರ ಫಲವಾಗಿ ಜನಿಸಿದ ೨೪ ಗಂಟೆಗಳಲ್ಲಿ ನಿತ್ಯವೂ ೪ ಲಕ್ಷ ಮಕ್ಕಳು ಕೊನೆಯುಸಿರೆಳೆಯುತ್ತಿದ್ದಾರೆ. ಅದರ ನಡುವೆಯೂ ಬದುಕುವ ಬಹಳಷ್ಟು ಮಕ್ಕಳಿಗೆ ಮತ್ತೆ ಎದುರಾಗುವ ಸಮಸ್ಯೆ ಎದೆಹಾಲು !
ಇಂಥ ಸೂಕ್ಷ್ಮ ಸಮಸ್ಯೆಯನ್ನು ಪರಿಹರಿಸಲು ಗುಜರಾತ್‌ನಲ್ಲಿ ‘ತಾಯಿ ಎದೆಹಾಲು ಕೇಂದ್ರ’ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಯೊಬ್ಬ ತಾಯಂದಿರೂ ತಮ್ಮ ಮಕ್ಕಳಿಗೆ ಆಗಿ ಉಳಿಯುವ ಬಹುಪಾಲು ಹಾಲನ್ನು ಈ ಕೇಂದ್ರಕ್ಕೆ ತಂದು ನೀಡುತ್ತಾರೆ !! ಆಶ್ಚರ್ಯವಾದರೂ ಇದು ನಿಜ.
ಇದೊಂದು ವಿನೂತನ ಪ್ರಯೋಗ. ಆದರೆ ಪ್ರಪಂಚದ ಪರಿವೆಯೇ ಇಲ್ಲದೆ ಭುವಿಗೆ ಬರುವ ಮಗುವಿನ ಪುಟ್ಟ ಹೊಟ್ಟೆಯನ್ನೂ ತುಂಬಿಸಲಾಗದೆ ಲಕ್ಷಾಂತರ ತಾಯಂದಿರು ಕೊರಗುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಗುಜರಾತ್‌ನಲ್ಲಿ ‘ಮದರ್ ಮಿಲ್ಕ್ ಬ್ಯಾಂಕ್’ ನಿರ್ಮಾಣ ಮಾಡಲಾಗಿದೆ. ಈ ಬ್ಯಾಂಕ್‌ನ ಹಾಲು ಕುಡಿದು ಇಂದು ಅದೆಷ್ಟೊ ಮಕ್ಕಳು ಹಸಿವು ನೀಗಿಸಿಕೊಳ್ಳುತ್ತಿವೆ.
ಸರಿಯಾಗಿ ಬೆಳವಣಿಗೆಯಾಗದ, ಅನಾರೋಗ್ಯದಿಂದ ಬಳಲುವ ಹಾಗೂ ದತ್ತು ಪಡೆದ ಮಕ್ಕಳಿಗೆ, ಎದೆ ಹಾಲಿಲ್ಲದೆ ಬಳಲುವ ತಾಯಂದಿರ ಮಕ್ಕಳಿಗೆ, ಅನಾಥ ಶಿಶುಗಳಿಗೆ ಇಂಥ ‘ದೂರದ ತಾಯಂದಿರು’ ತಮ್ಮ ಎದೆ ಹಾಲನ್ನು ಧಾರೆ ಎರೆಯುತ್ತಿದ್ದಾರೆ. ಎಲ್ಲೋ ಹುಟ್ಟಿ ಬಳಲುವ ಮಕ್ಕಳು ಇದನ್ನು ಕುಡಿಯುವ ಮೂಲಕ ಚೇತರಿಸಿಕೊಳ್ಳುತ್ತಿವೆ...
ಇದು ಇದೇ ಮೊದಲಲ್ಲ, ದಕ್ಷಿಣ ಅಮೇರಿಕದಲ್ಲಿ ಕನಿಷ್ಠ ೬ ಮಿಲಿಯನ್ ತಾಯಿ ಎದೆ ಹಾಲು ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಈ ಬ್ಯಾಂಕ್‌ಗಳು ಮೊಲೆ ಹಾಲು ದಾನ ಮಾಡುವ ತಾಯಂದಿರಿಗೆ ಗೌರವಧನವನ್ನೂ ನೀಡುತ್ತಿವೆ.
ಆರೋಗ್ಯವಂತ ತಾಯಂದಿರಿಂದ ಪಡೆದ ಮೊಲೆ ಹಾಲನ್ನು ಈ ಬ್ಯಾಂಕ್‌ಗಳು ಪರೀಕ್ಷಿಸಿ, ಶೇಖರಿಸಿಡುತ್ತವೆ. ಆನಂತರ ನಿಗದಿತ ತಜ್ಞರನ್ನು ಸಂಪರ್ಕಿಸಿ ಅಗತ್ಯವಿರುವ ಮಕ್ಕಳಿಗೆ ಪೂರೈಕೆ ಮಾಡುತ್ತವೆ. ಆ ಮೂಲಕ ಕಣ್ಣಿಗೆ ಕಾಣದ, ದೂರದ ಯಾವುದೋ ಮಗುವಿಗೆ ಇನ್ನಾವುದೋ ಮಹಿಳೆ ‘ತಾಯಿ’ಯಾಗುವ ಭಾಗ್ಯ ಒದಗಿಸುತ್ತಿವೆ.
ಈ ‘ಮದರ್ ಮಿಲ್ಕ್ ಬ್ಯಾಂಕ್’ ಮೊದಲು ಆರಂಭವಾಗಿದ್ದು ೧೯೮೫ರಲ್ಲಿ. ಕೊಲೊರಾಡೊದಲ್ಲಿ ಮೊಟ್ಟ ಮೊದಲ ಬಾರಿ ಮದರ್ ಮಿಲ್ಕ್ ಕ್ಲಿನಿಕ್ ಆರಂಭವಾದಾಗ ಆರಂಭದಲ್ಲಿ ಕೆಲವರು ಮೂಗು ಮುರಿದರೂ ಆನಂತರ ಅದೇ ಜನಮನ್ನಣೆ ಗಳಿಸಿತು. ಮುಂದಿನ ದಿನಗಳಲ್ಲಿ ಅದೇ ‘ಮದರ್ ಮಿಲ್ಕ್ ಬ್ಯಾಂಕ್’ ಆಗಿ ಮಾರ್ಪಾಡಾಯಿತು.
ಅಲ್ಲಿಂದ ಮುಂದೆ ಅಮೆರಿಕದಲ್ಲಿ ೬, ಉತ್ತರ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋದಲ್ಲಿ ತಲಾ ಒಂದೊಂದು ಎದೆ ಹಾಲಿನ ಬ್ಯಾಂಕ್‌ಗಳಿವೆ. ಆನಂತರ ವಿಶ್ವದ ೫ ದೇಶಗಳ ೪೬ ರಾಜ್ಯಗಳಲ್ಲಿ ಎದೆ ಹಾಲು ಕೆಂದ್ರಗಳ ಬಗ್ಗೆ ನುರಿತ ತಜ್ಞರಿಂದ ಮಾಹಿತಿ ಹಾಗೂ ತರಬೇತಿ ಮೂಲಕ ತಿಳಿ ಹೇಳಲಾಗುತ್ತಿದೆ.
ಗುಜರಾತ್‌ನಲ್ಲಿ ನ್ಯಾಷನಲ್ ಡೈರಿ ಡೆವಲಪ್‌ಮೆಂಟ್ ಬೋರ್ಡ್(ಎನ್‌ಡಿಡಿಬಿ) ಹಾಗೂ ಅಮುಲ್ ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೇಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ಸಹಯೋಗದೊಂದಿಗೆ ಎದೆ ಹಾಲಿನ ಪ್ಯಾಕ್‌ಗಳನ್ನು ತಯಾರಿಸಲಾಗುತ್ತಿದೆ. ಗಾಂನಗರದಲ್ಲಿ ತಯಾರಾಗುವ ಈ ‘ಅಮುಲ್’ ಎದೆಹಾಲನ್ನು ೪೫೦೦ ಡೀಲರ‍್ಸ್ ಮೂಲಕ ರಾಜ್ಯಾದ್ಯಂತ ವಿತರಣೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಈ ಎದೆ ಹಾಲು ಲಭ್ಯವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಜಿಸಿಎಂಎಂಎಫ್‌ನ ಪ್ರಧಾನ ವ್ಯವಸ್ಥಾಪಕ ಆರ್.ಎಸ್. ಸೋ.
೨೦ ವರ್ಷಗಳಿಂದ ‘ಅಮುಲ್’ ಮಾರುಕಟ್ಟೆಯಲ್ಲಿದ್ದು, ಈಗ ೨೦೦೫ರಲ್ಲಿ ‘ಸುಗಮ್’ ಎಂಬ ಹೊಸ ಬ್ರಾಂಡ್ ನೇಮ್‌ನೊಂದಿಗೆ ಮತ್ತೊಂದು ಪರಿಷ್ಕೃತ ಎದೆ ಹಾಲಿನ ಪ್ಯಾಕ್‌ಗಳನ್ನು( ಅಲಹಾಬಾದ್‌ನಲ್ಲಿ ಶೇಖರಣೆ) ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಲಿನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಇಲ್ಲಿನ ಜಿಸಿಎಂಎಂಎಫ್ ಹೊಸದಿಲ್ಲಿಯ ಮದರ್ ಡೈರಿ ಇಂಡಿಯಾ ಲಿಮಿಟೆಡ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಇದರಿಂದ ‘ಸುಗಮ್’ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇಷ್ಟು ದಿನ ರಕ್ತದಾನ, ನೇತ್ರದಾನ ಸೇರಿದಂತೆ ಮನುಷ್ಯನ ದೇಹದ ಅಮೂಲ್ಯವಾದ ನಾನಾ ಭಾಗಗಳನ್ನು ದಾನ ಮಾಡುವುದು ವಾಡಿಕೆಯಾಗಿತ್ತು. ಆದರೆ ಸದ್ಯದ ಮಟ್ಟಿಗೆ ಹಾಗೂ ಭಾರತದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸೋರಿ ಹೋಗುತ್ತಿರುವ ಮಾನವ ಸಂಪನ್ಮೂಲವನ್ನು ಸರಿಯಾದ ರೀತಿ ಸದ್ಬಳಕೆ ಮಾಡಿಕೊಳ್ಳಬೇಕಾದರೆ ಇಂಥ ‘ಎದೆ ಹಾಲು ದಾನ ಕೂಡ ಅತ್ಯಮೂಲ್ಯ’.
ಆ ಮೂಲಕ ಹುಟ್ಟಿದ ಮರುಕ್ಷಣದಿಂದಲೇ ಹಸಿವಿನ ರುಚಿ ನೋಡುತ್ತಲೇ ನೊಂದು, ಬೆಂದು ಬದುಕುವ ಅಥವಾ ಅರ್ಧಕ್ಕೇ ಕಣ್ಣು ಮುಚ್ಚುವ ಮಕ್ಕಳಿಗೆ ಬದುಕು, ಜೀವ ಎರಡೂ ದೊರೆತಂತಾಗುತ್ತದೆ. ಒಂದು ಮಗುವಿಗೆ ಹೆಣ್ಣು ಜನ್ಮ ನೀಡಿ ‘ತಾಯಿ’ ಎನಿಸಿಕೊಳ್ಳಬಹುದು; ಆದರೆ ಅದೇ ಮಗುವಿಗೆ ಆಕೆಯಿಂದ ಎದೆ ಹಾಲು ನೀಡಲಾಗಲಿಲ್ಲ ಎಂದರೆ ಆ ತಾಯಿಯ ಕರುಳಿನ ಕೂಗು ಅರ್ಥವಾಗುವುದಾದರೂ ಯಾರಿಗೆ? ಅದು ಮತ್ತೊಬ್ಬ ತಾಯಿಗೆ ಮಾತ್ರ.
ಆದ್ದರಿಂದ ಪ್ರತಿಯೊಬ್ಬ ತಾಯಂದಿರೂ ಕೂಡ ತಮ್ಮ ಮಗುವಿಗೆ ಉಣಬಡಿಸಿ ಉಳಿಯುವ ಹಾಲನ್ನು ಹಿಂಡಿ ಅದನ್ನು ಒಂದು ಬಾಟಲಿಯಲ್ಲಿ ಭದ್ರವಾಗಿ ಶೇಖರಿಸಿ ಇಂಥ ‘ಮದರ್ ಮಿಲ್ಕ್ ಬ್ಯಾಂಕ್’ಗಳಿಗೆ ನೀಡುವುದು ಉತ್ತಮ. ಇದರಿಂದ ಅವರು ಕಳೆದುಕೊಳ್ಳುವುದು ಏನೂ ಇಲ್ಲ. ಜತೆಗೆ ನೆನಪಿರಲಿ, ಇದು ಕೃತಕವಾಗಿ ತಯಾರಿಸುವ ಪೇಯವಲ್ಲ. ನಿಜವಾದ ‘ಅಮೃತ’. ಇಂಥ ಕೇಂದ್ರಗಳು ಕರ್ನಾಟಕದಲ್ಲೂ ಸ್ಥಾಪನೆಯಾದರೆ ಒಳ್ಳೆಯದು. ಆ ಮೂಲಕ ರಾಜ್ಯದ ಬೀದಿ ಬೀದಿಗಳಲ್ಲಿ ಅನಾಥವಾಗಿ, ಅಪೌಷ್ಟಿಕತೆಯಿಂದ ಪ್ರಪಂಚ ನೋಡುವ ಲಕ್ಷಾಂತರ ಎಳೆಯ ಕಂದಮ್ಮಗಳಿಗೆ ಮಹಾತಾಯಂದಿರ ಅಮೂಲ್ಯವಾದ ಎದೆ ಹಾಲು ಜೀವನ ಜ್ಯೋತಿಯಾಗಲಿ...
ಇದು ನೆನಪಿರಲಿ...
  • *ನಿಮ್ಮ ಮಗು ಮೊಲೆ ಹಾಲು ಕುಡಿಯುವುದನ್ನು ಬಿಟ್ಟಿದ್ದರೆ ನೀವು ನಿಮ್ಮ ಹಾಲನ್ನು ದಾನ ಮಾಡಬಹುದು.
  • *ಹಾಲು ದಾನ ಮಾಡುವುದರಿಂದ ನಿಮ್ಮ ಎದೆಯಲ್ಲಿ ಹಾಲು ಉತ್ಪಾದನೆ ನಿಲ್ಲುವುದಿಲ್ಲ.
  • *ನಿಮ್ಮ ದೇಹದಲ್ಲಿ ಎದೆ ಹಾಲಿನ ಪ್ರಮಾಣ ಹೆಚ್ಚಿದ್ದರೂ ಅಥವಾ ನಿಮ್ಮ ಮಗುವಿಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚಿದ್ದರೂ ದಾನ ಮಾಡಬಹುದು.
  • *ಒಂದು ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿದ್ದ ಆರೋಗ್ಯವಂತ ತಾಯಂದಿರು ಹಾಲು ದಾನ ಮಾಡಬಹುದು.
  • * ದಾನ ಮಾಡುವ ತಾಯಂದಿರು ಮದ್ಯಪಾನ, ಧೂಮಪಾನ, ಅತಿಯಾದ ಔಷಧ ಸೇವನೆ, ಗಿಡಮೂಲಿಕೆ ಅಥವಾ ಮಾದಕ ವಸ್ತುಗಳಿಗೆ ಅಂಟಿಕೊಂಡಿರಬಾರದು.
  • * ದಾನ ಮಾಡುವ ಮುನ್ನ ಬ್ಯಾಂಕ್‌ಗಳಲ್ಲಿ ನಿಮ್ಮ ರಕ್ತ ಹಾಗೂ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ನೀವು ಆರೋಗ್ಯವಾಗಿದ್ದರೆ ಮಾತ್ರ ದಾನಕ್ಕೆ ಅವಕಾಶ.
  • *ರಕ್ತ ಪರೀಕ್ಷೆಯ ಜತೆಗೆ ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಸಿ, ಎಚ್‌ಐವಿ ೧ ಮತ್ತು ೨, ಎಚ್‌ಟಿಎಲ್‌ವಿ ಪರೀಕ್ಷೆ ಮಾಡಲಾಗುತ್ತದೆ.
  • *ಯಾವ ಪರೀಕ್ಷೆಗೂ ಎದೆ ಹಾಲು ದಾನಿಗಳಿಂದ ಹಣ ಪಾವತಿಸಿಕೊಳ್ಳುವುದಿಲ್ಲ.
  • *ನಿಮ್ಮ ಮಗು ಆಸ್ಪತ್ರೆಯಲ್ಲಿದ್ದರೆ ಅಥವಾ ನಿಮ್ಮ ಎದೆ ಹಾಲನ್ನು ಸಂಪೂರ್ಣವಾಗಿ ಮಗು ಕುಡಿಯದಿದ್ದಾಗ ಅದನ್ನು ಅನಾವಶ್ಯಕವಾಗಿ ಹಾಳು ಮಾಡಬೇಡಿ.

ತಾಯಂದಿರಿಗೊಂದು ಟಿಪ್ಸ್
ನಿಮ್ಮ ಮಗು ಎಷ್ಟು ಹಾಲು ಕುಡಿಯುತ್ತದೆ ಎಂದು ಮೊದಲು ತಿಳಿದುಕೊಳ್ಳಿ. ನೀವು ಉದ್ಯೋಗಕ್ಕೆ ಹೋಗುವವರಾದರೆ ನಿಮ್ಮ ಎದೆ ಹಾಲನ್ನು ಒಂದು ಫೀಡಿಂಗ್ ಬಾಟಲಿಯಲ್ಲಿ ತುಂಬಿ ಅದನ್ನು ನಿಮ್ಮ ಮಗು ಮನೆಯಲ್ಲಿದ್ದರೆ ಮನೆಯವರಿಗೆ ತೋರಿಸಿ ಹೋಗಿ, ಇಲ್ಲವೇ ಡೇ ಕೇರ್‌ಗೆ ಮಗುವನ್ನು ಬಿಡುವುದಾದರೆ ಮಗುವಿನ ಜತೆ ಕೊಟ್ಟುಬಿಡಿ. ಆಗ ನಿಮ್ಮ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ನೀವು ಎಲ್ಲೇ ಇದ್ದರೂ ನಿಮ್ಮ ಮಗು ನಿಮ್ಮ ಎದೆ ಹಾಲನ್ನೇ ಕುಡಿದು ಬೆಳೆಯುತ್ತದೆ. ಆದರೆ ಎದೆ ಹಾಲನ್ನು ಹಾಳು ಮಾಡಬೇಡಿ. ಅದಕ್ಕೆ ಒಂದು ಜೀವವನ್ನೊ ಪೊರೆಯುವ ಶಕ್ತಿ ಇದೆ. ನಿಮ್ಮ ಎದೆ ಹಾಲು ಅಮೃತಕ್ಕೆ ಸಮಾನ ಎಂಬುದನ್ನು ಮರೆಯದಿರಿ. ಅದು ನೀಡುವ ಆರೋಗ್ಯವನ್ನು ಯಾವುದೇ ಹಾಲು ಅಥವಾ ಸಿದ್ಧ ಆಹಾರವೂ ನೀಡಲಾರದು.
Powered By Blogger